ಬಿ.ಟಿ. ಬದನೆ ಯಾವ ಕರ್ಮಕ್ಕೆ?

ಬಿ.ಟಿ. ಬದನೆಯನ್ನು ವಿರೋಧಿಸುವ ತಜ್ಞರು ಚಿಂತನಪೂರ್ಣವಾಗಿ ಮತ್ತು ಆಧಾರಸಹಿತವಾಗಿ ತಮ್ಮ ವಾದ ಮಂಡಿಸಿದರೆ ಬಿ.ಟಿ. ಬದನೆಯ ಪರವಾಗಿರುವವರು ಬರೀ ವಿತಂಡ ವಾದ ಮಾಡುವುದನ್ನು ನಾನು ಗಮನಿಸಿದ್ದೇನೆ. ಅಂಥ ವಿವರಗಳನ್ನೆಲ್ಲ ನಾನಿಲ್ಲಿ ಹೇಳಬೇಕಾದ ಅಗತ್ಯ ಕಂಡುಬರುವುದಿಲ್ಲ. ಏಕೆಂದರೆ, ನೀವೀಗಾಗಲೇ ಬಿ.ಟಿ. ಬದನೆಯ ಬಗ್ಗೆ ಮಾಧ್ಯಮಗಳಿಂದ ಸಾಕಷ್ಟು ತಿಳಿದುಕೊಂಡಿರುತ್ತೀರಿ ಮತ್ತು ತಜ್ಞರು ಇನ್ನುಮುಂದೆಯೂ ವಿವರಗಳನ್ನು ನಿಮ್ಮ ಅರಿವಿಗೆ ತರುತ್ತಲೇ ಇರುತ್ತಾರೆ. ಈ ದೇಶದ ಓರ್ವ ಜವಾಬ್ದಾರಿಯುತ ಹಾಗೂ ವಿವೇಕಿ ಪ್ರಜೆಯಾಗಿ ಮತ್ತು ನನ್ನೆಲ್ಲ ಅರಿವಿನ ಬೆಳಕಿನಲ್ಲಿ ನಾನು ಬಿ.ಟಿ. ಬದನೆಯನ್ನು ಕಡುವಾಗಿ ವಿರೋಧಿಸುತ್ತೇನೆ.
ಓರ್ವ ಸಾಮಾನ್ಯ ನಾಗರಿಕನಾಗಿ ನನ್ನಲ್ಲಿ ಇನ್ನೊಂದು ಯೋಚನೆಯೂ ಮೂಡುತ್ತದೆ. ಈ ದೇಶದಲ್ಲಿ ನಾನಾ ಬಗೆಯ ನಾಟಿ ಬದನೆಗಳಿವೆ. ಅವು ಬಿ.ಟಿ. ಬದನೆಗಿಂತ ರುಚಿಕರವಾಗಿರುತ್ತವೆ ಮತ್ತು ಸಮೃದ್ಧವಾಗಿಯೇ ಬೆಳೆಯುತ್ತವೆ. ಅವನ್ನು ಬೆಳೆಯಲು ಸಾಕಷ್ಟು ಭೂಮಿಯೂ ನಮ್ಮಲ್ಲಿದೆ ಮತ್ತು ಸಾಕಷ್ಟು ಕೈಗಳೂ ಇವೆ. ಈ ಕೈಗಳಿಗೆ ಕೆಲಸ ಕೊಡುವ ಬದಲು ಮತ್ತು ಶಕ್ತಿ ನೀಡುವ ಬದಲು ನಮ್ಮ ವ್ಯವಸ್ಥೆಯು ಬಿ.ಟಿ. ಬದನೆಯೆಂಬ ಕುಲಾಂತರಿ ಬದನೆಗೆ ಒತ್ತು ನೀಡಿದರೆ ಬೆಳೆ ಬೆಳೆಯುವ ಭೂಸಂಪತ್ತಿನ ಕಡೆಗಣನೆ ಹಾಗೂ ಕೈಗಳಿಗೆ ಅನ್ಯಾಯ ಮಾಡಿದಂತಲ್ಲವೆ? ಜೊತೆಗೆ, ಪ್ರಕೃತಿಗೆ ಮತ್ತು ಅದರ ನಿಯಮಕ್ಕೆ ವಿರುದ್ಧವಾಗಿ ಸಾಗಿದಂತಲ್ಲವೆ? ವಿರುದ್ಧವಾಗಿ ಸಾಗಿ ಜಯಿಸಿದ ಒಂದಾದರೂ ಉದಾಹರಣೆಯಿದೆಯೆ? ಹಾಗೆ ಜಯಿಸಲು ಎಂದಾದರೂ ಸಾಧ್ಯವೆ? ಮೇಲಾಗಿ, ಪ್ರಕೃತಿಯ ಶಿಶುಗಳಾಗಿ ನಾವು ತಿನ್ನುವ ಆಹಾರವೂ ಪ್ರಕೃತಿನಿಯಮಕ್ಕೆ ಅನುಗುಣವಾಗಿಯೇ ಇರಬೇಕಲ್ಲವೆ? ಜೀವಿಗಳ ಒಡಲಿನಮೇಲೆ ಪ್ರಕೃತಿನಿಯಮವನ್ನು ಮೀರಿ ಪ್ರಯೋಗಗಳನ್ನು ಮಾಡುವುದು ತರವೆ?
ಅಂದಮೇಲೆ ಈ ಬಿ.ಟಿ. ಬದನೆಕಾಯಿ ಯಾವ ಕರ್ಮಕ್ಕೆ? ಬಿ.ಟಿ. ಬದನೆ ಬೇಡ, ಬೇಡ, ಖಂಡಿತ ಬೇಡ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications