ಕನ್ನಡ ಸಾಹಿತ್ಯ ಸಮ್ಮೇಳನ ನಿರ್ಣಯಗಳು

77ನೇ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು ಈ ಕೆಳಗಿನಂತಿವೆ:
* ವ್ಯಾವಹಾರಿಕವಾಗಿ ಕನ್ನಡವನ್ನು ಅನ್ಯಭಾಷಿಕರು ಬಳಸಲೇ ಬೇಕು
* ಈ ಹಿಂದಿನ ಸಮ್ಮೇಳನಗಳಲ್ಲಿ ತೆಗೆದುಕೊಂಡ ನಿರ್ಣಯಗಳ ತ್ವರಿತ ಜಾರಿಗೆ ಆಗ್ರಹ. ಇದಕ್ಕಾಗಿ ಉಪ ಸಮಿತಿ ರಚನೆ.
* ಪ್ರಾಥಮಿಕ ಶಿಕ್ಷಣ(1ನೇ ತರಗತಿ ಇಂದ 4ನೇ ತರಗತಿವರೆಗೆ) ದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸುವುದು.
* ಕೇಂದ್ರೀಯ ಶಾಲೆಗಳಲ್ಲಿ ತ್ರಿಭಾಷಾ ಸೂತ್ರದಂತೆ ಪಾಠ ಪ್ರವಚನ ನಡೆಸಬೇಕು ಅದರಲ್ಲಿ ಕನ್ನಡ ಕಡ್ಡಾಯವಾಗಿರಲೇಬೇಕು.
* ಕನ್ನಡ ಪರ ಹೋರಾಟಗಾರರ ವಿರುದ್ಧದ ಎಲ್ಲಾ ಕೇಸುಗಳನ್ನು ವಾಪಾಸ್ ಪಡೆಯಬೇಕು.
* ಪರಿಷತ್ತಿನ ಜಿಲ್ಲಾ ಘಟಕಗಳಿಗೆ ಉಚಿತ ನಿವೇಶನ ಬೇಕು.
* ಪಂಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆದಿಕವಿ ಪಂಪನ ಜನ್ಮಸ್ಥಳ ಗದಗಿನ ಅಣ್ಣಿಗೇರಿಯಲ್ಲೇ ಆಯೋಜಿಸಬೇಕು.
* ಚಿದಾನಂದ ಮೂರ್ತಿಗೆ ಗೌರವ ಡಾಕ್ಟರೇಟ್ ತಡೆ ನೀಡಿದ ರಾಜ್ಯಪಾಲರ ವಿರುದ್ಧ ಖಂಡನಾ ನಿರ್ಣಯ.
* ಡಬ್ಬಿಂಗ್ ಸಂಸ್ಕೃತಿಗೆ ಅವಕಾಶ ಬೇಡ. ಸ್ವಮೇಕ್ ಚಿತ್ರಗಳಿಗೆ ಆದ್ಯತೆ ನೀಡಿ.
* ಹೈದರಾಬಾದ್ ಕರ್ನಾಟಕ ಕ್ಷೇತ್ರಕ್ಕೆ ವಿಶೇಷ ಆದ್ಯತೆ ಅಗತ್ಯ.371 ವಿಧೇಯಕ ಜಾರಿಗೆ ಆಗ್ರಹ











Click it and Unblock the Notifications