ಮಣ್ಣಿನ ಮಗನಾದ ಕೊಡವೂರು ಗ್ರಾಮದ ಎಂಟರ ಹರೆಯದ ಪುಟ್ಟ ಪೋರ
ಉಡುಪಿ, ಜುಲೈ.12: ಆತ ಎಂಟರ ಹರೆಯದ ಪುಟ್ಟ ಪೋರ. ಸಾಮಾನ್ಯವಾಗಿ ಈ ವಯಸ್ಸಿನ ಮಕ್ಕಳೆಲ್ಲಾ ಈಗಿನ ಟ್ರೆಂಡ್ ಗೆ ತೆರೆದುಕೊಂಡಿರುತ್ತಾರೆ. ಮೊಬೈಲ್ ನಲ್ಲಿ ಗೇಮ್ಸ್, ಟಿವಿಯಲ್ಲಿ ಕಾರ್ಟೂನ್ಸ್ ಅಂತ ತಮ್ಮ ಬಾಲ್ಯ ಕಳೆಯುತ್ತಿರುತ್ತಾರೆ.
ಆದರೆ ಈತ ತುಂಬಾ ಡಿಫರೆಂಟ್. ಎಷ್ಟರ ಮಟ್ಟಿಗೆ ಅಂದರೆ ಸ್ವ ಇಚ್ಛೆಯಿಂದ ಗದ್ದೆಗೆ ಇಳಿದು, ನೇಗಿಲು ಹಿಡಿದು ಉಳುಮೆ ಮಾಡುತ್ತಾನೆ. ಹಾರೆ ಹಿಡಿದು ಗದ್ದೆಯಲ್ಲಿ ನಾಟಿ ಕೆಲಸ ಮಾಡೋರಿಗೆ ಸಹಾಯ ಮಾಡುತ್ತಾನೆ. ಒಟ್ಟಿನಲ್ಲಿ ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡುತ್ತಿದ್ದಾನೆ ಈ ಪುಟ್ಟ ಪೋರ.
ಅಂದಹಾಗೆ ಆ ಪೋರನ ಹೆಸರು ರಿತ್ವಿಕ್. ಉಡುಪಿಯ ಕೊಡವೂರು ಗ್ರಾಮದವನು. ಮಲ್ಪೆಯ ಫ್ಲವರ್ ಆಫ್ ಪ್ಯಾರಡೈಸ್ ಶಾಲೆಯ 2 ನೇ ತರಗತಿಯ ವಿದ್ಯಾರ್ಥಿ. ಗಣೇಶ್ ಹಾಗೂ ಪುಷ್ಪ ದಂಪತಿಯ ಪುತ್ರನಾಗಿರುವ ರಿತ್ವಿಕ್ ಗೆ ಬಾಲ್ಯದಿಂದಲೇ ಕೃಷಿ ಚಟುವಟಿಕೆ ಮೇಲೆ ವಿಶೇಷ ಆಸಕ್ತಿ ಅಂತಾರೆ ಮನೆಯವರು.

ಹಿರಿಯರು ಗದ್ದೆಗೆ ಇಳಿದು ಉಳುಮೆ ಮಾಡಿದರೆ ತಾನೂ ಅವರ ಜೊತೆ ಉಳುಮೆ ಮಾಡುತ್ತಾನೆ. ಮಾತ್ರವಲ್ಲ, ತನಗಿಂತ ಸಾವಿರ ಪಟ್ಟು ಬಲಶಾಲಿಯಾದ ಕೋಣಗಳನ್ನು ಪಳಗಿಸೋದಕ್ಕೆ ಈ ಮುಂದಾಗುತ್ತಾನೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಹಾಗೆ ರಿತ್ವಿಕ್ ಕೂಡಾ ಮನೆಯವರನ್ನು ಅನುಸರಿಸುತ್ತಾನೆ.
ಮನೆ ಮಂದಿ ಬೇಡ ಅಂದ್ರೂ ತಾನೇ ಗದ್ದೆಗೆ ಇಳಿತಾನೆ, ಉಳುಮೆ ಮಾಡ್ತಾನೆ. ಜೊತೆಗೆ ಹಾರೆ ಹಿಡಿದು ಕೆಲಸಾನೂ ಮಾಡ್ತಾನೆ. ಒಟ್ಟಿನಲ್ಲಿ ರಿತ್ವಿಕ್ ನಂತಹ ಅದೆಷ್ಟೋ ಪುಟಾಣಿಗಳು ಇಂದು ಕೈಯಲ್ಲಿ ಟಿವಿ ರಿಮೋಟ್ ಹಿಡಿಬೇಕಾದ್ರೆ, ರಿತ್ವಿಕ್ ಮಾತ್ರ ತನ್ನ ರಜೆ ಸಮಯದಲ್ಲಿ ನೇಗಿಲು ಹಿಡಿದು, ಸಣ್ಣ ವಯಸ್ಸಲ್ಲೇ ಮಣ್ಣಿನ ಮಗನಾಗೋ ಕನಸು ಕಂಡಂತಿದೆ.

ಅಂದ ಹಾಗೆ ಕಳೆದ ಭಾನುವಾರ ರಜಾದಿನದಂದು ರಿತ್ವಿಕ್ ತಮ್ಮ ಮನೆಗೆ ಸೇರಿದ ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ ತೆಗೆಯಲಾದ ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಪುಟಾಣಿಯ ಕೃಷಿ ಪ್ರೇಮಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications