Get Updates
Get notified of breaking news, exclusive insights, and must-see stories!

ಸಾವಯವ ಕೃಷಿಯಲ್ಲಿ ಖುಷಿಕಂಡ ಮಸ್ಕಿ ತಾಲೂಕಿನ ಅಮೀನಗಡ ಸಹೋದರರು

ರಾಯಚೂರು, ಅಕ್ಟೋಬರ್‌, 03: ಮಸ್ಕಿ ತಾಲೂಕಿನ ಅಮೀನಗಡ ಗ್ರಾಮದ ಗಂಗಪ್ಪ ಕಾರಟಗಿ ಮತ್ತು ಹನುಮಂತ ಕಾರಟಗಿ ಎಂಬ ರೈತ ಸಹೋದರರಿಬ್ಬರು ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡಿದ್ದಾರೆ. ಈ ಮೂಲಕ ನಿತ್ಯ ಆದಾಯದ ಮೂಲ ಕಂಡುಕೊಂಡಿದ್ದಾರೆ. ಅವರು ಬೆಳೆದ ರಾಸಾಯನಿಕ ರಹಿತ ಬಾಳೆ ಹಣ್ಣಿಗೆ ಇದೀಗ ಬೇಡಿಕೆಯೂ ಹೆಚ್ಚಿದೆ.

ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಎರಡೂವರೆ ಎಕರೆ ಜಮೀನಿನಲ್ಲಿ ಎರಡು ಕೊಳವೆ ಬಾವಿ, ಕೃಷಿ ಹೊಂಡದ ಜೊತೆ ಸಂಪೂರ್ಣ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಜಮೀನಿನ ಬದುವಿಗೆ 500ಕ್ಕೂ ಹೆಚ್ಚಿನ ಹೆಬ್ಬೇವು, ನಿಂಬೆ ಗಿಡಗಳನ್ನು ನಾಟಿ ಮಾಡಿದ್ದಾರೆ. ಕೆಂಪು ಕಬ್ಬು, ಬಾಳೆ, ಪೇರಲ, ಸೀತಾಫಲ, ಅಂಜೂರ, ಚಿಕ್ಕು, ಮಾವು, ತೆಂಗು, ಕರಿಬೇವು, ಮೆಣಸಿನಕಾಯಿ, ಮಹಾಘನಿ, ನುಗ್ಗೆ, ಎಲೆ ಬಳ್ಳಿ, ಸುಗಂಧರಾಜ ಮಲ್ಲಿಗೆ, ಚೆಂಡುಹೂವು ಮತ್ತು ಅರಿಶಿಣ ಬೆಳೆಗಳನ್ನು ಬೆಳೆದಿದ್ದಾರೆ.

'ಬಾಳೆ ನಾಟಿ ಸಂದರ್ಭದಲ್ಲಿ ಕೀಟ ಬಾಧೆ ನಿಯಂತ್ರಣಕ್ಕೆ ಅಲ್ಪ ಪ್ರಮಾಣದ ರಾಸಾಯನಿಕ ಬಳಸಿದ್ದೆವು. ಇದನ್ನು ಹೊರತುಪಡಿಸಿ ಇದುವರೆಗೂ ಯಾವುದೇ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕವನ್ನು ಬಳಸಿಲ್ಲ. ತಿಪ್ಪೆ ಗೊಬ್ಬರ, ಎರೆಹುಳು ಗೊಬ್ಬರ ಮತ್ತು ಜೀವಾಮೃತ ಬಳಸುತ್ತೇವೆ' ಎಂದು ರೈತ ಗಂಗಪ್ಪ ಹೇಳಿದರು. ಇನ್ನು ರೈತ ಹನುಮಂತ ಮಾತನಾಡಿ, 'ಪ್ರತಿ ದಿನ 10 ಕೆ.ಜಿ. ಮಲ್ಲಿಗೆ ಹೂವು ಮತ್ತು 20 ಡಜನ್ ಬಾಳೆಹಣ್ಣು ಮಾರಾಟದಿಂದ 2 ಸಾವಿರ ರೂಪಾಯಿ ಆದಾಯ ಬರುತ್ತಿದೆ. ಬಾಳೆ ಹಣ್ಣಿಗೆ ರಾಸಾಯನಿಕ ಬಳಸದ ಕಾರಣ ಸಿಹಿ ಮತ್ತು ರುಚಿಕರವಾಗಿದ್ದು, ಹಣ್ಣಿಗೆ ಬೇಡಿಕೆ ಹೆಚ್ಚಿದೆ' ಎಂದು ಹೇಳಿದರು.

 ರೈತ ಗಂಗಪ್ಪನ ಸ್ವಾವಲಂಬಿ ಕೃಷಿ

ರೈತ ಗಂಗಪ್ಪನ ಸ್ವಾವಲಂಬಿ ಕೃಷಿ

ಯಂತ್ರಗಳ ಬಳಕೆ ಮತ್ತು ಕುಟುಂಬದ 6 ಜನ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಕೂಲಿ ಕಾರ್ಮಿಕರ ಅಗತ್ಯವಿಲ್ಲ. ಹೀಗಾಗಿ ಖರ್ಚು ಕಡಿಮೆ ಎನ್ನುವುದು ರೈತ ಸಹೋದರರ ಅನಿಸಿಕೆ ಆಗಿದೆ. 'ಮಾರುಕಟ್ಟೆಯಲ್ಲಿನ ಹಣ್ಣಿಗೂ ಇದಕ್ಕೂ ರುಚಿ, ವಾಸನೆ ಮತ್ತು ಸಿಹಿಯಲ್ಲಿ ಬಹಳ ವ್ಯತ್ಯಾಸವಿದೆ' ಎಂದು ಗ್ರಾಹಕ ಅಯ್ಯನಗೌಡ ಅವರು ತಿಳಿಸಿದರು. ರಾಸಾಯನಿಕ ಮುಕ್ತ ಹಣ್ಣುಗಳು ಮತ್ತಿತರ ಮಾಹಿತಿಗೆ ರೈತ ಗಂಗಪ್ಪ ಅವರ ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆ 97414 57122 ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ. ಮಲ್ಲಿಗೆ ಹೂವು ಮತ್ತು ಬಾಳೆ ಹಣ್ಣು ಮಾರಾಟದಿಂದ ನಿಶ್ಚಿತ ಆದಾಯ ಬರುತ್ತಿದೆ. ಆಯಾ ಋತುವಿನಲ್ಲಿ ಬೇಡಿಕೆಗೆ ತಕ್ಕತೆ ಹಣ್ಣುಗಳು ಬರುವಂತೆ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಪ್ರಗತಿ ಪರ ರೈತ ಗಂಗಪ್ಪ ಕಾರಟಗಿ ಹೇಳಿದರು.

 ಬೆಳೆಗಳನ್ನು ಕಳೆದುಕೊಂಡ ರೈತರು ತತ್ತರ

ಬೆಳೆಗಳನ್ನು ಕಳೆದುಕೊಂಡ ರೈತರು ತತ್ತರ

ಈಗಾಗಲೇ ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ನೂರಾರು ಎಕರೆ ಬೆಳೆ ಹಾಳಾಗಿ, ಬೆಳೆಗಳನ್ನು ಕಳೆದುಕೊಂಡ ರೈತರು ರೈತರು ತತ್ತರಿಸಿ ಹೋಗಿದ್ದರು. ಅಲ್ಲದೇ 189 ಮನೆಗಳಿಗೆ ಹಾನಿಯಾಗಿದ್ದು, ಪರಿಹಾರವೂ ದೊರೆತಿಲ್ಲ ಎಂದು ಜನರು ಅಳಲು ತೋಡಿಕೊಂಡಿದ್ದರು. ಇಷ್ಟೆಲ್ಲ ಅವಘಡಗಳು ಆಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಕ್ಷೇತ್ರಕ್ಕೆ ಒಂದು ದಿನವೂ ಭೇಟಿ ನೀಡದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದರು.

 ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ

ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ

ಮಳೆ ಹಾನಿ ವೀಕ್ಷಿಸಲು ರಾಜ್ಯದಲ್ಲಿ ನಾನಾ ಜಿಲ್ಲೆಗಳ ಉಸ್ತುವಾರಿ ಸಚಿವರು ಆಯಾ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲದೇ ಮಳೆಗಾಲದ ಸಂಕಷ್ಟ ಎದುರಿಸಲು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ರಾಯಚೂರು ಜಿಲ್ಲೆಯ ಮಳೆ, ಪರಿಸ್ಥಿತಿಗಳ ನಿರ್ವಹಣೆಗೆ ಸಚಿವರಿಂದ ಯಾವ ಸೂಚನೆಯನ್ನು ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು.

 ಭರವಸೆಯ ಗೂಡಾದ ಅಭಿವೃದ್ಧಿ ಕಾರ್ಯ

ಭರವಸೆಯ ಗೂಡಾದ ಅಭಿವೃದ್ಧಿ ಕಾರ್ಯ

ಜಿಲ್ಲೆಯ 7 ತಾಲೂಕುಗಳಲ್ಲಿ ಬೆಳೆದ ಸೂರ್ಯಕಾಂತಿ, ಭತ್ತ, ಹತ್ತಿ, ಮೆಕ್ಕೆಜೋಳ ಬೆಳೆದಿದ್ದು, ಸುರಿದ ಭಾರಿ ಮಳೆಗೆ ಅಂದಾಜು 100 ಹೆಕ್ಟೇರ್‌ಗಿಂತಲೂ ಹೆಚ್ಚು ಹಾನಿ ಸಂಭವಿಸಿತ್ತು. ಆದರೆ ಇದುವರೆಗೆ ಅಧಿಕಾರಿಗಳ ತಂಡ ಭೇಟಿ ನೀಡಿಲ್ಲ. ಸಮೀಕ್ಷೆ ನಡೆಸುತ್ತಿರುವುದಾಗಿ ಹೇಳುತ್ತಲೇ ಕಾಲ ಕಳೆಯುತ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದರು. ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿ ಆಗಿದ್ದು, ಯಾವುದೇ ಅಧಿಕಾರಿಗಳು ಬಂದು ಸಮೀಕ್ಷೆ ನಡೆಸದಿರುವುದು ನಮ್ಮ ದುರದೃಷ್ಟಕರ ಸಂಗತಿ ಆಗಿದೆ ಎಂದು ರೈತರು ಅಳು ತೋಡಿಕೊಂಡಿದ್ದರು.

ಆದರೆ ಈನಡುವೆಯೇ ಅಮೀನಗಡ ಗ್ರಾಮದ ಗಂಗಪ್ಪ ಕಾರಟಗಿ ಮತ್ತು ಹನುಮಂತ ಕಾರಟಗಿ ಎಂಬ ರೈತ ಸಹೋದರರಿಬ್ಬರು ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡಿದ್ದಾರೆ. ಈ ಮೂಲಕ ಕೃಷಿಯಲ್ಲಿ ಅಭಿವೃದ್ಧಿ ಕಾಣುತ್ತಾ ಇತರರಿಗೂ ಮಾದರಿ ಆಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+