ಧಾರವಾಡದಲ್ಲಿ ಕೃಷಿ ಇಲಾಖೆಯ ನೂತನ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಧಾರವಾಡದಲ್ಲಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ ಕೃಷಿ ಇಲಾಖೆಯ ನೂತನ ಯೋಜನೆಗಳು ಯಾವುವು ಎಂದು ಇಲ್ಲಿ ತಿಳಿಯಿರಿ.
ಧಾರವಾಡ, ಜನವರಿ, 31: ರಾಜ್ಯ ಇಲಾಖೆ ಜಾರಿಗೆ ತಂದ ರೈತ ಶಕ್ತಿ, ಭೂರಹಿತ ಕೃಷಿ ಕಾರ್ಮಿಕ ಹಾಗೂ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ, ಕೃಷಿ ಪಂಡಿತ, ಕೃಷಿ ಪ್ರಶಸ್ತಿ ಪ್ರದಾನ, ಕೃಷಿ ಸಂಜೀವಿನಿ ವಾಹನ ಲೋಕಾರ್ಪಣೆ, ಮುಖ್ಯಮಂತ್ರಿಗಳ ನೈಸರ್ಗಿಕ ಕೃಷಿ, ಡಾ.ಎಸ್.ವಿ.ಪಾಟೀಲ ಕೃಷಿ ಸಂಶೋಧನೆ, ತರಬೇತಿ ಹಾಗೂ ರೈತರ ಶ್ರೇಯೋಭಿವೃದ್ಧಿ ಪೀಠ ಲೋಕಾರ್ಪಣೆ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಚಾಲನೆ ನೀಡಿದರು.
ನೂತನ
ಯೋಜನೆಗಳು
ಯಾವುವು?
ಧಾರವಾಡದ
ಕೃಷಿ
ವಿಶ್ವವಿದ್ಯಾಲಯದ
ಮೈದಾನದಲ್ಲಿ
ಹಮ್ಮಿಕೊಂಡಿದ್ದ
ಕಾರ್ಯಕ್ರಮದಲ್ಲಿ
ಮುಖ್ಯಮಂತ್ರಿಗಳು
ಈ
ಎಲ್ಲಾ
ಯೋಜನೆಗಳಿಗೆ
ಚಾಲನೆ
ನೀಡಿದರು.
ರಾಜ್ಯದ
ಎಲ್ಲಾ
ವರ್ಗದ
ರೈತರಿಗೆ
ಪ್ರತಿ
ಹೆಕ್ಟೇರ್ಗೆ
250
ರೂಪಾಯಿಗಳಂತೆ
ಗರಿಷ್ಠ
5
ಹೆಕ್ಟೇರ್ಗೆ
1,250
ರೂಪಾಯಿಗಳನ್ನು
ಕೃಷಿ
ಯಂತ್ರೋಪಕರಣಗಳ
ಬಳಕೆಯ
ಪ್ರೋತ್ಸಾಹಕ್ಕೆ
ಸಹಾಯಧನವನ್ನು
ನೀಡಲಾಗುತ್ತದೆ.
ಹಾಗೂ
ಇಂಧನ
ವೆಚ್ಚದ
ಭಾರವನ್ನು
ಕಡಿತಗೊಳಿಸಲು
ಡೀಸೆಲ್ಗೆ
51.80
ಲಕ್ಷ
ಫಲಾನುಭವಿಗಳಿಗೆ
383.15
ಕೋಟಿಗಳ
ರೂಪಾಯಿಗಳ
ಸಹಾಯಧನ
ನೀಡಲಾಗುವುದು.
ರೈತರ,
ಕೃಷಿ
ಕಾರ್ಮಿಕರ
ಮಕ್ಕಳ
ಹೆಚ್ಚಿನ
ಹಾಗೂ
ಉನ್ನತ
ಶಿಕ್ಷಣವನ್ನು
ಪ್ರೋತ್ಸಾಹಿಸಲು
8
ರಿಂದ
10ನೇ
ತರಗತಿಯ
ವಿದ್ಯಾರ್ಥಿನಿಯರಿಗೆ
ಹಾಗೂ10ನೇ
ತರಗತಿ
ನಂತರದ
ವಿದ್ಯಾರ್ಥಿ,
ವಿದ್ಯಾರ್ಥಿನಿಯರಿಗೆ
2,000
ರೂಪಾಯಿಯಿಂದ
11,000
ಸಾವಿರದವರೆಗೆ
ವಿದ್ಯಾರ್ಥಿವೇತನ
ನೀಡುವ
ಯೋಜನೆಗೆ
ಚಲಾನೆ
ನೀಡಲಾಯಿತು.
ಕೃಷಿ ಪಂಡಿತ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಧಾರವಾಡದ ಕೃಷಿ ವಿವಿಯಲ್ಲಿ ವೇದಿಕೆ ಸಿದ್ಧತೆ
ವಿದ್ಯಾರ್ಥಿಗಳಿಗೆ
ಉಪಯೋಗವಾಗುವ
ಯೋಜನೆಗಳು
(Direct
Benefit
Transfer
DBT)
ಪದ್ಧತಿಯ
ಮೂಲಕ
4.55
ಲಕ್ಷ
ಮಕ್ಕಳಿಗೆ
241.86
ಕೋಟಿ
ರೂಪಾಯಿಗಳಷ್ಟು
ವಿದ್ಯಾರ್ಥಿ
ವೇತನವನ್ನು
ನೇರ
ನಗದು
ವರ್ಗಾವಣೆ
ಮೂಲಕ
ನೀಡುವುದು,
ರಾಜ್ಯದ
ಕೃಷಿ
ಮತ್ತು
ಸಂಬಂಧಿತ
ಕ್ಷೇತ್ರದಲ್ಲಿ
ವಿನೂತನ
ಅನ್ವೇಷಣೆ
ಮತ್ತು
ಸೃಜನಾತ್ಮಕ
ಕಾರ್ಯಗಳಿಂದ
ಗಮನಾರ್ಹ
ಸಾಧನೆ
ಮಾಡಿದ
ರೈತರಿಗೆ
ಕೃಷಿ
ಪಂಡಿತ
ಪ್ರಶಸ್ತಿ
ಹಾಗೂ
ಕೃಷಿ
ಕ್ಷೇತ್ರದಲ್ಲಿ
ಉತ್ಪಾದನೆ
ಮತ್ತು
ಉತ್ಪಾದಕತೆ
ಹೆಚ್ಚಿಸುವುದನ್ನು
ಈ
ಯೋಜನೆ
ಒಳಗೊಂಡಿದೆ.
ಈ
ಮೂಲಕ
ರೈತರಲ್ಲಿ
ಒಂದು
ಆರೋಗ್ಯಕರ
ಸ್ಪರ್ಧಾ
ಮನೋಭಾವನೆಯನ್ನು
ಬೆಳೆಸುವ
ಉದ್ದೇಶ
ಈ
ಯೋಜನೆಯದ್ದಾಗಿದೆ.
ಸಂಚಾರಿ
ಸಸ್ಯ
ಆರೋಗ್ಯ
ಚಿಕಿತ್ಸಾಲಯಕ್ಕೆ
ಚಾಲನೆ
ಕೃಷಿ
ಮತ್ತು
ತೋಟಗಾರಿಕೆ
ಬೆಳೆಗಳ
ಉತ್ಪಾದನೆಗೆ
ಪ್ರಮುಖವೆನಿಸಿರುವ
ಮಣ್ಣು
ಮತ್ತು
ನೀರಿನ
ಪರೀಕ್ಷೆ,
ಕೀಟ
ಮತ್ತು
ರೋಗಗಳನ್ನು
ಪತ್ತೆ
ಹಚ್ಚುವಿಕೆ,
ರೋಗ
ನಿಯಂತ್ರಣಾ
ಕ್ರಮಗಳ
ಕುರಿತು
ಜಾಗೃತಿ
ಹಾಗೂ
ಚಿಕಿತ್ಸೆ
ನೀಡುವ
64
ಕೃಷಿ
ಸಂಜೀವಿನಿ
ವಾಹನಗಳಿಗೆ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಲೋಕಾರ್ಪಣೆಗೊಳಿಸಿದರು.
ಧಾರವಾಡದಲ್ಲಿ
ಹಮ್ಮಿಕೊಂಡಿದ್ದ
ಕೃಷಿ
ಪಂಡಿತ
ಹಾಗೂ
ಕೃಷಿ
ಪ್ರಶಸ್ತಿ
ಪ್ರದಾನ
ಸಮಾರಂಭದಲ್ಲಿ
ಸಿಎಂ
ಬೊಮ್ಮಾಯಿ
ಅವರು
11.52
ಕೋಟಿ
ಮೊತ್ತದ
64
ಸಂಚಾರಿ
ಸಸ್ಯ
ಆರೋಗ್ಯ
ಚಿಕಿತ್ಸಾಲಯಗಳನ್ನು
ಲೋಕಾರ್ಪಣೆಗೊಳಿಸಿದರು.
ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಅರವಿಂದ ಬೆಲ್ಲದ, ಸಿದ್ದು ಸವದಿ, ಅಮೃತ್ ದೇಸಾಯಿ, ತವನಪ್ಪ ಅಷ್ಟಗಿ ಸೇರಿದಂತೆ ಮತ್ತಿತರರು ಸಾಥ್ ನೀಡಿದರು.