ಅಣ್ಣಾವ್ರ ನೆನಪಲ್ಲಿ ಭಾವುಕವಾದ ಬೆಳಗಾವಿ
ಈ ಜನುಮದಲ್ಲಿ ಬೆಳಗಾವಿ ಕನ್ನಡಿಗರು ಮರೆಯದಂಥ ಮೆರವಣಿಗೆ. ಮೆರವಣಿಗೆ ಸಾಗಿಬಂದ ದಾರಿಯುದ್ದಕ್ಕೂ ಕನ್ನಡದ ನಗಾರಿ ಬಾರಿಸುತ್ತಿದ್ದರೆ ಹಳೆ ತಲೆಮಾರಿನವರಿಗೆ ಮತ್ತು ಕನ್ನಡ ಚಿತ್ರವನ್ನು ಅಪಾರವಾಗಿ ಹಚ್ಚಿಕೊಂಡವರಿಗೆ ವರನಟ ಡಾ. ರಾಜಕುಮಾರ್ ಅವರ ನೆನಪು ಕಾಡಿದ್ದು ಸುಳ್ಳಲ್ಲ.
ದಶಕಗಳ ಹಿಂದೆ ಕನ್ನಡಕ್ಕಾಗಿ ಗೋಕಾಕ್ ಚಳವಳಿಯಲ್ಲಿ ಅಪಾರ ಜನರನ್ನು ಸೆಳೆದಿದ್ದ ರಾಜ್ ಈ ಮೆರವಣಿಗೆಯಲ್ಲೂ ಇದ್ದಿದ್ದರೆ ಮೆರವಣಿಗೆಯ ಕಳೆ ಹೇಗಿರುತ್ತಿತ್ತು ಎಂದು ಹಲವರು ಭಾವುಕರಾದರು. ರಾಜಕುಮಾರ್ ಎಂಬ ಹೆಸರಿನಲ್ಲಿನ ಮೋಡಿಯೇ ಅಂತಹುದು. ಹೆಸರು ಕೇಳುತ್ತಿದ್ದಂತೆ ಮೈಮನಗಳಲ್ಲಿ ಕನ್ನಡ ಆವರಿಸಿಕೊಂಡು ಬಿಡುತ್ತದೆ. ನಮಗೇ ಅರಿವಿಲ್ಲದಂತೆ ಅವರ ನಟನೆಯ ಚಿತ್ರಗಳು ಕಣ್ಮುಂದೆ ಹಾದು, ಹಾಡುಗಳು ಕಿವಿಗಳಲ್ಲಿ ಗುಂಗುಡಲು ಪ್ರಾರಂಭಿಸುತ್ತವೆ.

ಆಕಸ್ಮಿಕ ಚಿತ್ರದಲ್ಲಿ ಹಂಸಲೇಖ ಬರೆದು ಹುಬ್ಬಳ್ಳಿಯಲ್ಲಿ ಚಿತ್ರಿಸಿದ 'ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು...' ಹಾಡು ತೇಲಿತೇಲಿ ಬರುತ್ತಿದ್ದಂತೆ ಹಿರಿಕಿರಿಯರೆನ್ನದೆ ಕಾಲುಗಳು ತಮ್ಮ ಚಲನವನ್ನು ಬದಲಿಸಿದವು. ಎತ್ತಿನ ಗಾಡಿ ಮೇಲೆ ಕನ್ನಡ ಧ್ವಜವನ್ನು ಹಾರಿಸುತ್ತ ಇದೇ ಹಾಡನ್ನು ರಾಜ್ ಅವರೇ ಜೀವಂತ ಬಂದು ಹಾಡುತ್ತಿದ್ದಾರೇನೋ ಎಂಬಂತೆ ಭಾಸವಾಗಿ ಆ ಸ್ಥಬ್ಧಚಿತ್ರದ ಸುತ್ತ ನೆರೆದ ಜನ ಕುಣಿಯಲು ಪ್ರಾರಂಭಿಸಿದರು. ಮಹಡಿಗಳ ಮೇಲೆ ನಿಂತ ಬಾಂಧವರು ಕೇಕೆ ಹಾಕಿ ಹರ್ಷ ವ್ಯಕ್ತಪಡಿಸಿದರು.
ಇಂದು ಬೆಳಗಾವಿಯಲ್ಲಿ ಕನ್ನಡಿಗರನ್ನು ಬಡಿದೆಬ್ಬಿಸುವ ಭವ್ಯ ಮೆರವಣಿಗೆ ಸಾಗುತ್ತಿದ್ದಂತೆ ನೆರೆದ ಜನಸ್ತೋಮದಲ್ಲಿ ಅಣ್ಣಾವು ನೆನೆಪಾಗಿ ಹರೆದರು. ರಾಜಕುಮಾರರ ಅಭಿಮಾನಿಗಳಲ್ಲಿ ಕೆಲವರು ಇಂದು ಅವರು ಬದುಕಿದ್ದರೆ ಈ ಅಪೂರ್ವ ಸಮ್ಮೇಳನವನ್ನು ಬಹುಶಃ ಉದ್ಘಾಟಿಸುತ್ತಿದ್ದರು ಎಂದು ಅಂದುಕೊಳ್ಳುತ್ತಿದ್ದಂತೆ ನೆರೆದ ಗೆಳೆಯರು ಹೌದು ಎಂದು ಒಪ್ಪಿಗೆ ಸೂಚಿಸಿದರು. ಕನ್ನಡಿಗರ ಹೃಯದ ಸಾಮ್ರಾಜ್ಯದಲ್ಲಿ ಯಾವತ್ತೂ ಮನೆ ಮಾಡಿಕೊಂಡಿರುವ ರಾಜಕುಮಾರ್ ಅವರು ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿರಬಹುದು, ಆದರೆ ಮನದಲ್ಲಿ ಅವರಿದ್ದಾರೆ ಎಂಬ ಭಾವ ಯಾವತ್ತೂ ಜೀವಂತವಾಗಿರುತ್ತದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications