ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿ-ಗಣೇಶ ಹಬ್ಬದೊಳಗೆ ರೈತರಿಗೆ ಶುಭ ಸುದ್ದಿ: ಕುಮಾರಸ್ವಾಮಿ

By Manjunatha
|
Google Oneindia Kannada News

Recommended Video

ಸಾಲ ಮನ್ನಾ ಬಳಿಕ ರೈತರಿಗೆ ಮತ್ತೊಂದು ಸಿಹಿ ಸುದ್ದಿ ಕೊಡಲಿದ್ದಾರೆ ಕುಮಾರಣ್ಣ

ಮಂಡ್ಯ, ಆಗಸ್ಟ್ 11: ಈಗಾಗಲೇ ರೈತರ ಸಾಲಮನ್ನಾ ಮಾಡಿರುವ ಕುಮಾರಸ್ವಾಮಿ, ಗೌರಿ-ಗಣೇಶ ಹಬ್ಬದ ಒಳಗಾಗಿ ರಾಜ್ಯದ ರೈತರಿಗೆ ಮತ್ತೊಂದು ಸಿಹಿ ಸುದ್ದಿ ನೀಡುವುದಾಗಿ ಹೇಳಿದರು.

ಮಂಡ್ಯದ ಸೀತಾಪುರದಲ್ಲಿ ಭತ್ತ ನಾಟಿ ಮಾಡಿ ಮಾತನಾಡಿದ ಕುಮಾರಸ್ವಾಮಿ, ನೀತಿ ಸಂಹಿತೆ ಇರುವ ಕಾರಣ ಯಾವುದೇ ಘೋಷಣೆಗಳು ಮಾಡಲಾಗುತ್ತಿಲ್ಲ ಎಂದ ಅವರು, ಗೌರಿ-ಗಣೇಶ ಹಬ್ಬದ ಒಳಗಾಗಿ ರೈತ ಪರ ಬೃಹತ್ ಯೋಜನೆ ನೀಡುವುದಾಗಿ ಭರವಸೆ ನೀಡಿದರು.

Cm Kumaraswamy gives hint to give another big project to farmers

ಭತ್ತ ನಾಟಿ ರಾಜಕೀಯ ಗಿಮಿಕ್ ಅಲ್ಲ : ಕುಮಾರಸ್ವಾಮಿಭತ್ತ ನಾಟಿ ರಾಜಕೀಯ ಗಿಮಿಕ್ ಅಲ್ಲ : ಕುಮಾರಸ್ವಾಮಿ

ರೈತ ಮಹಿಳೆಯರು, ಸ್ಥಳೀಯ ಜೆಡಿಎಸ್ ಶಾಸಕರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿಗಳು ಭತ್ತದ ಗದ್ದೆಗೆ ಇಳಿದು ಭತ್ತದ ಪೈರು ನಾಟಿ ಮಾಡಿದರು. ಮಾಧ್ಯಮದವರು, ಸಾರ್ವಜನಿಕರು, ಜನಪ್ರತಿನಿಧಿಗಳು ಸಾಕಷ್ಟು ಜನ ಸ್ಥಳದಲ್ಲಿ ಇದ್ದಕಾರಣ, ತಳ್ಳಾಟ, ನೂಕಾಟ ಉಂಟಾಯಿತು.

Cm Kumaraswamy gives hint to give another big project to farmers

ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದ ಕಾರಣ ಮುಖ್ಯ ವೇದಿಕೆ ಏರುವ ಮುನ್ನವೇ ಅನೌಪಚಾರಿಕವಾಗಿ ಭಾಷಣ ಮಾಡಿದ ಸಿಎಂ, ಇನ್ನು ಮುಂದೆ ಬದುಕಿರುವವರೆಗೆ ಸೀತಾಪುರಕ್ಕೆ ಬಂದು ಭತ್ತ ನಾಟಿ ಮಾಡುವುದಾಗಿ ಘೋಷಿಸಿದರು.

ಕೋಳಿಗೆ ಕಾವು ಕೊಡುವುದನ್ನು ಸಿಎಂ ಹೇಳಿಕೊಡ್ತಾರಾ?: ಈಶ್ವರಪ್ಪ ವ್ಯಂಗ್ಯ ಕೋಳಿಗೆ ಕಾವು ಕೊಡುವುದನ್ನು ಸಿಎಂ ಹೇಳಿಕೊಡ್ತಾರಾ?: ಈಶ್ವರಪ್ಪ ವ್ಯಂಗ್ಯ

ರಾಜ್ಯದ ಎಲ್ಲಾ ಜಿಲ್ಲೆಗಳ ಅಭಿವೃದ್ಧಿ ತಾವು ಬದ್ಧ ಎಂದು ಪನರ್‌ ಉಚ್ಚರಿಸಿದ ಸಿಎಂ, ನಾನು ರೈತರ ಮನೆಯಿಂದ ಬಂದವನು ನಿಮ್ಮ ಕಷ್ಟದ ಅರಿವು ನನಗಿದೆ, ನಿಮ್ಮ ಉದ್ಧಾರಕ್ಕಾಗಿ ನಾವು ವಿವಿಧ ಯೋಜನೆಗಳನ್ನು ರೂಪಿಸುತ್ತಿದ್ದೇವೆ, ನಮ್ಮ ಮೇಲೆ ಭರವಸೆ ಇಡಿ ಎಂದು ಅವರು ಮನವಿ ಮಾಡಿದರು.

English summary
CM Kumaraswamy gives hint about giving an other big project or scheme related to farmers. He already waive off farmers loan. He plant rice paddy in Mandya district Sitapura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X