112.18 MT ಗೋಧಿ ಉತ್ಪಾದನೆಯಿಂದ ಭಾರತ ದಾಖಲೆ ಬರೆಯಲಿದೆ: ಕೃಷಿ ಸಚಿವಾಲಯ
ದೇಶದದಲ್ಲಿ ಹಿಂಗಾರು ಅವಧಿಯಲ್ಲಿ ಪ್ರಮುಖ ಬೆಳೆಯಾದ ಗೋಧಿ ಉತ್ಪಾದನೆಯು 2022-23 ಬೆಳೆ ವರ್ಷದಲ್ಲಿ (ಜುಲೈ-ಜೂನ್) ದಾಖಲೆ ಮಟ್ಟದಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಕೃಷಿ ಸಚಿವಾಲಯ ಅಂದಾಜಿಸಿದೆ.
ಬೆಂಗಳೂರು, ಫೆಬ್ರವರಿ 15: ದೇಶದದಲ್ಲಿ ಹಿಂಗಾರು ಅವಧಿಯಲ್ಲಿ ಪ್ರಮುಖ ಬೆಳೆಯಾದ ಗೋಧಿ ಉತ್ಪಾದನೆಯು 2022-23 ಬೆಳೆ ವರ್ಷದಲ್ಲಿ (ಜುಲೈ-ಜೂನ್) ದಾಖಲೆ ಮಟ್ಟದಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಕೃಷಿ ಸಚಿವಾಲಯ ಅಂದಾಜಿಸಿದೆ.
ದೇಶದ ಕೆಲವು ರಾಜ್ಯಗಳಲ್ಲಿ ಶಾಖದ ಅಲೆಯಿಂದಾಗಿ ಹಿಂದಿನ ವರ್ಷ ಅಂದರೆ 2021-22ರಲ್ಲಿ ಕೇವಲ 107.74 ಮಿಲಿಯನ್ ಟನ್ ನಷ್ಟು ಮಾತ್ರ ಗೋಧಿ ಉತ್ಪಾದನೆ ಆಗಿತ್ತು. ಅದು ಈ ಭಾರಿ 112.18 ಮಿಲಿಯನ್ ಟನ್ಗಳಷ್ಟು ಏರಿಕೆ ಕಂಡು ಹೊಸ ದಾಖಲೆ ಬರೆಯಲಿದೆ ಎಂದು ಕೃಷಿ ಸಚಿವಾಲಯ ಬಿಡುಗಡೆ ಮಾಡಿದ ಆಹಾರ ಧಾನ್ಯಗಳ ಉತ್ಪಾದನೆಯ ಎರಡನೇ ಅಂದಾಜು ವರದಿ ತಿಳಿಸಿದೆ.
2020-21 ಬೆಳೆ ಅವಧಿಯಲ್ಲಿ ಪ್ರಮುಖ ರಾಬಿ ಬೆಳೆ ಗೋಧಿಯು 109.59 ಮಿಲಿಯನ್ ಟನ್ ಉತ್ಪಾದನೆ ಕಂಡಿತ್ತು. 2022-23 ಬೆಳೆ ವರ್ಷದಲ್ಲಿ ಗೋಧಿ ಉತ್ಪಾದನೆಯು 112.18 ಮಿಲಿಯನ್ ಟನ್ ಆಗುವ ಸಾಧ್ಯತೆ ಇದೆ. ಇದು ಹಿಂದಿನ ವರ್ಷದ ಉತ್ಪಾದನೆಗಿಂತ 4.40 ಮಿಲಿಯನ್ ಟನ್ ಹೆಚ್ಚು ಎನ್ನಲಾಗಿದೆ.

2022-23ರಲ್ಲಿ (ಜುಲೈ-ಜೂನ್) ರಾಬಿ ಋತುವಿನಲ್ಲಿ ಗೋಧಿ ಬೆಳೆಯನ್ನು 343.23 ಲಕ್ಷ ಹೆಕ್ಟೇರ್ಗಳ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ. ಅದರ ಹಿಂದಿನ ವರ್ಷ 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಅಲ್ಲದೇ ಈ ಭಾರಿ ವಾತಾವರಣದಲ್ಲಿನ ಹವಾಮಾನ ಪರಿಸ್ಥಿತಿ ಉತ್ತಮವಾಗಿದೆ.
ಹೆಚ್ಚೆಚ್ಚು ಗೋಧಿ ಬೆಳೆ ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಮಧ್ಯ ಪ್ರದೇಶಕ್ಕೆ ಈಗಾಗಲೇ ಗೋಧಿ ಕೊಯ್ಲಿಗೆ ಬರಲು ಸಿದ್ಧವಾಗಿದೆ. 2022-23 ರಾಬಿ ಬೆಳೆಯ ವರ್ಷದಲ್ಲಿ ಆಹಾರಧಾನ್ಯಗಳು ಒಟ್ಟು ಉತ್ಪಾದನೆಯು 323.55 ಮಿಲಿಯನ್ ಟನ್ಗಳಷ್ಟು ಆಗುವ ಮೂಲಕ ದಾಖಲೆ ಬರೆಯಲಿದೆ ಎಂದು ಸರ್ಕಾರ ನಿರೀಕ್ಷೆ ಇಟ್ಟುಕೊಂಡಿದೆ.

ಈ ಒಟ್ಟು ರಾಬಿ ಬೆಳೆಗಳ ಉತ್ಪಾದನೆಯು ಹಿಂದಿನ ವರ್ಷಕ್ಕಿಂತಲೂ ಸರಿಸುಮಾರು 7.93 ಮಿಲಿಯನ್ ಟನ್ಗಳಷ್ಟು ಅತ್ಯಧಿಕ ಎಂದು ಸಚಿವಾಲಯ ತಿಳಿಸಿದೆ.
-
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
International Women's Day 2026: ಸ್ತ್ರೀ ಶಕ್ತಿಗೊಂದು ಗೌರವದ ನಮನ: ಮಹಿಳಾ ದಿನಾಚರಣೆಯ ಇತಿಹಾಸ, ಮಹತ್ವ ತಿಳಿಯಿರಿ -
ಎಲ್ಪಿಜಿ ಸಿಲಿಂಡರ್ ದರ 60 ರೂ ಏರಿಕೆ: ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ -
ಧುರಂಧರ್ 2 ಟ್ರೈಲರ್ ಔಟ್: ರಕ್ತ ಚರಿತ್ರೆ ಬರೆಯಲಿದೆ ಸಿನಿಮಾ, ಭರ್ಜರಿ ಕಲೆಕ್ಷನ್ ನಿರೀಕ್ಷೆ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ












Click it and Unblock the Notifications