ಭಾರತೀಯ ಭಾಷೆ ಕಲಿಯಲು ಆಪಲ್ ಅಪ್ಲಿಕೇಷನ್

ವಿಶ್ವದೆಲ್ಲೆಡೆ ಹರಡಿರುವ ಭಾರತೀಯ ಜನರು ಫೋನ್ ಮೂಲಕ ಮಾತನಾಡುವಾಗ ಅಥವಾ ಸಂದೇಶ ಕಳಿಸುವಾಗ ಹೆಚ್ಚಾಗಿ ತಮ್ತಮ್ಮ ಭಾಷೆಯನ್ನೇ ಸಹಜವಾಗಿ ಬಳಸುತ್ತಾರೆ. ಆದರೆ, ಮೊಬೈಲ್ ಫೋನ್ ಗಳಲ್ಲಿ ಭಾಷೆ ಕಳಿಸಬಲ್ಲ ಸಾಧನ ತೀರಾ ವಿರಳ. ಅಮೆರಿಕದಲ್ಲಿ ಅತ್ಯಧಿಕವಾಗಿ ಜಾಲ ಹೊಂದಿರುವ ಐಫೋನ್ ಉತ್ಪನ್ನಗಳ ಮೂಲಕ ಭಾರತೀಯ ಭಾಷೆಗಳನ್ನು ಸುಲಭವಾಗಿ ಕಲಿಯಬಲ್ಲ ಸಾಧನವನ್ನು ಏಮ್ ಕಾರ ಎಂಬ ಸಂಸ್ಥೆ ವಿನ್ಯಾಸಗೊಳಿಸಿದೆ.
ಜಾಗತಿಕವಾಗಿ ಎಲ್ಲೆಡೆ ಭಾರತೀಯರು ಹರಡಿರುವುದರಿಂದ, ನಮ್ಮ ಸ್ಥಳೀಯ ಭಾಷೆಗಳು ಕೂಡಾ ವಲಸೆ ಹೋಗಿ ವಿಶ್ವದ ಇತರೆ ಜನರಿಗೆ ರುಚಿ ಹತ್ತಿಸಿದೆ. ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಅದರಲ್ಲೂ ಮೊಬೈಲ್ ಫೋನ್ ನಲ್ಲಿ ಭಾರತೀಯ ಭಾಷೆ ಲಭ್ಯವಿಲ್ಲದಿರುವುದನ್ನು ಮನಗಂಡ ಏಮ್ ಕಾರ ಸಂಸ್ಥೆ, ಆಪಲ್ ಉತ್ಪನ್ನಗಳಾದ ಐಫೋನ್, ಐಪೊಡ್, ಐಪ್ಯಾಡ್ ಮೂಲಕ ಭಾಷೆ ಕಲಿಸುವ ಅಪ್ಲಿಕೇಷನ್ ಅನ್ನು ಆಪ್ ಸ್ಟೋರ್ ನಲ್ಲಿ ಪರಿಚಯಿಸಿದೆ.
ಮೊಬೈಲ್ ಮೂಲಕ ಭಾರತೀಯ ಭಾಷೆಯನ್ನು ಸರಳ ಹಾಗೂ ಸುಲಭವಾಗಿ ಕಲಿಯಬಹುದಾಗಿದೆ. ಮಕ್ಕಳಿನಿಂದ ಹಿಡಿದು ಮುದುಕರವರೆಗೂ ಎಲ್ಲರೂ ಶಬ್ದ ಹಾಗೂ ವ್ಯಾಕರಣಬದ್ಧವಾದ ಭಾಷೆಯನ್ನು ಕಲಿಯಲು ಅನುಕೂಲ ಕಲ್ಪಿಸಲಾಗಿದೆ.
ಆಡಿಯೋ ವಿಷ್ಯುಯಲ್ ಸೌಲಭ್ಯವನ್ನು ಒದಗಿಸಲಾಗಿರುವುದರಿಂದ ಅಪ್ಲಿಕೇಷನ್ ಇನ್ನಷ್ಟು ಆಕರ್ಷಣೆಯುಕ್ತವಾಗಿದೆ. ಆಪ್ ಸ್ಟೋರ್ ನಲ್ಲಿ ಎಮ್ ಕಾರಾ ಭಾಷೆ ಅಪ್ಲಿಕೇಷನ್ ಆವೃತ್ತಿ 1.0 ಡೌನ್ ಲೋಡ್ ಲಭ್ಯವಿದೆ. ಮುಂದಿನ ದಿನಗಳಲ್ಲಿ ತಾಂತ್ರಿಕವಾಗಿ ಇನ್ನಷ್ಟು ಹೆಚ್ಚಿನ ಸೌಲಭ್ಯಗಳನ್ನು ನೀಡಿ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಪೂರ್ತಿ ಶೈಕ್ಷಣಿಕ ಪಠ್ಯವನ್ನು ಸೇರಿಸಲಾಗುವುದು. ಇನ್ಮುಂದೆ ಗ್ರಾಹಕರು ಯಾವುದೇ ಭಾಷೆಯನ್ನು ಓದಿ, ಬರೆದು ಸುಲಲಿತವಾಗಿ ಮಾತನಾಡಬಲ್ಲರು ಎಂದು ಏಮ್ ಕಾರ ಸಂಸ್ಥೆ ಹೇಳಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications