ಕೆಐಎಡಿಬಿ ವಿರುದ್ಧ ಸಿಡಿದೆದ್ದ ಹೊಸಪೇಟೆ ರೈತರು

ಹೊಸಪೇಟೆಯ ಟೌನ್ ರೀಡಿಂಗ್ ರೂಮ್ ಆವರಣದಿಂದ ಹೊರಟ ಮೆರವಣಿಗೆಯು ರೋಟರಿ ವೃತ್ತದಲ್ಲಿ ಸ್ವಲ್ಪಕಾಲ ರಸ್ತೆ ತಡೆ ನಡೆಸಿ, ಸರ್ಕಾರ ರತ್ನಗಂಬಳಿ ಹಾಸಿ, ಉದ್ಯಮಿಗಳನ್ನು ಅಹ್ವಾನಿಸಿರುವುದು ಬೌದ್ಧಿಕ - ಸಾಂಸ್ಕೃತಿಕ ದಿವಾಳಿತನವನ್ನು ತೋರುತ್ತಿದೆ. ಸರ್ಕಾರವನ್ನು ಜನಸಾಮಾನ್ಯರು, ಬುದ್ಧಿಜೀವಿಗಳು, ಪರಿಸರ ಪ್ರೇಮಿಗಳು ಎಚ್ಚರಿಸಿ ಕೈಗಾರಿಕೀಕರಣದ ನೆಪದಲ್ಲಿ ಬೆಳೆಯುತ್ತಿರುವ ಬಂಡವಾಳಶಾಹಿತ್ವವನ್ನು ತಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕೆ. ಜಹಿರುದ್ದೀನ್ ಅವರು ಮಾತನಾಡಿ, ತುಂಗಾಭದ್ರಾ ಜಲಾಶಯದ ನೀರು ಕೊನೆಯ ಹಂತದ ರೈತರಿಗೆ ದೊರೆಯುತ್ತಿಲ್ಲ. ಇಂತಹಾ ಸಂದರ್ಭದಲ್ಲಿ ಉದ್ಯಮಿಗಳಿಗೆ ಯಥೇಚ್ಛ ನೀರು ಕೊಡುವ ಮೂಲಕ ಸರ್ಕಾರ ರೈತ ವಿರೋಧಿ ನಿಲುವು ತೋರುತ್ತಿದೆ. ರೈತರನ್ನು ಕೃಷಿಯೋಗ್ಯ ಫಲವತ್ತಾದ ಭೂಮಿಗಳಿಂದ ಒಕ್ಕಲೆಬ್ಬಿಸುತ್ತಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು.
ನೂರಾರು ರೈತರು ಹಸಿರು ಟವೆಲ್ ಧರಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹೊಸಪೇಟೆಯ ರೋಟರಿ ವೃತ್ತದಲ್ಲಿ ರಸ್ತೆತಡೆ ನಡೆಸುವಾಗ ಮಳೆ ಸುರಿಯಿತು. ತಹಶೀಲ್ದಾರ್ ಪಿ.ಎಸ್.ಮಂಜುನಾಥ ಸ್ಥಳಕ್ಕೆ ಆಗಮಿಸಿ ಮಳೆಯಲ್ಲೇ ಮನವಿ ಸ್ವೀಕರಿಸಿದರು.












Click it and Unblock the Notifications