ಇಂದಿನಿಂದ ಮನೆಬಾಗಿಲಿಗೆ ಹಾಪ್ಕಾಮ್ಸ್ ಸೇವೆ
ಮನೆಬಾಗಿಲಿಗೆ ತರಕಾರಿ, ಹಣ್ಣು ಅಗತ್ಯವಸ್ತುಗಳನ್ನು ತಲುಪಿಸುವ ಹಾಪ್ಕಾಮ್ಸ್ ನ ಮಹತ್ವದ ಆನ್ಲೈನ್ ಸೇವೆ ಬೆಂಗಳೂರಿನ ಜಯನಗರ ಮತ್ತು ಇಂದಿರಾನಗರಗಳಲ್ಲಿ ಪ್ರಾಯೋಗಿಕವಾಗಿ ಇಂದಿನಿಂದ ಆರಂಭವಾಗುತ್ತಿದೆ.
ಬೆಂಗಳೂರು, ಏಪ್ರಿಲ್ 6: ಮನೆಬಾಗಿಲಿಗೆ ತರಕಾರಿ, ಹಣ್ಣು ಅಗತ್ಯವಸ್ತುಗಳನ್ನು ತಲುಪಿಸುವ ಹಾಪ್ಕಾಮ್ಸ್ ನ ಮಹತ್ವದ ಆನ್ಲೈನ್ ಸೇವೆ ಇಂದಿನಿಂದ ಆರಂಭವಾಗುತ್ತಿದೆ.
ಪ್ರಾಯೋಗಿಕವಾಗಿ ಬೆಂಗಳೂರಿನ ಜಯನಗರ ಮತ್ತು ಇಂದಿರಾನಗರಗಳಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿದೆ. ಯುನರವಿ ಎಂಬ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಹಾಪ್ಕಾಮ್ಸ್ ಈ ಸೇವೆ ಆರಂಭಿಸಿದೆ.

ಎರಡೂ ನಗರಗಳಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬಂದರೆ ಇದನ್ನು ನಗರದಾದ್ಯಂತ ವಿಸ್ತರಿಸುವ ಯೋಜನೆಯನ್ನು ಹಾಪ್ಕಾಮ್ಸ್ ಹಾಕಿಕೊಂಡಿದೆ. ಗ್ರಾಹಕರು 200 ರೂಪಾಯಿಯಿಂದ ಆರಂಭಿಸಿ 10,000 ರೂಪಾಯಿವರಗಿನ ವಸ್ತುಗಳನ್ನು ಖರೀದಿಸಬಹುದು. ಖರೀದಿಸಿದ 24 ಗಂಟೆಗಳೊಳಗೆ ವಸ್ತುಗಳು ಮನೆಬಾಗಿಲಿಗೆ ಬರಲಿವೆ.
ಸಕಾಲಕ್ಕೆ ಪದಾರ್ಥಗಳನ್ನು ಗ್ರಾಹಕರಿಗೆ ತಲುಪಿಸಿ ಮನಗೆಲ್ಲುವುದು ಹಾಪ್ಕಾಮ್ಸ್ ಯೋಜನೆಯಾಗಿದೆ. ಇದಕ್ಕಾಗಿ ಜಯನಗರ ಮತ್ತು ಇಂದಿರಾನಗರದಲ್ಲಿ 3-4 ಪಾಯಿಂಟ್ಗಳನ್ನು ತೆರೆಯಲಾಗುತ್ತದೆ. ಈ ಪಾಯಿಂಟ್ಗಳಿಂದ ಪದಾರ್ಥಗಳನ್ನು ಮನೆಬಾಗಿಲಗೆ ತಲುಪಿಸಲಾಗುತ್ತದೆ.
ಈ ಯೋಜನೆಯಲ್ಲಿ ಯುನರವಿ 20 ಲಕ್ಷ ಹೂಡಿಕೆ ಮಾಡಿದ್ದು ವಾಹನಗಳ ಒದಗಿಸುವ ಜವಾಬ್ದಾರಿಯೂ ಸಂಸ್ಥೆಯದ್ದೇ ಆಗಿದೆ. ಆನ್ಲೈನ್ ಸೇವೆಯಿಂದ ಶೇಕಡಾ 10 ರಷ್ಟು ಮಾರಾಟ ವೃದ್ಧಿಯಾಗುವ ಆಶಯವನ್ನು ಹಾಪ್ ಕಾಮ್ಸ್ ಹೊಂದಿದೆ.
ಸದ್ಯ ದಿನಕ್ಕೆ 30 ಲಕ್ಷ ವಹಿವಾಟಾಗುತ್ತಿದ್ದು, ಎಂಟಿಆರ್, ಕೆಎಂಎಫ್ ಉತ್ಪನ್ನಗಳ ಜತೆಗೆ ಮಿನರಲ್ ವಾಟರ್ ಗಳನ್ನೂ ಹಾಪ್ ಕಾಮ್ಸ್ ಗ್ರಾಹಕರಿಗೆ ಪೂರೈಸುತ್ತಿದೆ.
ಪೂರೈಕೆ ವೆಚ್ಚ ಎಷ್ಟು?
ಸದ್ಯ 200 -500 ರೂಪಾಯಿ ವರೆಗಿನ ಖರೀದಿಗೆ 20 ರೂಪಾಯಿ ಪೂರೈಕೆ ವೆಚ್ಚ ನೀಡಬೇಕು. 500 ರಿಂದ 10,000 ವರೆಗಿನ ಖರೀದಿಗೆ 60-80 ರೂಪಾಯಿ ಪೂರೈಕೆ ವೆಚ್ಚವನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ.
ಹಾಪ್ ಕಾಮ್ಸ್ ಲಿಂಕ್ ಇಲ್ಲಿದೆ.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು












Click it and Unblock the Notifications