ಐರೋಪ್ಯ ಪ್ರಭಾವದಿಂದ ಮನ್ನಣೆ ವಂಚಿತ ಸಾಹಿತ್ಯದೈತ್ಯಕಾರಂತ-ಅನಂತಮೂರ್ತಿ
ಬೆಂಗಳೂರು : ಸ್ವಾತಂತ್ರ್ಯಕ್ಕೆ ಮುಂಚೆ ರವೀಂದ್ರನಾಥ ಟ್ಯಾಗೋರ್ ಸಾಹಿತ್ಯ ಪುರುಷ. ಸ್ವಾತಂತ್ರ್ಯಾ ನಂತರ ಡಾ.ಶಿವರಾಮ ಕಾರಂತರು ಸಾಹಿತ್ಯದಲ್ಲಿ ದೈತ್ಯ ಶಕ್ತಿಯಾಗಿ ಬೆಳೆದರು. ಐರೋಪ್ಯ ಚಿಂತನೆಯ ಪ್ರಭಾವ ಹೆಚ್ಚಾದ್ದರಿಂದ ಟ್ಯಾಗೋರರಿಗೆ ಸಿಕ್ಕ ಮನ್ನಣೆ ಕಾರಂತರಿಗೆ ಸಿಗಲಿಲ್ಲ.
ತುಮಕೂರಿನಲ್ಲಿ ನಡೆಯಲಿರುವ 69ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಯು.ಆರ್.ಅನಂತಮೂರ್ತಿ ದಕ್ಷಿಣ ಕನ್ನಡದವರನ್ನು ಉದಾಹರಣೆಯಾಂದಿಗೆ ಶ್ಲಾಘಿಸಿದ್ದು ಹೀಗೆ. ಸಂದರ್ಭ- ದಕ್ಷಿಣ ಕನ್ನಡಿಗರ ಸಂಘ ಚಿತ್ರಕಲಾ ಪರಿಷತ್ನಲ್ಲಿ ಭಾನುವಾರ ಏರ್ಪಡಿಸಿದ್ದ ಪರಶುರಾಮ ಪ್ರಶಸ್ತಿ ಪ್ರದಾನ ಸಮಾರಂಭ. ನಟಿ ಜಯಮಾಲಾ, ಸಾಹಿತಿ ನಾ.ಮೊಗಸಾಲೆ, ಪ್ರೀಡಾಪಟು ಆಶೀಶ್ ಬಲ್ಲಾಳ್, ಲೇಖಕಿ ಗಾಯತ್ರಿ ನಾವಡ ಸೇರಿದಂತೆ 14 ಮಂದಿಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ಎಲ್ಲೆಡೆಗೂ ಸಂದ ದಕ್ಷಿಣ ಕನ್ನಡದವರು : ಸಮಾರಂಭದಲ್ಲಿ ಉದ್ಘಾಟನಾ ಭಾಷಣ ಮಾಡಿದ ಅನಂತಮೂರ್ತಿ, ಬೆಳೆಯುವವರಿಗೆ ಮುಂಬಯಿ ಸಾಕಷ್ಟು ಅವಕಾಶ ಕೊಡುತ್ತದೆ. ಅದನ್ನು ಸದುಪಯೋಗ ಮಾಡಿಕೊಂಡವರು ಕರಾವಳಿ ಜನ. ತಾವೂ ಬೆಳೆದು ಜಿಲ್ಲೆಯ ಸಂಸ್ಕೃತಿಯನ್ನೂ ಬೆಳೆಸುತ್ತಿರುವ ಹೆಮ್ಮೆಯ ಜನ ಇವರು. ರಾಷ್ಟ್ರದಲ್ಲಿ ಕೇರಳ ರಾಜ್ಯದವರನ್ನು ಬಿಟ್ಟರೆ ಇಡೀ ಜನಾಂಗವೇ ಬೇರೆ ಜಾಗಕ್ಕೆ ಹೋಗಿ, ವಿದ್ಯಾವಂತರಾಗಿ, ತಮ್ಮ ಕಾಲ ಮೇಲೆ ನಿಂತವರೆಂದರೆ ದಕ್ಷಿಣ ಕನ್ನಡದವರು ಮಾತ್ರ ಎಂದು ಹೊಗಳಿದರು.
ದಕ್ಷಿಣ ಕನ್ನಡ ಜನ ಅನುಭವಿಸಿದ ಒಳ ಒತ್ತಡವೇ ಅವರಿಗೆ ಸಾಹಸದ ದಾರಿಯಾಯಿತು. ಹೀಗಾಗಿ ಇಡೀ ಜಿಲ್ಲೆಯೇ ಮೇಲೆ ಬಂತು. ಈ ಜಿಲ್ಲೆಯ ಎಲ್ಲ ಜಾತಿಯ ಜನರಲ್ಲಿ ಈಗ ಬುದ್ಧಿವಂತರಿದ್ದಾರೆ. ಕೊಂಕಣಿ, ತುಳು ಹಾಗೂ ಕನ್ನಡ ಭಾಷೆಗಳು ಒಟ್ಟಾಗಿ ಬೆಳೆದಿವೆ ಎಂದರು.
ಅನ್ನ ವಿಕ್ರಯ ಮಾಡಬೇಡ : ತಮ್ಮ ಆಗಿನ ದಿನಗಳನ್ನು ಅನಂತಮೂರ್ತಿ ನೆನಪಿಸಿಕೊಂಡದ್ದು ಹೀಗೆ- ನಾನಂತೂ ಯಾವುದೇ ಕಾರಣಕ್ಕೂ ಹೊಟೇಲ್ ಇಡಕೂಡದು ಅಂತ ತೀರ್ಮಾನಿಸಿದ್ದೆ. ಕಷ್ಟಪಟ್ಟು ಓದುವುದೊಂದೇ ಅದಕ್ಕೆ ಮಾರ್ಗ ಎನ್ನುವುದನ್ನೂ ಕಂಡುಕೊಂಡಿದ್ದೆ. ಇದಕ್ಕೆ ಇಂಬಾಗಿ ನನ್ನ ತಾತ, ಯಾವುದೇ ಕಾರಣಕ್ಕೂ ಅನ್ನ ವಿಕ್ರಯ ಮಾಡಬೇಡ ಎಂದು ಹೇಳುತ್ತಿದ್ದರು.
ಪುನರೂರು ಟೀಕಾ ಪ್ರಹಾರ : ಡಾ.ಅನಂತ ಮೂರ್ತಿಯವರ ಸೃಜನಶೀಲತೆ, ಪಾಂಡಿತ್ಯಕ್ಕೆ ತುಮಕೂರಿನಲ್ಲಿ ನಡೆಯಲಿರುವ 60ನೇ ಅಖಿಲ ಭಾರತ ಸಮ್ಮೇಳನದ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಬೇರೆಯವರು ಬೆಳೆಯುವುದನ್ನು ಸಹಿಸದ ಕೆಲವರು ತಡವಾಗಿ ಎಚ್ಚೆತ್ತುಕೊಂಡಿದ್ದಾರೆ. ಅಂಥವರ ಮಾತುಗಳ ಬಗೆಗೆ ಯೋಚನೆ ಮಾಡುವ ಅವಶ್ಯಕತೆ ಇಲ್ಲ ಎಂದು ಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು ಅನಂತಮೂರ್ತಿಯವರ ವಿರುದ್ಧ ದನಿಯೆತ್ತಿರುವವರಿಗೆ ಟೀಕಾ ಪ್ರಹಾರ ಮಾಡಿದರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications