ತನ್ನ ಸಾಧಕ ಪುತ್ರನನ್ನು ನೋಡಲು ಆ ತಂದೆ ಬದುಕಿರಲಿಲ್ಲ!
ತಂದೆಯ ಆಸೆ ಈಡೇರಿಸುವುದಕ್ಕಾಗಿ 11 ಚಿನ್ನದ ಪದಕ ಗೆದ್ದ ಮಗ. ಅದನ್ನು ಕಣ್ತುಂಬಿಸಿಕೊಳ್ಳುವ ಮೊದಲೇ ಮರಣ ಹೊಂದಿದ ತಂದೆ! ತಂದೆ-ಮಗನ ಅವಿನಾಭಾವ ಬಾಂಧವ್ಯದ ಈ ಕತೆ ಮನಸ್ಸಿನ ಕದತಟ್ಟುವುದಂತೂ ಸುಳ್ಳಲ್ಲ.
ಬೆಂಗಳೂರು, ಏಪ್ರಿಲ್ 25: ಮಗ ಕೃಷಿ ಪದವಿ ಪಡೆಯಬೇಕು ಅನ್ನೋದು ಅಪ್ಪನ ಕನಸು. ಅಷ್ಟೇ ಅಲ್ಲ, ತನ್ನ ಅಪೂರ್ಣ ಕನಸು, ಮಗನ ಮೂಲಕ ಸಾಕಾರವಾಗಬೇಕು ಅನ್ನೋ ಇಂಗಿತ ಅಪ್ಪನದು. ಅಪ್ಪನ ಆಸೆಯನ್ನು ಈಡೇರಿಸೋದೇ ಬದುಕಿನ ಗುರಿ ಎಂಬ ಭಾವನೆ ಮಗನದು.
ಅಪ್ಪನ ಆಸೆಯಂತೆ ಕೃಷಿ ಪದವಿಯನ್ನು 11 ಬಂಗಾರದ ಪದಕದೊಂದಿಗೆ ಪಡೆದ ಮಗನ ಮುಖದಲ್ಲಿ ಕನಸು ಈಡೇರಿದ ತೃಪ್ತಿಗಿಂತ, ಅಪ್ಪನ ಗೈರಿನ ವಿಷಾದವೇ ಢಾಳಾಗಿತ್ತು! ಯಾಕಂದ್ರೆ 11 ಚಿನ್ನದ ಪದಕದ ಸರದಾರ, ತನ್ನ ಸಾಧಕ ಸುಪುತ್ರನನ್ನು ನೋಡುವುದಕ್ಕೆ ಆ ಮುಗ್ಧ ತಂದೆ ಬದುಕಿಯೇ ಇರಲಿಲ್ಲ![ಮಾಲಕಿಯ ರಕ್ಷಿಸಲು ಹೋಗಿ ಪ್ರಾಣ ನೀಗಿಕೊಂಡ ನಾಯಿ]

ಆ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಬೆಂಗಳೂರಿನಲ್ಲಿ ನಡೆದ ಕೃಷಿ ವಿಶ್ವವಿದ್ಯಾಲಯದ 51 ನೇ ಘಟಿಕೋತ್ಸವ. ಮಂಡ್ಯದ ವಿಸಿ ಫಾರ್ಮ್ ನ ಕೃಷಿ ಕಾಲೇಜು ವಿದ್ಯಾರ್ಥಿ ರಘುವೀರ್ 11 ಚಿನ್ನದ ಪದಕದೊಂದಿಗೆ ಕೃಷಿ ಪದವಿ ಪಡೆದು ತಮ್ಮ ತಂದೆ-ತಾಯಿ, ಕುಟುಂಬ ವರ್ಗಕ್ಕೆ ಕೀರ್ತಿ ತಂದಿದ್ದಾರೆ.
ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದವರಾದ ರಘುವೀರ್ ತಂದೆ ಮಾದಪ್ಪ ಅವರಿಗೆ ಮಗನನ್ನು ಕೃಷಿ ಪದವಿಧರನನ್ನಾಗಿ ಮಾಡಬೇಕೆಂಬ ಹೆಬ್ಬಯಕೆ. ಅದಕ್ಕಾಗಿ ತಂದೆ ಸಾಕಷ್ಟು ಕಷ್ಟಪಟ್ಟಿದ್ದರು. ಅಪ್ಪನ ಆಸೆ ಈಡೇರಿಸುವುದಕ್ಕಾಗಿ ರಘುವೀರ ಸಹ ನಿದ್ದೆ-ಊಟ ಕಟ್ಟಿಕೊಂಡು ಓದಿದ್ದರು. ಅವರ ಅವಿಶ್ರಾಂತ ಶ್ರಮದ ಫಲ ಎಂಬಂತೆ ಅವರೀಗ ಮೊದಲ ರ್ಯಾಂಕ್ ಪಡೆದು, ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರ ಕೈಯಿಂದ ಬಂಗಾರದ ಪದಕವನ್ನೂ ಪಡೆದುಕೊಂಡಿದ್ದಾರೆ.[ಇದು ಫೇಸ್ ಬುಕ್ ಮಾಹಿತಿ, ತಾಯಿ-ಮಗುವಿನ ಜೀವವನ್ನು ವಾಟ್ಸ್ ಆಪ್ ಉಳಿಸಿತಾ?]

ಅಪ್ಪನ ಸಾವಿನ ದುಃಖದ ನಡುವೆಯೂ ಓದಿ, ಸಾಧನೆ ಮಾಡಿದ ರಘುವೀರ್ ಗೆ, ತಂದೆ ನನ್ನ ಹೃದಯದಲ್ಲೇ ಕುಳಿತು ನನ್ನ ಸಾಧನೆಯನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ ಎಂಬ ಸಮಾಧಾನವೂ ಇದೆ. ಒಟ್ಟಿನಲ್ಲಿ ತಂದೆ-ಮಗನ ಅವಿನಾಭಾವ ಬಾಂಧವ್ಯದ ಈ ಕತೆ ಮನಸ್ಸಿನ ಕದತಟ್ಟುವುದಂತೂ ಸುಳ್ಳಲ್ಲ.
ಘಟಿಕೋತ್ಸವದಲ್ಲಿ ರಘುವೀರ್ ರಂತೆಯೇ ಸಾಧನೆ ಮಾಡಿದ ಇನ್ನಷ್ಟು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. 953 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications