ಅಣ್ಣಾವ್ರ ನೆನಪಲ್ಲಿ ಭಾವುಕವಾದ ಬೆಳಗಾವಿ
ಈ ಜನುಮದಲ್ಲಿ ಬೆಳಗಾವಿ ಕನ್ನಡಿಗರು ಮರೆಯದಂಥ ಮೆರವಣಿಗೆ. ಮೆರವಣಿಗೆ ಸಾಗಿಬಂದ ದಾರಿಯುದ್ದಕ್ಕೂ ಕನ್ನಡದ ನಗಾರಿ ಬಾರಿಸುತ್ತಿದ್ದರೆ ಹಳೆ ತಲೆಮಾರಿನವರಿಗೆ ಮತ್ತು ಕನ್ನಡ ಚಿತ್ರವನ್ನು ಅಪಾರವಾಗಿ ಹಚ್ಚಿಕೊಂಡವರಿಗೆ ವರನಟ ಡಾ. ರಾಜಕುಮಾರ್ ಅವರ ನೆನಪು ಕಾಡಿದ್ದು ಸುಳ್ಳಲ್ಲ.
ದಶಕಗಳ ಹಿಂದೆ ಕನ್ನಡಕ್ಕಾಗಿ ಗೋಕಾಕ್ ಚಳವಳಿಯಲ್ಲಿ ಅಪಾರ ಜನರನ್ನು ಸೆಳೆದಿದ್ದ ರಾಜ್ ಈ ಮೆರವಣಿಗೆಯಲ್ಲೂ ಇದ್ದಿದ್ದರೆ ಮೆರವಣಿಗೆಯ ಕಳೆ ಹೇಗಿರುತ್ತಿತ್ತು ಎಂದು ಹಲವರು ಭಾವುಕರಾದರು. ರಾಜಕುಮಾರ್ ಎಂಬ ಹೆಸರಿನಲ್ಲಿನ ಮೋಡಿಯೇ ಅಂತಹುದು. ಹೆಸರು ಕೇಳುತ್ತಿದ್ದಂತೆ ಮೈಮನಗಳಲ್ಲಿ ಕನ್ನಡ ಆವರಿಸಿಕೊಂಡು ಬಿಡುತ್ತದೆ. ನಮಗೇ ಅರಿವಿಲ್ಲದಂತೆ ಅವರ ನಟನೆಯ ಚಿತ್ರಗಳು ಕಣ್ಮುಂದೆ ಹಾದು, ಹಾಡುಗಳು ಕಿವಿಗಳಲ್ಲಿ ಗುಂಗುಡಲು ಪ್ರಾರಂಭಿಸುತ್ತವೆ.

ಆಕಸ್ಮಿಕ ಚಿತ್ರದಲ್ಲಿ ಹಂಸಲೇಖ ಬರೆದು ಹುಬ್ಬಳ್ಳಿಯಲ್ಲಿ ಚಿತ್ರಿಸಿದ 'ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು...' ಹಾಡು ತೇಲಿತೇಲಿ ಬರುತ್ತಿದ್ದಂತೆ ಹಿರಿಕಿರಿಯರೆನ್ನದೆ ಕಾಲುಗಳು ತಮ್ಮ ಚಲನವನ್ನು ಬದಲಿಸಿದವು. ಎತ್ತಿನ ಗಾಡಿ ಮೇಲೆ ಕನ್ನಡ ಧ್ವಜವನ್ನು ಹಾರಿಸುತ್ತ ಇದೇ ಹಾಡನ್ನು ರಾಜ್ ಅವರೇ ಜೀವಂತ ಬಂದು ಹಾಡುತ್ತಿದ್ದಾರೇನೋ ಎಂಬಂತೆ ಭಾಸವಾಗಿ ಆ ಸ್ಥಬ್ಧಚಿತ್ರದ ಸುತ್ತ ನೆರೆದ ಜನ ಕುಣಿಯಲು ಪ್ರಾರಂಭಿಸಿದರು. ಮಹಡಿಗಳ ಮೇಲೆ ನಿಂತ ಬಾಂಧವರು ಕೇಕೆ ಹಾಕಿ ಹರ್ಷ ವ್ಯಕ್ತಪಡಿಸಿದರು.
ಇಂದು ಬೆಳಗಾವಿಯಲ್ಲಿ ಕನ್ನಡಿಗರನ್ನು ಬಡಿದೆಬ್ಬಿಸುವ ಭವ್ಯ ಮೆರವಣಿಗೆ ಸಾಗುತ್ತಿದ್ದಂತೆ ನೆರೆದ ಜನಸ್ತೋಮದಲ್ಲಿ ಅಣ್ಣಾವು ನೆನೆಪಾಗಿ ಹರೆದರು. ರಾಜಕುಮಾರರ ಅಭಿಮಾನಿಗಳಲ್ಲಿ ಕೆಲವರು ಇಂದು ಅವರು ಬದುಕಿದ್ದರೆ ಈ ಅಪೂರ್ವ ಸಮ್ಮೇಳನವನ್ನು ಬಹುಶಃ ಉದ್ಘಾಟಿಸುತ್ತಿದ್ದರು ಎಂದು ಅಂದುಕೊಳ್ಳುತ್ತಿದ್ದಂತೆ ನೆರೆದ ಗೆಳೆಯರು ಹೌದು ಎಂದು ಒಪ್ಪಿಗೆ ಸೂಚಿಸಿದರು. ಕನ್ನಡಿಗರ ಹೃಯದ ಸಾಮ್ರಾಜ್ಯದಲ್ಲಿ ಯಾವತ್ತೂ ಮನೆ ಮಾಡಿಕೊಂಡಿರುವ ರಾಜಕುಮಾರ್ ಅವರು ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿರಬಹುದು, ಆದರೆ ಮನದಲ್ಲಿ ಅವರಿದ್ದಾರೆ ಎಂಬ ಭಾವ ಯಾವತ್ತೂ ಜೀವಂತವಾಗಿರುತ್ತದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications