ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರ ನಟರಂತೆ ರೈತ ಮುಖಂಡರಿಗೂ ಸ್ಮಾರಕ ನಿರ್ಮಿಸಿ: ರೈತ ಸಂಘ ಆಗ್ರಹ

|
Google Oneindia Kannada News

ಮೈಸೂರು, ಡಿಸೆಂಬರ್ 8: ಚಿತ್ರ ನಟರಿಗೆ ನಿರ್ಮಾಣ ಮಾಡುವ ಸ್ಮಾರಕ ವಿಚಾರದಲ್ಲಿ ಹೊಸ ವರಸೆಯೊಂದು ಕೇಳಿ ಬಂದಿದೆ. ಸಿನಿಮಾ ನಟರಿಗೆ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ಇದೀಗ ಮತ್ತೊಂದು ಸ್ಮಾರಕ ನಿರ್ಮಾಣದ ಕೂಗು ಕೇಳಿ ಬಂದಿದೆ.

ಚಾಮುಂಡೇಶ್ವರಿಯಲ್ಲಿ ವಿಷ್ಣು ಸ್ಮಾರಕ ನಿರ್ಮಿಸುತ್ತಿರುವುದು ಗೊತ್ತಿರಲಿಲ್ಲ: ಜಿಟಿ ದೇವೇಗೌಡಚಾಮುಂಡೇಶ್ವರಿಯಲ್ಲಿ ವಿಷ್ಣು ಸ್ಮಾರಕ ನಿರ್ಮಿಸುತ್ತಿರುವುದು ಗೊತ್ತಿರಲಿಲ್ಲ: ಜಿಟಿ ದೇವೇಗೌಡ

ನಮ್ಮ ತೆರಿಗೆ ಹಣದಲ್ಲಿ ಸಿನಿಮಾ ನಟರಿಗೆ ಸ್ಮಾರಕ ನಿರ್ಮಾಣ ಮಾಡುತ್ತಾರೆ. ಅದರಂತೆಯೇ ದೇಶದ ಮುನ್ನಡೆಗೆ ಹೆಚ್ಚು ಬೆನ್ನೆಲುಬು ಆಗಿರುವ ರೈತರಿಗೇಕೆ ಈ ಸೌಲಭ್ಯವಿಲ್ಲ. ಸಿನಿಮಾ ನಟರಂತೆ ರೈತ ಮುಖಂಡರಿಗೂ ಸ್ಮಾರಕ ನಿರ್ಮಾಣ ಮಾಡಬೇಕು. ರೈತರ ಮುಖಂಡರ ಸ್ಮಾರಕ ಯಾಕೆ‌ ಮಾಡುತ್ತಿಲ್ಲ.

 ವಿಷ್ಣು ಸ್ಮಾರಕ: ಶಾಸಕ ಮುನಿರತ್ನ ಸಂಧಾನ ಯತ್ನ ವಿಫಲ ವಿಷ್ಣು ಸ್ಮಾರಕ: ಶಾಸಕ ಮುನಿರತ್ನ ಸಂಧಾನ ಯತ್ನ ವಿಫಲ

ಸಿನಿಮಾ‌ ನಟರಿಗೊಂದು ನ್ಯಾಯ..? ರೈತ ಮುಖಂಡರಿಗೊಂದು ನ್ಯಾಯನಾ..? ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ರೈತ ಮುಖಂಡರು ಗರಂ ಆಗಿದ್ದಾರೆ.

Farmers Association has demanded build a memorial to farmer leaders

ಈ ಕುರಿತು ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಪತ್ರ ಬರೆದಿದ್ದಾರೆ. ರೈತ ಮುಖಂಡರುಗಳಾದ ಪ್ರೊ.ಎಂ.ಡಿ ನಂಜುಂಡಸ್ವಾಮಿ, ಸುಂದರೇಶ್, ಕೆ.ಎಸ್ ಪುಟ್ಟಣ್ಣಯ್ಯ ಅವರ ಸ್ಮಾರಕವನ್ನು ಬೆಂಗಳೂರು ನಗರದಲ್ಲಿ ಸರ್ಕಾರದ ವತಿಯಿಂದ ನಿರ್ಮಾಣ ಮಾಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

 ವಿಷ್ಣು ಸ್ಮಾರಕಕ್ಕೆ ಸ್ವಂತ ಜಾಗ ಕೊಡಲು ಮುಂದೆ ಬಂದ ಅಭಿಮಾನಿ ವಿಷ್ಣು ಸ್ಮಾರಕಕ್ಕೆ ಸ್ವಂತ ಜಾಗ ಕೊಡಲು ಮುಂದೆ ಬಂದ ಅಭಿಮಾನಿ

Farmers Association has demanded build a memorial to farmer leaders

ಚಿತ್ರ ನಟರಷ್ಟೆ ನಾಯಕರಾ..? ರೈತ ಮುಖಂಡರು‌ ನಾಯಕರಲ್ಲವೆ..? ರೈತ ಮುಖಂಡರ ಸ್ಮಾರಕ ಮಾಡದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ. ಕಾನೂನು ಹೋರಾಟದ ಜೊತೆಗೆ ಬೇರೆ ರೀತಿಯ ಹೋರಾಟ ಮಾಡುತ್ತೇವೆ ಎಂದು ಕುರುಬೂರು ಶಾಂತಕುಮಾರ್ ಸರ್ಕಾರಕ್ಕೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

English summary
Farmers' Association has demanded build a memorial to farmer leaders like film actors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X