ಬೆಂಗಳೂರು : ಅಬ್ಬಾ ತರಕಾರಿ ಬೆಲೆ ಕಡಿಮೆ ಆಯ್ತು!

ಮೇ ತಿಂಗಳಲ್ಲಿ ನಿಧಾನಗತಿಯಲ್ಲಿ ಏರಿಕೆ ಕಂಡಿದ್ದ ತರಕಾರಿ ಬೆಲೆ, ನೂರು ರೂ. ಗಡಿಯನ್ನು ದಾಟಿ ಬಡ-ಮಧ್ಯಮ ವರ್ಗದವರನ್ನು ಚಿಂತೆಗೆ ತಳ್ಳಿತ್ತು. ಅದರಲ್ಲೂ ಜೂನ್ ತಿಂಗಳಿನಲ್ಲಿ ತರಕಾರಿ ಕೇವಲ ನೋಡಲು ಮಾತ್ರ ಸೀಮಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.
ನೀರಿನ ಅಭಾವ, ಸಾಲು ಸಾಲು ಸಮಾರಂಭಗಳಿಂದಾಗಿ ತರಕಾರಿ ಬೆಲೆ ಗಗನಕ್ಕೆ ಏರಿತ್ತು. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿತ್ತು. ಸದ್ಯ ವರುಣ ದೇವನ ಕೃಪೆಯಿಂದಾಗಿ ತರಕಾರಿ ಬೆಲೆಗೆ ಅಂಕುಶ ಬಿದ್ದಿದೆ. ಸಮಾರಂಭಗಳು ಕಡಿಮೆ ಆದ್ದರಿಂದ ತರಕಾರಿ ಜನರ ಕೈಗೆ ಸಿಗುವಂತಾಗಿದೆ.
ಅತಿ ಹೆಚ್ಚು ಏರಿಕೆಯಾಗಿದ್ದ ಕೆಲವು ತರಕಾರಿಗಳ ಬೆಲೆಗಳಲ್ಲಿ ಶೇ.20 ರಿಂದ 30 ರಷ್ಟು ಇಳಿಕೆಯಾದರೆ, ಕೆಲ ತರಕಾರಿ ಬೆಲೆಗಳು ಇನ್ನೂ ಸ್ಥಿರವಾಗಿದೆ. ಟೊಮೆಟೋ ಬೆಲೆಯಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ.
ಯಾವುದು ಎಷ್ಟು ಕಡಿಮೆ ಯಾಗಿದೆ : ಎರಡು ತಿಂಗಳಿನಿಂದ ಸತತವಾಗಿ ಕೆ.ಜಿ.ಗೆ 100 ರೂ. ಇದ್ದ ಬೀನ್ಸ್(ಹುರಳಿಕಾಯಿ) ಬೆಲೆ ಹಾಪ್ಕಾಮ್ಸ್ನಲ್ಲಿ 29 ರೂ.ಗೆ ಇಳಿದಿದೆ. ಮಾರುಕಟ್ಟೆಯಲ್ಲಿ 30 ರಿಂದ 60 ರೂ.ವರೆಗೂ ಬೆಲೆ ಇದೆ.
ಬೆಂಡೇಕಾಯಿ ಕೆ.ಜಿ.ಗೆ 50 ರಿಂದ 60 ರೂ. ಆಗಿತ್ತು. ಸದ್ಯ 32 ರೂ.ಗೆ ಇಳಿಕೆಯಾಗಿದೆ. ಕೊತ್ತಂಬರಿ ಸೊಪ್ಪು ಕಟ್ಟಿಗೆ 50 ರೂ. ಆಗಿತ್ತು. ಇದು ಸದ್ಯ 30 ರೂ.ಗೆ ಇಳಿಕೆಯಾಗಿದೆ. ಈರುಳ್ಳಿ 30 ರೂ.ಗೆ ಇಳಿಕೆಯಾಗಿ ಗ್ರಾಹಕರಿಗೆ ನೆಮ್ಮದಿ ಮೂಡಿಸಿದೆ.
ಬದನೇಕಾಯಿ ಬೆಲೆ ನಿಯಂತ್ರಣಕ್ಕೆ ಬಂದಿದ್ದು, 21 ರೂ.ಗೆ ಇಳಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಬದನೇಕಾಯಿ ಬೆಲೆ 42 ರೂ.ವರೆಗೆ ಏರಿಕೆಯಾಗಿತ್ತು.
ಟೊಮೆಟೋ ಬೆಲೆ ಸದ್ಯ ಕಡಿಮೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಹಾಪ್ಕಾಮ್ಸ್ ಪ್ರತಿ ಕೆ.ಜಿ. 48 ರೂ.ಗೆ ಟೊಮೆಟೋ ದೊರೆಯುತ್ತಿದ್ದರೆ, ಮಾರುಕಟ್ಟೆಯಲ್ಲಿ ಕೆ.ಜಿ.ಗೆ 60ರೂ. ವರೆಗೂ ಮಾರಾಟವಾಗುತ್ತಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications