For Daily Alerts
‘ದಿ ರಿಟರ್ನ್ ಜರ್ನಿ’: ಬಹುಮುಖ ಪ್ರತಿಭೆಯ ಕೃಷ್ಣಾನಂದ ಕಾಮತ್ ನಿಧನ
ಬೆಂಗಳೂರು: ಬರಹ ಕೃಷಿ, ವಿಜ್ಞಾನ, ಛಾಯಾಗ್ರಹಣ, ಚಿತ್ರಕಲೆ ಮುಂತಾದ ವಿಭಿನ್ನ ರಂಗಗಳಲ್ಲಿ ಪರಿಣತಿ ಸಾಧಿಸಿ ಹೆಸರು ಮಾಡಿದ್ದ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕ ಡಾ.ಕೃಷ್ಣಾನಂದ ಕಾಮತ್ ತೀವ್ರ ಹೃದಯಾಘಾತದಿಂದ ಬುಧವಾರ ರಾತ್ರಿ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು .
ಅಸ್ವಸ್ಥಗೊಂಡಿದ್ದ ಕೃಷ್ಣಾನಂದ ಕಾಮತ್ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು . ಪತ್ನಿ ಜ್ಯೋತ್ಸ್ನಾ ಕಾಮತ್ ಹಾಗೂ ಪುತ್ರ ವಿಕಾಸ್ ಕಾಮತ್ ಅವರನ್ನು ಮೃತರು ಅಗಲಿದ್ದಾರೆ. ಮುಖಪುಟ / ಇವತ್ತು... ಈ ಹೊತ್ತು...
Story first published: Thursday, February 21, 2002, 5:30 [IST]