ಬಿ.ಟಿ. ಬದನೆ ಯಾವ ಕರ್ಮಕ್ಕೆ?

ಬಿ.ಟಿ. ಬದನೆಯನ್ನು ವಿರೋಧಿಸುವ ತಜ್ಞರು ಚಿಂತನಪೂರ್ಣವಾಗಿ ಮತ್ತು ಆಧಾರಸಹಿತವಾಗಿ ತಮ್ಮ ವಾದ ಮಂಡಿಸಿದರೆ ಬಿ.ಟಿ. ಬದನೆಯ ಪರವಾಗಿರುವವರು ಬರೀ ವಿತಂಡ ವಾದ ಮಾಡುವುದನ್ನು ನಾನು ಗಮನಿಸಿದ್ದೇನೆ. ಅಂಥ ವಿವರಗಳನ್ನೆಲ್ಲ ನಾನಿಲ್ಲಿ ಹೇಳಬೇಕಾದ ಅಗತ್ಯ ಕಂಡುಬರುವುದಿಲ್ಲ. ಏಕೆಂದರೆ, ನೀವೀಗಾಗಲೇ ಬಿ.ಟಿ. ಬದನೆಯ ಬಗ್ಗೆ ಮಾಧ್ಯಮಗಳಿಂದ ಸಾಕಷ್ಟು ತಿಳಿದುಕೊಂಡಿರುತ್ತೀರಿ ಮತ್ತು ತಜ್ಞರು ಇನ್ನುಮುಂದೆಯೂ ವಿವರಗಳನ್ನು ನಿಮ್ಮ ಅರಿವಿಗೆ ತರುತ್ತಲೇ ಇರುತ್ತಾರೆ. ಈ ದೇಶದ ಓರ್ವ ಜವಾಬ್ದಾರಿಯುತ ಹಾಗೂ ವಿವೇಕಿ ಪ್ರಜೆಯಾಗಿ ಮತ್ತು ನನ್ನೆಲ್ಲ ಅರಿವಿನ ಬೆಳಕಿನಲ್ಲಿ ನಾನು ಬಿ.ಟಿ. ಬದನೆಯನ್ನು ಕಡುವಾಗಿ ವಿರೋಧಿಸುತ್ತೇನೆ.
ಓರ್ವ ಸಾಮಾನ್ಯ ನಾಗರಿಕನಾಗಿ ನನ್ನಲ್ಲಿ ಇನ್ನೊಂದು ಯೋಚನೆಯೂ ಮೂಡುತ್ತದೆ. ಈ ದೇಶದಲ್ಲಿ ನಾನಾ ಬಗೆಯ ನಾಟಿ ಬದನೆಗಳಿವೆ. ಅವು ಬಿ.ಟಿ. ಬದನೆಗಿಂತ ರುಚಿಕರವಾಗಿರುತ್ತವೆ ಮತ್ತು ಸಮೃದ್ಧವಾಗಿಯೇ ಬೆಳೆಯುತ್ತವೆ. ಅವನ್ನು ಬೆಳೆಯಲು ಸಾಕಷ್ಟು ಭೂಮಿಯೂ ನಮ್ಮಲ್ಲಿದೆ ಮತ್ತು ಸಾಕಷ್ಟು ಕೈಗಳೂ ಇವೆ. ಈ ಕೈಗಳಿಗೆ ಕೆಲಸ ಕೊಡುವ ಬದಲು ಮತ್ತು ಶಕ್ತಿ ನೀಡುವ ಬದಲು ನಮ್ಮ ವ್ಯವಸ್ಥೆಯು ಬಿ.ಟಿ. ಬದನೆಯೆಂಬ ಕುಲಾಂತರಿ ಬದನೆಗೆ ಒತ್ತು ನೀಡಿದರೆ ಬೆಳೆ ಬೆಳೆಯುವ ಭೂಸಂಪತ್ತಿನ ಕಡೆಗಣನೆ ಹಾಗೂ ಕೈಗಳಿಗೆ ಅನ್ಯಾಯ ಮಾಡಿದಂತಲ್ಲವೆ? ಜೊತೆಗೆ, ಪ್ರಕೃತಿಗೆ ಮತ್ತು ಅದರ ನಿಯಮಕ್ಕೆ ವಿರುದ್ಧವಾಗಿ ಸಾಗಿದಂತಲ್ಲವೆ? ವಿರುದ್ಧವಾಗಿ ಸಾಗಿ ಜಯಿಸಿದ ಒಂದಾದರೂ ಉದಾಹರಣೆಯಿದೆಯೆ? ಹಾಗೆ ಜಯಿಸಲು ಎಂದಾದರೂ ಸಾಧ್ಯವೆ? ಮೇಲಾಗಿ, ಪ್ರಕೃತಿಯ ಶಿಶುಗಳಾಗಿ ನಾವು ತಿನ್ನುವ ಆಹಾರವೂ ಪ್ರಕೃತಿನಿಯಮಕ್ಕೆ ಅನುಗುಣವಾಗಿಯೇ ಇರಬೇಕಲ್ಲವೆ? ಜೀವಿಗಳ ಒಡಲಿನಮೇಲೆ ಪ್ರಕೃತಿನಿಯಮವನ್ನು ಮೀರಿ ಪ್ರಯೋಗಗಳನ್ನು ಮಾಡುವುದು ತರವೆ?
ಅಂದಮೇಲೆ ಈ ಬಿ.ಟಿ. ಬದನೆಕಾಯಿ ಯಾವ ಕರ್ಮಕ್ಕೆ? ಬಿ.ಟಿ. ಬದನೆ ಬೇಡ, ಬೇಡ, ಖಂಡಿತ ಬೇಡ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications