ರೈತರ ಸ್ನೇಹಿ : ಸೋಲಾರ್ ಕೀಟನಾಶಕ ಯಂತ್ರ
ಬೆಂಗಳೂರು, ಜನವರಿ 02 : ಇತ್ತೀಚಿನ ಕೆಲವು ವರ್ಷಗಳಿಂದ ಮಳೆಯು ನಿರಂತರವಾಗಿ ಕಡಿಮೆಯಾಗುತ್ತಿದ್ದು ಬರಗಾಲವು ಸೃಷ್ಟಿಯಾಗುತ್ತಿದೆ. ರೈತರೆಲ್ಲರು ಮಳೆ, ಅಂತರ್ಜಲ ಕುಸಿತ ಮತ್ತು ನೀರಿನ ಕೊರತೆಯಿಂದ ಬೆಳೆಯಲು ಪ್ರಯತ್ನಿಸಿದ ಬೆಳೆಗಳು ಸರಿಯಾಗಿ ಫಲ ಕೊಡುತ್ತಿಲ್ಲ.
ಭೂಮಿ ಹದ ಮಾಡಲು, ಗೊಬ್ಬರ, ಬೀಜ, ಕೀಟನಾಶಕ ಕೊಂಡುಕೊಳ್ಳುವ ಸಲುವಾಗಿ ಹಣ ಖರ್ಚು ಮಾಡಿ ನಿರಂತರವಾಗಿ ರೈತರೆಲ್ಲರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಹೇಗೋ ಇದ್ದಷ್ಟು, ಸಿಕ್ಕಷ್ಟು ನೀರನ್ನು ಹನಿ ನೀರಾವರಿಯಂತಹ ವ್ಯವಸ್ಥೆಗಳ ಮೂಲಕ ಬಳಕೆ ಮಾಡಲಾಗುತ್ತಿದೆ.
ಹಲವಾರು ಸಮಸ್ಯೆಗಳ ನಡುವೆಯೇ ರೈತರು ಬೆಳೆ ಬೆಳೆಯಲು ಪ್ರಯತ್ನಿಸಿದರೆ ಬೆಳೆಗಳಿಗೆ ಅನೇಕ ಶತ್ರು ಕೀಟಗಳು ಹುಟ್ಟಿಕೊಂಡು ಬೆಳೆಗಳೆಲ್ಲವೂ ಹೆಚ್ಚಾಗಿ ರೋಗಭಾದೆಗೆ ತುತ್ತಾಗಿ ನಾಶವಾಗುತ್ತಿವೆ. ಇತ್ತೀಚೆಗಂತೂ ಬೆಳೆಗಳಿಗೆ ಹಾನಿಮಾಡಲೆಂದೇ ದಿನಕ್ಕೊಂದರಂತೆ ಕೀಟಗಳು ಹುಟ್ಟಿಕೊಳ್ಳುತ್ತಿರುವುದು ಕೃಷಿ ವಿಜ್ಞಾನಿಗಳಿಗೂ ಸವಾಲಾಗಿದೆ.
ಕೆಲವು ರೋಗಗಳ ಕೀಟಗಳುನ್ನು ನಾಶಪಡಿಸಲು ಸರಿಯಾಗಿ ಕೀಟನಾಶಕಗಳು ಸಿಗದೇ, ಒಂದುವೇಳೆ ಸಿಕ್ಕರೂ ತುಂಬಾ ಹೆಚ್ಚು ಬೆಲೆಗೆ ಸಿಗುವುದರಿಂದ ರೈತರೆಲ್ಲರು ಕೀಟನಾಶಕದ ಸಲುವಾಗಿ ತುಂಬಾ ಹಣ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.....

ವಿಷಪೂರಿತ ಆಹಾರ
ರಾಸಾಯನಿಕ ಕೀಟನಾಶಕಗಳ ಬಳಕೆಯಿಂದ ಕೃಷಿ ಭೂಮಿಯು ಸತ್ವವನ್ನು ಕಳೆದುಕೊಂಡು ಕೃಷಿ ಭೂಮಿಯ ಮಣ್ಣು ಮಾಲಿನವಾಗಿ ಕೃಷಿಮಾಡಲು ಯೋಗ್ಯವಲ್ಲದ ಭೂಮಿಯಾಗಿ ಮಾರ್ಪಾಡಾಗುತ್ತಿದೆ. ಮತ್ತು ಬೆಳೆಗಳಿಗೆ ರಾಸಾಯನಿಕ ಕೀಟನಾಶಕಗಳನ್ನು ಸಿಂಪರಣೆ ಮಾಡುವುದರಿಂದ ಆಹಾರವು ಸಹ ವಿಷವಾಗುತ್ತಿದ್ದು ನಾವೆಲ್ಲರೂ ವಿಷಪೂರಿತ ಆಹಾರವನ್ನು ಸೇವಿಸುವ ಸ್ಥಿತಿ ಎದುರಾಗಿದೆ.

ಪರಿಸರ ಸ್ನೇಹಿ ಪದ್ಧತಿ
ರೈತರಿಗೆ ಖುಷಿಯ ವಿಚಾರವೇನೆಂದರೆ ಮಾದರಿ ರೈತರಾದ ಎಂ. ಜಿ. ಕರಿಬಸಪ್ಪ ಅವರು ಬೆಳೆಗಳಿಗೆ ಮಾರಕವಾದಂತಹ ಕೀಟಗಳನ್ನು ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡದೆ ಸಂಪೂರ್ಣವಾಗಿ ನಾಶಪಡಿಸುವ ಉದ್ದೇಶದಿಂದ ಸೋಲಾರ್ ಕೀಟನಾಶಕ ಯಂತ್ರ [SOLAR INSECTS TRAP] ಸಂಶೋಧನೆ ಮಾಡಿದ್ದಾರೆ.

ಪ್ರಯೋಗವು ಯಶಸ್ವಿಯಾಗಿದೆ
ಸೋಲಾರ್ ಕೀಟನಾಶಕ ಯಂತ್ರಗಳನ್ನು ಅನೇಕ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಕೃಷಿ ವಿಜ್ಞಾನಿಗಳು ಒಪ್ಪಿದ್ದಾರೆ. ಈ ಯಂತ್ರದಿಂದಾಗಿ ರಾಸಾಯನಿಕ ಔಷಧಿ ಖರ್ಚು ಉಳಿಯುವುದು. ರೈತನಿಗೆ, ರೈತನಿಂದಲೇ ನೇರವಾಗಿ ಎಲ್ಲಾ ರೈತರಿಗೆ ಕೈಗೆಟಕುವ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ರೈತರು ಯಂತ್ರವನ್ನು ಅಳವಡಿಸಿಕೊಂಡು ಖರ್ಚನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಸಾವಯವ ಬೆಳೆಗಳನ್ನು ಬೆಳೆದು ವಿಷಮುಕ್ತ ಆಹಾರವನ್ನು ಸೇವಿಸಲು ಕೈಜೋಡಿಸುತ್ತಿದ್ದಾರೆ.

ಯಂತ್ರ ಹೇಗೆ ಕೆಲಸ ಮಾಡುತ್ತದೆ?
ಈ ಯಂತ್ರಗಳಲ್ಲಿ ಕೀಟಗಳನ್ನು ಆಕರ್ಷಿಸುವಂತಹ ವಿಶೇಷ ತಂತ್ರಜ್ಞಾನವನ್ನು ಒಳಗೊಂಡಂತಹ ಬೆಳಕು(ಬಲ್ಬ್) ನ್ನು ಇದೆ. ಬಲ್ಪಿನ ಬೆಳಕು ಪ್ರತಿದಿನ ಸಂಜೆ ಸಮಯದಲ್ಲಿ ಕೀಟಗಳು ಬೆಳೆಗಳನ್ನು ನಾಶಪಡಿಸುವ/ ಸಕ್ರಿಯವಾಗಿ ಕ್ರಿಯಾಶೀಲವಾಗುವ ಸಮಯದಲ್ಲಿ ವಿಶೇಷ ಕೀಟಗಳನ್ನು ಆಕರ್ಷಿಸುವ ಬೆಳಕು ಸ್ವಯಂಚಾಲಿತವಾಗಿ ಪ್ರಾರಂಭಗೊಂಡು, ರಾತ್ರಿ ಸಮಯದಲ್ಲಿ ಸ್ವಯಂಚಾಲಿತವಾಗಿ ನಿಲ್ಲುತ್ತದೆ. ಸಂಜೆ ಸುಮಾರು 7 ರಿಂದ ರಾತ್ರಿ 10ರ ತನಕ ಅದು ಚಾಲನೆಯಲ್ಲಿರುತ್ತದೆ.

ಯಂತ್ರದ ಕೆಲಸ ಮಾಡುವ ವಿಸ್ತೀರ್ಣ
ಸೋಲಾರ್ ಕೀಟನಾಶಕ ಯಂತ್ರದ ಬೆಳಕು ಕೀಟಗಳನ್ನು ಆಕರ್ಷಿಸುವ ವಿಸ್ತೀರ್ಣ ಬೆಳೆಗಳ ಎತ್ತರಕ್ಕನುಗುಣವಾಗಿರುತ್ತದೆ. 1.5 ಎಕರೆ ಇಂದ 2.00 ಏಕರೆವರಿಗಿನ ವಿಸ್ತೀರ್ಣದಲ್ಲಿರುವ ಕೀಟಗಳನ್ನು ಆಕರ್ಷಿಸಲಿದೆ.
ಹಣ್ಣು, ತರಕಾರಿ, ತೋಟಗಾರಿಕೆ, ಅರಣ್ಯ ಬೆಳೆಗಳಂತಹ ಎಲ್ಲಾ ಬೆಳೆಗಳಿಗೂ ಇದನ್ನು ಬಳಸಬಹುದು.
ಸೈನಿಕ ಹುಳು, ರಸ ಹೀರುವ ಕೀಟ, ಕಾಯಿ ಕೊರಕ, ಕಾಂಡ ಕೊರಕ, ಬೇರು ಹುಳ, ಥ್ರಿಪ್ಸ್, ಎಲೆ ತಿನ್ನುವ ಕೀಟ, ಧ್ವಮರಿ, ಲೀಫ್ ಮೈನರ್ಸ್, ಮಥ್, ಲಾರ್ವ, ಮುಂತಾದ ಪ್ರತಿಯೊಂದು ಹಾರಾಡುವ ಕೀಟಗಳು ಈ ಯಂತ್ರದಿಂದ ನಾಶವಾಗಲಿದೆ.

ಯಂತ್ರದ ಬಾಳಿಕೆ ಹೇಗೆ?
ಸೋಲಾರ್ ಕೀಟನಾಶಕ ಯಂತ್ರ 3 ರಿಂದ 5 ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಯಂತ್ರ ಬಳಸುವುದರಿಂದ ಕೃಷಿ ಭೂಮಿಯ ಮಣ್ಣು ಮಲಿನತೆ, ಹಾಳಾಗುವುದು ತಡೆಗಟ್ಟಬಹುದು. ವಿಷ ಆಹಾರದ ಸೇವನೆ ತಪ್ಪುವುದು, ರೈತರಿಗೆ 80% ರಿಂದ 95% ವರಿಗೂ ರಾಸಾಯನಿಕ ಕೀಟನಾಶಕಗಳ ಖರ್ಚು ಉಳಿಯುವುದು. ರಾಜ್ಯದಲ್ಲಿ ಸೋಲಾರ್ ಕೀಟನಾಶಕ ಯಂತ್ರದ ಬೆಲೆ 4875 ರೂ. ಆಗಿದೆ.
-
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
LPG ಕೊರತೆ ಎಫೆಕ್ಟ್: ಬೆಂಗಳೂರಿನ ಪಿಜಿಗಳಲ್ಲಿ ಇನ್ಮುಂದೆ ಸಿಗಲ್ಲ ದೋಸೆ, ಚಪಾತಿ -
Bengaluru: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಉಚಿತ ಪ್ರಯಾಣ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ











Click it and Unblock the Notifications