Get Updates
Get notified of breaking news, exclusive insights, and must-see stories!

ವಿವಿ ಸಾಗರಕ್ಕೆ ಭದ್ರೆ ನೀರು ಹರಿಯಲಿಲ್ಲ, ತೆಂಗು ಉಳಿಯಲಿಲ್ಲ

ಹಿರಿಯೂರು, ಏಪ್ರಿಲ್ 28: ತಾಲೂಕಿನಲ್ಲಿ ಅಂತರ್ಜಲ ಕುಸಿತ ಮಟ್ಟವನ್ನು ಸುಧಾರಿಸಲು ಜಾರಿಗೆ ತಂದ ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆ ರಾಜಕೀಯ ಸುಳಿಗೆ ಸಿಲುಕಿದ ಪರಿಣಾಮವಾಗಿ ಬರಪಿಡಿತ ಪ್ರದೇಶ ಹಿರಿಯೂರಿನ ರೈತರ ತೋಟಗಳು ಒಣಗಿ ನಿಂತಿವೆ.

ತಾಲೂಕಿನ ಮಸ್ಕಲ್, ಆಲೂರು, ಯಳನಾಡು, ಹುಚ್ಚವನಹಳ್ಳಿ,ಆರನಕಟ್ಟೆ, ಜವನಗೊಂಡನಹಳ್ಳಿ ಹೋಬಳಿ, ಧರ್ಮಪುರ ಹೋಬಳಿ, ಐಮಂಗಲ ಗ್ರಾಮದ ರೈತರ ತೋಟಗಳಿಗೆ ನೀರು ಇಲ್ಲದೆ ಸುಮಾರು 20 ಸಾವಿರಕ್ಕೂ ಹೆಚ್ಚು ಎಕರೆಗಳಲ್ಲಿ ತೆಂಗು, ಅಡಿಕೆ, ಬಾಳೆ ಸೇರಿದಂತೆ ಮತ್ತಿತರ ಬೆಳೆಗಳು ಒಣಗಿ ರೈತರ ಬಾಳು ಚಿಂತಾಜನಕ ಸ್ಥಿತಿಯಲ್ಲಿದೆ.

ರೈತರು ಕೃಷಿಯ ಬಗ್ಗೆ ನಂಬಿಕೆ ಕಳೆದುಕೊಂಡಿದ್ದು, ಸತತ ಬರಗಾಲಕ್ಕೆ ತುತ್ತಾಗಿರುವ ಹಿರಿಯೂರು ತಾಲೂಕಿನ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಜೊತೆಗೆ ತಾಲೂಕಿನ ಎಲ್ಲ ಕೆರೆ ಕಟ್ಟೆಗಳು ಕೂಡ ಸಂಪೂರ್ಣ ಒಣಗಿದ್ದು, ಪ್ರಾಣಿ ಪಕ್ಷಿಗಳ ಜೀವನಕ್ಕೂ ಕುತ್ತು ಬಂದಿದೆ.

Farmers gardens are dried up in the Hiriyur taluk

ಈ ಭಾಗದ ರೈತರು ಜೀವನ ನಡೆಸುವುದೇ ಕಷ್ಟಕರವಾಗಿದ್ದು, ಸದ್ಯ ಉಳಿದ ತೋಟಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ ಮೂಲಕ ನೀರು ಹರಿಸುತ್ತಿದ್ದಾರೆ. ಅದು ಕೂಡ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆ ಪ್ರಾರಂಭವಾಗಿ ಸುಮಾರು ಹತ್ತು ವರ್ಷ ಕಳೆದರೂ ತಾಲೂಕಿಗೆ ನೀರು ಬರಲಿಲ್ಲ.

2017ರಲ್ಲಿ ನೀರು ಬರುತ್ತದೆ ಅಂತ ಹೇಳಿದರು. ನಂತರ 2018ಡಿಸೆಂಬರ್ ಅಂತ್ಯದೊಳಗೆ ನೀರು ಬರುತ್ತದೆ ಎಂದು ಬಣ್ಣದ ಮಾತಾಡಿದರು. ಕೊನೆಗೆ 2019 ಮೇ ತಿಂಗಳಲ್ಲಿ ಯಾವುದೇ ಕಾರಣಕ್ಕೂ ನೀರು ನಿಲ್ಲುವುದಿಲ್ಲ. ವಿವಿ ಸಾಗರಕ್ಕೆ ಭದ್ರೆ ಹರಿದು ಬರ್ತಾಳೆ ಅಂತ ಘಂಟಘೋಷವಾಗಿ ಸುಳ್ಳು ಹೇಳಿ, ಕಾಮಗಾರಿ ವೀಕ್ಷಣೆಗೆ ತಂಡೋಪ ತಂಡವಾಗಿ ಜನರನ್ನು ಕರೆದುಕೊಂಡು ಹೋಗಿ ರೈತರಿಗೆ ದಾರಿ ತಪ್ಪಿಸಿದ್ದಾರೆಂದು ಎಲ್ಲರಿಗೂ ತಿಳಿದಿದೆ.

Farmers gardens are dried up in the Hiriyur taluk

ಇತ್ತ ರೈತರು ಆಗ ನೀರು ಬರುತ್ತದೆ, ಈಗ ನೀರು ಬರುತ್ತದೆ ಅಂತ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಆದರೆ ಸದ್ಯ ಆಕಾಶವನ್ನು ಎದುರು ನೋಡುವುದನ್ನು ಬಿಟ್ಟರೆ ಬೇರೆ ದಾರಿ ಇಲ್ಲದಂತಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+