ಯುಎಇನಲ್ಲಿ ಇರುವ ದಾವೂದ್ ಆಸ್ತಿ ಶೀಘ್ರ ಮುಟ್ಟುಗೋಲು?
ಪ್ರಧಾನಿ ಮೋದಿಯವರು ಕಳೆದ ವರ್ಷದ ಯುಎಇ ಭೇಟಿಯ ನಂತರ ಯುಎಇ ಸರ್ಕಾರ, ದಾವೂದ್ ಅಕ್ರಮ ಆಸ್ತಿ ಬಗ್ಗೆ ತನಿಖೆ ಆರಂಭಿಸಿದೆ. ಆದಷ್ಟು ಬೇಗನೇ ಈ ತನಿಖೆ ಮುಗಿದು, ಆಸ್ತಿಯನ್ನು ಯುಎಇ ಮುಟ್ಟುಗೋಲು ಹಾಕಿಕೊಳ್ಳಬೇಕೆಂಬುದು ಭಾರತದ ಅಭಿಲಾಷೆಯಾಗಿದೆ.
ನವದೆಹಲಿ, ಜನವರಿ 26: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ಭೂಗತ ದೊರೆ ದಾವೂದ್ ಇಬ್ರಾಹೀಂಗೆ (ಯುಎಇ) ಸೇರಿದ ತನಿಖೆಯನ್ನು ಬೇಗನೇ ಪೂರ್ತಿಗಳೊಸಿ, ಆಸ್ತಿಯನ್ನು ಶೀಘ್ರವೇ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು, ಯುಎಇ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅಲ್ ನಹಯಾನ್ ಅವರಲ್ಲಿ ಮನವಿ ಮಾಡಿದ್ದಾರೆ.
ಗಣರಾಜ್ಯೋತ್ಸವದ ಅತಿಥಿಯಾಗಿ ಭಾರತಕ್ಕೆ ಆಗಮಿಸಿರುವ ಶೇಖ್ ಮೊಹಮ್ಮದ್ ಅವರು, ಭಾರತದೊಂದಿಗೆ ಸುಮಾರು 14 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಅವುಗಳ ಮಾತುಕತೆಗಾಗಿ ಮೋದಿಯವರು ಶೇಖ್ ಜತೆ ಮಾತುಕತೆಯಲ್ಲಿ ನಿರತರಾಗಿದ್ದಾಗ ಮೋದಿಯವರು ಈ ವಿಚಾರವನ್ನು ರಾಜಕುಮಾರ ಅವರ ಗಮನಕ್ಕೆ ತಂದಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಕಳೆದ ವರ್ಷ ನರೇಂದ್ರ ಮೋದಿಯವರು ಯುಎಇಗೆ ಭೇಟಿ ನೀಡಿದ್ದಾಗಲೇ ದಾವೂದ್ ಇಬ್ರಾಹೀಂ ಅಲ್ಲಿ ಬೇನಾಮಿ ಹೆಸರಲ್ಲಿ ಮಾಡಿರುವ ಮಿಲಿಯನ್ ಗಟ್ಟಲೇ ಆಸ್ತಿಯ ಪಟ್ಟಿಯುಳ್ಳ ಕಡತವೊಂದನ್ನು ನೀಡಿದ್ದರು. ಆ ಕಡತವನ್ನು ಜಾರಿ ನಿರ್ದೇಶನಾಲಯ ತಯಾರಿಸಿತ್ತು. ಆಗ ಅವರೊಂದಿಗೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಕೂಡಾ ಇದ್ದರು.
ಅದರಲ್ಲಿ ದಾವೂದ್, ತನ್ನ ಸಹೋದರನ ಹೆಸರಿನಲ್ಲಿ ಗೋಲ್ಡನ್ ಬಾಕ್ಸ್ ಎಂಬ ಹೆಸರಿನ ಕಂಪನಿಯನ್ನು ದುಬೈನಲ್ಲಿ ನಡೆಸುತ್ತಿರುವುದೂ ಸೇರಿದಂತೆ ಹಲವಾರು ಐಶಾರಾಮಿ ಹೋಟೆಲ್ ಗಳು ಮತ್ತಿತರ ಆಸ್ತಿಗಳ ಸಂಪೂರ್ಣ ವಿವರ ಇದ್ದವು.
ಹಾಗಾಗಿ, ಮೋದಿಯವರ ಯುಎಇ ಭೇಟಿ ಮುಗಿದ ಕೂಡಲೇ (ಅಕ್ಟೋಬರ್ 2016) ಇಲ್ಲಿ ಯುಎಇ ಸರ್ಕಾರ ದಾವೂದ್ ಆಸ್ತಿ ವಿರುದ್ಧ ತನಿಖೆ ಆರಂಭಿಸಿತ್ತು. ತನಿಖೆ ಇನ್ನೂ ಪ್ರಗತಿಯಲ್ಲಿದೆ.
ಹಾಗಾಗಿಯೇ, ಮೋದಿಯವರು ಈಗ ಪುನಃ ಈ ವಿಚಾರವನ್ನು ಶೇಖ್ ಅವರಿಗೆ ಮನವರಿಕೆ ಮಾಡಿಕೊಟ್ಟು, ದಾವೂದ್ ಆಸ್ತಿ ಮುಟ್ಟುಗೋಲು ಪ್ರಕ್ರಿಯೆಯನ್ನು ಆದಷ್ಟು ಬೇಗನೇ ಮಾಡಿ ಮುಗಿಸಬೇಕೆಂದು ಕೋರಿದ್ದಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications