ಮಹಾರಾಷ್ಟ್ರದಲ್ಲಿ ದೇವೇಂದ್ರನ ರಾಜ್ಯಭಾರ ಆರಂಭ
ಮುಂಬೈ, ಅ.31: ವಾಂಖೆಡೆ ಸ್ಟೇಡಿಯಂನಲ್ಲಿ ಕೇಸರಿ ರಂಗು ಚೆಲ್ಲಿದ್ದು, ಎಲ್ಲೆಡೆ ನರೇಂದ್ರ ದೇವೇಂದ್ರ ಜಯಘೋಷಗಳು ಮೊಳಗಿವೆ.ಭಾರತೀಯ ಜನತಾ ಪಕ್ಷ ಮಹಾರಾಷ್ಟ್ರದ ದಿಗ್ವಿಜಯವನ್ನು ಇಂದು ಭರ್ಜರಿಯಾಗಿ ಆಚರಿಸಿಕೊಂಡಿದೆ. ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿ ಶುಕ್ರವಾರ ಸಂಜೆ ಸುಮಾರು 40 ಸಾವಿರಕ್ಕೂ ಅಧಿಕ ಗಣ್ಯರ ಉಪಸ್ಥಿತಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನಾಗಪುರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ದೇವೇಂದ್ರ ಗಂಗಾಧರರಾವ್ ಫಡ್ನವೀಸ್ ಅವರು ಮಹಾರಾಷ್ಟ್ರದ 27ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಿಎಂ ಸ್ಥಾನ ಪಡೆದ 18ನೇ ವ್ಯಕ್ತಿ ಹಾಗೂ ವಿದರ್ಭ ಪ್ರಾಂತ್ಯದ ನಾಲ್ಕನೇ ರಾಜಕಾರಣಿಯಾಗಿದ್ದಾರೆ. 44 ವರ್ಷ ವಯಸ್ಸಿನ ದೇವೇಂದ್ರ ಅವರು ಮಹಾರಾಷ್ಟ್ರದ ಎರಡನೇ ಅತ್ಯಂತ ಕಿರಿಯ ಸಿಎಂ ಎನಿಸಿದ್ದಾರೆ. [ದೇವೇಂದ್ರ ಫಡ್ನವೀಸ್ ವ್ಯಕ್ತಿ ಚಿತ್ರ ಓದಿ]
Mumbai: Devendra Fadnavis takes oath as the Chief Minister of Maharashtra pic.twitter.com/FKyA1uPv3X
— ANI (@ANI_news) October 31, 2014 ಬಾಲಿವುಡ್ ನ ಖ್ಯಾತ ವಿನ್ಯಾಸಗಾರ ನಿತಿನ್ ದೇಸಾಯಿ ಹಾಗೂ ರವಿ ಸಾವ್ಲ ಅವರ ವಿನ್ಯಾಸದ ಸುಂದರ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಗಣ್ಯಾತಿಗಣ್ಯ ನಾಯಕರು, ಬಾಲಿವುಡ್ ತಾರೆಯರು, ಉದ್ಯಮಿಗಳು ಪಾಲ್ಗೊಂಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಅವರು ಸಮಾರಂಭಕ್ಕೆ ಆಗಮಿಸಿ ದೇವೇಂದ್ರ ಅವರಿಗೆ ಶುಭ ಕೋರಿದರು. ಸಮಾರಂಭಕ್ಕೆ ಯಾರೆಲ್ಲ ಬಂದಿದ್ದರು? ಯಾರೆಲ್ಲ ಕ್ಯಾಬಿನೆಟ್ ಸೇರಿದರು ಎಂಬ ವಿವರ ಮುಂದಿದೆ...

ನಾಗಾಪುರ ಮೂಲದ ದೇವೇಂದ್ರ ಫಡ್ನವೀಸ್
ಮಧ್ಯಮ ವರ್ಗದ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ(1970, ಜುಲೈ 22) ದೇವೇಂದ್ರ ಗಂಗಾಧರ ರಾವ್ ಫಡ್ನವೀಸ್ ಅವರು ಸತಾರಾ ಮೂಲದವರು. ಪೇಶ್ವೆಗಳ ಆಳ್ವಿಕೆ ಕಾಲದಲ್ಲಿ ಇವರ ಕುಟುಂಬಕ್ಕೆ ಗ್ರಾಮವೊಂದರ ಉಸ್ತುವಾರಿಕೆ ಲಭಿಸಿತ್ತು. ಈಗ ದೇವೇಂದ್ರ ಅವರಿಗೆ ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿ ಸಿಕ್ಕಿದೆ. ಛತ್ರಪತಿ ಶಿವಾಜಿ, ಬಿ.ಆರ್ ಅಂಬೇಡ್ಕರ್ ಅವರ ಸಿದ್ಧಾಂತದಂತೆ ರಾಜ್ಯಭಾರ ಮಾಡುವುದಾಗಿ ದೇವೇಂದ್ರ ಹೇಳಿದ್ದಾರೆ

ಕ್ಯಾಬಿನೆಟ್ ಸೇರಿದ ಪಂಕಜಾ ಮುಂಡೆ
ಮಹಾರಾಷ್ಟ್ರ ಮುಖ್ಯಮಂತ್ರಿ ರೇಸ್ನಲ್ಲಿ ಪ್ರಮುಖವಾಗಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ದೇವೇಂದ್ರ ಫಡ್ನವೀಸ್(44) ಮತ್ತು ದಿ.ಗೋಪಿನಾಥ್ ಮುಂಡೆ ಅವರ ಮಗಳಾದ ಪಂಕಜಾ ಮುಂಡೆ ಅವರ ಹೆಸರುಗಳ ಬಲವಾಗಿ ಕೇಳಿ ಬಂದಿತ್ತು. ಇವರಷ್ಟೇ ಅಲ್ಲದೇ ಪಕ್ಷ ಹಿರಿಯ ಮುಖಂಡರಾದ ಏಕನಾಥ್ ಖಡ್ಸೆ ಮತ್ತು ವಿನೋದ್ ತಾವ್ಡೆ ಅವರ ಹೆಸರು ಕೂಡ ಸಿಎಂ ರೇಸ್ನಲ್ಲಿದ್ದರು

ಪ್ರಮಾಣ ವಚನ ಸ್ವೀಕರಿಸಿದವರು
* ಏಕನಾಥ್ ಖಾಡ್ಸೆ
* ಸುಧೀರ್ ಮುಂಗತಿವಾರ್
*ವಿನೋದ್ ತಾವ್ಡೆ (ಚಿತ್ರದಲ್ಲಿ)
* ಪಂಕಜಾ ಮುಂಡೆ
* ಪ್ರಕಾಶ್ ಮೆಹ್ತಾ
* ವಿಷ್ಣು ಸಾವ್ರಾ
* ಚಂದ್ರಕಾಂತ್ ಪಾಟೀಲ್
* ದಿಲೀಪ್ ಕಾಂಬ್ಳೆ (ರಾಜ್ಯ ಸಚಿವರು)
* ವಿದ್ಯಾ ಠಾಕೂರ್ (ರಾಜ್ಯ ಸಚಿವರು)
|
ಗುರು ಶಿಷ್ಯರ ಸಮಾಗಮಕ್ಕೆ ವೇದಿಕೆ
ದೇವೇಂದ್ರ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಗುರು ಶಿಷ್ಯರ ಸಮಾಗಮಕ್ಕೆ ವೇದಿಕೆಯಾಯಿತು. ಎಲ್ ಕೆ ಅಡ್ವಾಣಿ ಹಾಗೂ ನರೇಂದ್ರ ಮೋದಿ, ನಿತಿನ್ ಗಡ್ಕರಿ ಹಾಗೂ ದೇವೇಂದ್ರ ಫಡ್ನವೀಸ್ ಸಂತಸದ ಕ್ಷಣದಲ್ಲಿ ಭಾಗಿಯಾಗಿದ್ದರು.
|
ಉದ್ಧವ್ ಠಾಕ್ರೆ ಸಮಾರಂಭಕ್ಕೆ ಆಗಮನ
ದೇವೇಂದ್ರ ಫಡ್ನವೀಸ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬೆಳಗ್ಗೆಯಿನ್ನೂ ಶಿವಸೇನಾದ ಮುಖವಾಣಿಯಲ್ಲಿ ಬರೆದುಕೊಂಡಿದ್ದ ಉದ್ದವ್ ಠಾಕ್ರೆ ಅವರು ವೇದಿಕೆ ಏರಿ ಗುಮ್ಮನಂತೆ ಕುಳಿತ್ತಿದ್ದು ಎದ್ದು ಕಾಣುತ್ತಿತ್ತು.

ಸಿನಿಮಾ ಮಂದಿ ಯಾರು ಬಂದಿದ್ರು?
ಅಮಿತಾಬ್ ಬಚ್ಚನ್, ಸೋನಾಕ್ಷಿ ಸಿನ್ಹಾ, ಹೃತಿಕ್ ರೋಷನ್, ವಿವೇಕ್ ಒಬೆರಾಯ್, ಮಧುರ್ ಭಂಡರ್ಕಾರ್, ವಿವೇಕ್ ಒಬೆರಾಯ್ ಸೇರಿದಂತೆ ಹಲವಾರು ಬಾಲಿವುಡ್ ಹಾಗೂ ಕಿರುತೆರೆ ನಟ ನಟಿಯರು ಆಗಮಿಸಿದ್ದರು.
|
ಮುಖ್ಯಮಂತ್ರಿಗಳು, ಇತರೆ ರಾಜಕಾರಣಿಗಳು
ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ಗೋವಾದ ಮನೋಹರ್ ಪಾರಿಕ್ಕರ್, ಶಿವರಾಜ್ ಸಿಂಗ್ ಚೌಹಾಣ್, ಪ್ರಕಾಶ್ ಸಿಂಗ್ ಬದಾಲ್, ವಸುಂಧರಾ ರಾಜೇ
|
ಸಮಾರಂಭದಲ್ಲಿ ಉದ್ಯಮಿಗಳು, ಕ್ರಿಕೆಟರ್ಸ್
ಮಾಜಿ ಕ್ರಿಕೆಟರ್ಸ್ ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್ ಸರ್ಕಾರ್, ಹಾಕಿ ಪಟು ಧನರಾಜ್ ಪಿಳ್ಳೈ, ಉದ್ಯಮಿಗಳಾದ ಗೌತಮ್ ಅದಾನಿ, ಕುಮಾರ್ ಮಂಗಳಂ ಬಿರ್ಲಾ, ರಾಜಶ್ರೀ ಬಿರ್ಲಾ, ನಿರಂಜನ್ ಹಿರಾನಂದನಿ, ಬಿಕೆ ಗೋಯಿಂಕಾ
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications