ಬೆಂಗಳೂರು : ಅಬ್ಬಾ ತರಕಾರಿ ಬೆಲೆ ಕಡಿಮೆ ಆಯ್ತು!

ಮೇ ತಿಂಗಳಲ್ಲಿ ನಿಧಾನಗತಿಯಲ್ಲಿ ಏರಿಕೆ ಕಂಡಿದ್ದ ತರಕಾರಿ ಬೆಲೆ, ನೂರು ರೂ. ಗಡಿಯನ್ನು ದಾಟಿ ಬಡ-ಮಧ್ಯಮ ವರ್ಗದವರನ್ನು ಚಿಂತೆಗೆ ತಳ್ಳಿತ್ತು. ಅದರಲ್ಲೂ ಜೂನ್ ತಿಂಗಳಿನಲ್ಲಿ ತರಕಾರಿ ಕೇವಲ ನೋಡಲು ಮಾತ್ರ ಸೀಮಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.
ನೀರಿನ ಅಭಾವ, ಸಾಲು ಸಾಲು ಸಮಾರಂಭಗಳಿಂದಾಗಿ ತರಕಾರಿ ಬೆಲೆ ಗಗನಕ್ಕೆ ಏರಿತ್ತು. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿತ್ತು. ಸದ್ಯ ವರುಣ ದೇವನ ಕೃಪೆಯಿಂದಾಗಿ ತರಕಾರಿ ಬೆಲೆಗೆ ಅಂಕುಶ ಬಿದ್ದಿದೆ. ಸಮಾರಂಭಗಳು ಕಡಿಮೆ ಆದ್ದರಿಂದ ತರಕಾರಿ ಜನರ ಕೈಗೆ ಸಿಗುವಂತಾಗಿದೆ.
ಅತಿ ಹೆಚ್ಚು ಏರಿಕೆಯಾಗಿದ್ದ ಕೆಲವು ತರಕಾರಿಗಳ ಬೆಲೆಗಳಲ್ಲಿ ಶೇ.20 ರಿಂದ 30 ರಷ್ಟು ಇಳಿಕೆಯಾದರೆ, ಕೆಲ ತರಕಾರಿ ಬೆಲೆಗಳು ಇನ್ನೂ ಸ್ಥಿರವಾಗಿದೆ. ಟೊಮೆಟೋ ಬೆಲೆಯಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ.
ಯಾವುದು ಎಷ್ಟು ಕಡಿಮೆ ಯಾಗಿದೆ : ಎರಡು ತಿಂಗಳಿನಿಂದ ಸತತವಾಗಿ ಕೆ.ಜಿ.ಗೆ 100 ರೂ. ಇದ್ದ ಬೀನ್ಸ್(ಹುರಳಿಕಾಯಿ) ಬೆಲೆ ಹಾಪ್ಕಾಮ್ಸ್ನಲ್ಲಿ 29 ರೂ.ಗೆ ಇಳಿದಿದೆ. ಮಾರುಕಟ್ಟೆಯಲ್ಲಿ 30 ರಿಂದ 60 ರೂ.ವರೆಗೂ ಬೆಲೆ ಇದೆ.
ಬೆಂಡೇಕಾಯಿ ಕೆ.ಜಿ.ಗೆ 50 ರಿಂದ 60 ರೂ. ಆಗಿತ್ತು. ಸದ್ಯ 32 ರೂ.ಗೆ ಇಳಿಕೆಯಾಗಿದೆ. ಕೊತ್ತಂಬರಿ ಸೊಪ್ಪು ಕಟ್ಟಿಗೆ 50 ರೂ. ಆಗಿತ್ತು. ಇದು ಸದ್ಯ 30 ರೂ.ಗೆ ಇಳಿಕೆಯಾಗಿದೆ. ಈರುಳ್ಳಿ 30 ರೂ.ಗೆ ಇಳಿಕೆಯಾಗಿ ಗ್ರಾಹಕರಿಗೆ ನೆಮ್ಮದಿ ಮೂಡಿಸಿದೆ.
ಬದನೇಕಾಯಿ ಬೆಲೆ ನಿಯಂತ್ರಣಕ್ಕೆ ಬಂದಿದ್ದು, 21 ರೂ.ಗೆ ಇಳಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಬದನೇಕಾಯಿ ಬೆಲೆ 42 ರೂ.ವರೆಗೆ ಏರಿಕೆಯಾಗಿತ್ತು.
ಟೊಮೆಟೋ ಬೆಲೆ ಸದ್ಯ ಕಡಿಮೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಹಾಪ್ಕಾಮ್ಸ್ ಪ್ರತಿ ಕೆ.ಜಿ. 48 ರೂ.ಗೆ ಟೊಮೆಟೋ ದೊರೆಯುತ್ತಿದ್ದರೆ, ಮಾರುಕಟ್ಟೆಯಲ್ಲಿ ಕೆ.ಜಿ.ಗೆ 60ರೂ. ವರೆಗೂ ಮಾರಾಟವಾಗುತ್ತಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications