ಕಾಶ್ಮೀರದ ಬಿಲ್ಹಣ ಬರೆದ ‘ಚೌರ-ಪಂಚಾಶಿಕಾ’ದಿಂದ ಆಯ್ದ ಪದ್ಯಗಳು
ಭಾರತೀಯರ ಅತಿದೊಡ್ಡ ರಮ್ಯ ಕನಸು'ಕಾಶ್ಮೀರ’ ; ಅತಿದೊಡ್ಡ ದುರಂತವೂ ಕಾಶ್ಮೀರ! ಇದನ್ನು ವಿಪರ್ಯಾಸ ಅನ್ನುತ್ತೀರಾ, ವಿಧಿ ವಿಪರೀತ ಅನ್ನುತ್ತೀರಾ ? ನಮ್ಮೆಲ್ಲರ ಹೆಮ್ಮೆಗೆ ಕಾರಣವಾಗಬೇಕಿದ್ದ ಚೆಲುವಿನ ಪವಿತ್ರ ಕೊಳ್ಳದಲ್ಲಿ ನಿತ್ಯ ರಕ್ತಪಾತ. ಕಾಶ್ಮೀರ ಕೊಳ್ಳದ ನೆತ್ತರ ಕತೆಗಳ ಕೇಳಿ ಕೇಳಿ ಮನಸ್ಸುಗಳು ಜಡ್ಡುಗಟ್ಟಿವೆ. ಕಾಶ್ಮೀರ ಎಂದರೆ- ಕಣ್ಣ ಮುಂದೆ ಬರುವುದು ಪ್ರಕೃತಿಯ ಸುರ ಸೌಂದರ್ಯ, ಸೇಬು, ಶೀತಲ ಗಾಳಿ, ಸುಂದರ ಸ್ತ್ರೀ ಪುರುಷರು... ಉಹ್ಞೂಂ.. ಕೋವಿ ಗುರಿಯಲ್ಲಿ ಬದುಕು ಸವೆಸುತ್ತಿರುವ ಭಯಗ್ರಸ್ತ ಮುಖಗಳೇ ಕಣ್ಣೆದುರು ಕುಣಿಯುತ್ತವೆ. ನಮ್ಮ ಕಾಶ್ಮೀರ ಹೇಗಿತ್ತು ಗೊತ್ತಾ ? ಇಂಥದೊಂದು ಸಾಂಸ್ಕೃತಿಕ ಅಧ್ಯಯನದ ಲೇಖನಮಾಲೆ ದಟ್ಸ್ಕನ್ನಡಲ್ಲಿ ಪ್ರಾರಂಭವಾಗುತ್ತಿದೆ. ಪ್ರತಿ ಬುಧವಾರ ಪ್ರಕಟವಾಗುವ ಶಿಕಾರಿಪುರ ಹರಿಹರೇಶ್ವರ ಅವರ ಈ ಲೇಖನ ಮಾಲೆ ಕೆಲವು ವಾರಗಳ ಕಾಲ ಮುಂದುವರಿಯಲಿದೆ. ಕಾಶ್ಮೀರ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತು . ಆದರೆ ಹೇಗಿತ್ತು ಗೊತ್ತಾ ? ಪೂರ್ವಸೂರಿಗಳು ಕಂಡ ಕಾಶ್ಮೀರಕ್ಕೆ ನಿಮಗೆಲ್ಲ ಸ್ವಾಗತ.
ಹನ್ನೊಂದನೆಯ ಶತಮಾನದಲ್ಲಿ (ಸುಮಾರು 1041 ರಿಂದ 1088) ಕಾಶ್ಮೀರದಿಂದ ಕರ್ನಾಟಕಕ್ಕೆ ಬಂದು, ಕಲ್ಯಾಣದ ಚಾಳುಕ್ಯರ ಹೆಸರಾಂತ ದೊರೆ, ಆರನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿ ರಾಜಪೂಜಿತನಾಗಿದ್ದ ಸಂಸ್ಕೃತ ಕವಿ ಬಿಲ್ಹಣ ತನ್ನ ಐತಿಹಾಸಿಕ ಕಾವ್ಯ 'ವಿಕ್ರಮಾಂಕದೇವ-ಚರಿತ’ದಿಂದ ಹೆಸರು ಮಾಡಿರುವ ಕವಿ. ಹದಿನೆಂಟು ಸರ್ಗಗಳ ಆ ಮಹಾಕಾವ್ಯವಲ್ಲದೆ, 'ಕರ್ಣಸುಂದರಿ’ ಎಂಬ ನಾಲ್ಕಂಕಗಳ ನಾಟಕವೊಂದನ್ನೂ, 'ಬಿಲ್ಹಣ ಚರಿತ’ ಎಂಬ ಆತ್ಮಕಥನವೊಂದನ್ನೂ ಬರೆದಿರುವನೆಂಬ ಮಾತಿದೆ. ಇವೆಲ್ಲಕ್ಕೂ ಮಿಗಿಲಾಗಿ, ಬಿಲ್ಹಣನನ್ನು ದೇಶಿ-ವಿದೇಶೀಯರು ಅಂದಿನಿಂದ ಇಂದಿನವರೆಗೂ ಬೇರೆ ಬೇರೆ ವಿಧಗಳಲ್ಲಿ ನೆನೆಸಿಕೊಳ್ಳುವಂತೆ ಮಾಡಿರುವುದು ಅವನ ಹೆಸರಿನಲ್ಲಿ ಇನ್ನೊಂದು ಖಂಡಕಾವ್ಯವೊಂದಿದೆ : ಅದೇ 'ಚೌರ-ಪಂಚಾಶಿಕಾ’ ಎಂಬ ಶೃಂಗಾರ ಕಾವ್ಯ.
ರಸಿಕರು ಕೇಳಿ, ಓದಿ, ಬಾಯಿ ಚಪ್ಪರಿಸುವ ಇದನ್ನು 'ಚೌರೀ-ಸುರತ-ಪಂಚಾಶಿಕಾ’ ಎನ್ನುವುದೂ ಉಂಟು. (ಸಂಸ್ಕೃತದಲ್ಲಿ 'ಪಂಚಾಶತ್’ ಎಂದರೆ ಐವತ್ತು ; 'ಪಂಚಾಶಿನ್’ ಎಂದರೆ ಎಂದರೆ ಐವತ್ತರಿಂದ ಕೂಡಿರುವ- ಎಂಬ ಅರ್ಥ ಇದೆ.) ಐವತ್ತು ಪದ್ಯಗಳ ಈ 'ಬಿಲ್ಹಣ ಕಾವ್ಯ’ಕ್ಕೆ ಕಾಶ್ಮೀರದ ಮತ್ತು ದಾಕ್ಷಿಣಾತ್ಯ ಎಂಬ ಎರಡು ಪಾಠಾಂತರಗಳಿವೆ; ಹೇರಳವಾಗಿ ಭಾಷ್ಯಗಳೂ ಇವೆ. ಇದು ದೇಶ-ವಿದೇಶದ ಹಲವಾರು ಭಾಷೆಗಳಿಗೆ ಅನುವಾದವಾಗಿದೆ; ಕಾವ್ಯದ ಬಗ್ಗೆ ಊಹಾಪೋಹೆಗೆ ಕಡಿವಾಣ ಕಾಣದೆ, ಹುಟ್ಟಿಕೊಂಡ ಹತ್ತಾರು ದಂತಕಥೆಗಳು ಇವೆ.
ಈ ಕಾವ್ಯ, ಒಬ್ಬ ರಾಜಕುವರಿಯನ್ನು ಕವಿ ಮನಸಾರೆ ಪ್ರೀತಿಸಿ, ಒಳಮನೆಯಲ್ಲಿ ತಾನು ಅವಳೊಡನೆ ಕಳೆದ ರಸನಿಮಿಷಗಳನ್ನು ಓದುಗರ ಕಣ್ಣಿಗೆ ಕಟ್ಟುವಂತೆ ಸವಿವರ ಬಣ್ಣಿಸುವ ಸಾಕ್ಷ್ಯಚಿತ್ರ. ಸ್ವರ್ಗಕ್ಕೆ ಕಿಚ್ಚು ಹಚ್ಚುವ ಆ ಬೆಚ್ಚನೆಯ ಕ್ಷಣಗಳು ಕವಿಯ ಮನಸ್ಸಿನ ಮೇಲೆ ಅಚ್ಚೊತ್ತಿದಂತೆ ಇವೆಯಂತೆ; ಅವುಗಳನ್ನು 'ಇಂದಿಗೂ ಮರೆಯಲಾರೆ’ ಎನ್ನುತ್ತ ಮತ್ತೆ ಮತ್ತೆ ಮೆಲುಕು ಹಾಕುತ್ತಾನೆ, ಆದರೆ ಓದುಗರಿಗೆ ಕೇಳಿಸುವಂತೆ ಸ್ವಲ್ಪ ಜೋರಾಗಿಯೇ ! ವಾತ್ಸ್ಯಾಯನ ಹೇಳಿದ್ದೆಲ್ಲ ಓದದೇ ಮಾಡಿದೆ- ಎಂದ ಹಾಗೆ ; 'ಅಮರುಶತಕ’ದ ಅಮರು ಕವಿ, 'ಶೃಂಗಾರ ಶತಕ’ದ ಭರ್ತೃಹರಿ, 'ಗೀತಗೋವಿಂದ’ದ ಜಯದೇವ, 'ಭಾಮಿನೀ ವಿಲಾಸ’ದ ಜಗನ್ನಾಥ ಪಂಡಿತರುಗಳೊಂದಿಗೆ ಸಹಪಂಕ್ತಿ ಭೂರಿ ಭೋಜನಕ್ಕೆ ಕುಳಿತ ಹಾಗೆ !
ಕವಿಯ ಕಲ್ಪನಾ ವಿಲಾಸವೇ ಈ ಕಾವ್ಯದ ವಸ್ತು ಏಕೆ ಆಗಿರಬಾರದು - ಎಂಬ ಮಾತನ್ನು ಒಪ್ಪದ ಜನ, ಇಂಥ ಸೂಕ್ಷ್ಮಾತಿ ಸೂಕ್ಷ್ಮ ವಿಚಾರ ತಿಳಿಸಲು, ಹಿನ್ನೆಲೆಯಾಗಿ ಕವಿಯ ಸ್ವ-ಅನುಭವವೇ ಇರಬೇಕು, ಹಾಗಲ್ಲದೇ ಬೇರೆ ಹೇಗೆ ಸಾಧ್ಯ- ಎಂದು ಅವರು ವಾದಿಸುತ್ತಾರೆ. ಕವಿ ರಾಜಪುತ್ರಿಯಾಬ್ಬಳನ್ನು ಕದ್ದು ಕದ್ದು ಪ್ರೇಮಿಸಿದ್ದ ; ರಾಜನಿಗೆ ಅದು ತಿಳಿಯಿತು ; ಕೋಪಗೊಂಡ ರಾಜ ಕವಿಯನ್ನು ಸೆರೆಮನೆಗೆ ತಳ್ಳಿದ; ಮರಣದಂಡನೆಯನ್ನೂ ವಿಧಿಸಿದ ! ಪ್ರೇಯಸಿಯಾಂದಿಗೆ ತಾನು ಕಳೆದ ಸುರತಕ್ರೀಡೆಯ ಆ ಎಲ್ಲ ಕ್ಷಣಗಳನ್ನು ನೆನೆಸಿಕೊಂಡು 'ಇಂದಿಗೂ’(ಅದ್ಯಾಪಿ) ಮರೆಯಲಾರೆ, ಮರೆಯಲಾರೆ- ಎಂದು ಐವತ್ತು ಪದ್ಯಗಳನ್ನು ರಚಿಸಿ, ತನ್ನ ಕೊನೆಯ ನಿಮಿಷಗಳನ್ನು ಎದುರು ನೋಡುತ್ತಿರುತ್ತಾನೆ. ವಿಷಯ ತಿಳಿದು, ಪದ್ಯಗಳನ್ನು ತಾನೂ ಓದಿ ರಾಜನ ಮನಃ ಪರಿವರ್ತನೆ ಆಗುತ್ತದೆ; ಬಿಡುಗಡೆಯಾಗುತ್ತದೆ; ಪ್ರಣಯಿಗಳು ಮತ್ತೆ ಕೂಡುತ್ತಾರೆ-ಇದು, ತಲತಲಾಂತರದಿಂದ ಊರುದ್ದಕ್ಕೂ ಪ್ರಚಲಿತವಿರುವ, ಬಿಲ್ಹಣನ ಈ 'ಕಳ್ಳನ ಪ್ರಣಯದ ಕಲ್ಪನಾ ವಿಲಾಸ’ ಗಾಥೆಯ ಸುತ್ತ ಹೆಣೆದ ಜನಪ್ರಿಯ ದಂತಕತೆ !
'ಕಳ್ಳ ಪ್ರಣಯಿಯ ಕಲ್ಪನಾ ವಿಲಾಸ’! ವಿಶ್ವವಿದ್ಯಾಲಯವೊಂದರಲ್ಲಿ ಪಠ್ಯ ಪುಸ್ತಕವಾಗಿರುವ, ಪ್ರೊಫೆಸರ್ ಬಾರ್ಬರಾ ಸ್ಟೋಲರ್ ಮಿಲ್ಲರ್ ಅವರ ಸಮರ್ಥ ಭಾವಾನುವಾದದ, ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್ (1977) ಪ್ರಕಾಶಿತ, ಯುನೆಸ್ಕೋ ಪುರಸ್ಕೃತ ಪುಸ್ತಕದ ಉಪ-ಶೀರ್ಷಿಕೆಯೂ ಅದೇ. 'ಫ್ಯಾನ್ಟಸೀಸ್ ಆಫ್ ಎ ಲವ್ ಥೀಫ್’! ಇ ಪೊವೈಸ್ ಮ್ಯಾಥೆರ್ಸ್ ಮತ್ತು ಇನ್ನಿತರರ ಭಾವಾನುವಾದಗಳು ಅಂತರ್ಜಾಲ ತಾಣದಲ್ಲಿವೆ. 'ಸಂಸ್ಕೃತ ಸಾಹಿತ್ಯದ ಇತಿಹಾಸ’ (1961) ಗ್ರಂಥದಲ್ಲಿ (ಪುಟ 188-190) ಪ್ರೊಫೆಸರ್ ಎ.ಬೆರ್ರಿಡೇಲ್ ಕೀತ್ ಅವರ ಪ್ರಕಾರ, ಕಾವ್ಯದ ಕಾಶ್ಮೀರದ ಪಾಠದಲ್ಲಿ ಮಹಿಲಾಪಟ್ಟಣದ ರಾಜ ವೀರಸಿಂಹನ ಮಗಳು ಚಂದ್ರಲೇಖೆ ಕಾವ್ಯದ ನಾಯಿಕೆ; ದಾಕ್ಷಿಣಾತ್ಯ ಪಾಠದಲ್ಲಿ ಪಂಚಾಲದ ರಾಜ ಮದನಾಭಿರಾಮನ ಮಗಳು ಯಾಮಿನೀ ಪೂರ್ಣ ತಿಲಕ ಎಂಬವಳು ಕವಿಯ ಪ್ರಣಯಿನಿ. ಹದಿನೆಂಟನೇ ಶತಮಾನದ ಭಾಷ್ಯಕಾರರು ರಾಮತರ್ಕವಾಗಿಕಾ ಮತ್ತು ಭಾರತಚಂದ್ರರ ಪ್ರಕಾರ ಕಾವ್ಯಕನ್ನಿಕೆಯ ಹೆಸರು 'ವಿದ್ಯಾ’ ಮತ್ತು ಕವಿಯ ಹೆಸರು 'ಚೌರ’! ಬಿಲ್ಹಣನ ಈ ಕಾವ್ಯದಿಂದ ಪ್ರಭಾವಿತರಾಗಿ ಎಷ್ಟೋ ಜನ ಚಿತ್ರಕಾರರು ಕಾಗದ, ಬಟ್ಟೆಗಳ ಮೇಲೆ ತೈಲ ಚಿತ್ರಗಳನ್ನ ಆಪದ್ಯಗಳ ಸಂದರ್ಭಕ್ಕೆ ಅನುಗುಣವಾಗಿ ಕುಂಚವಾಡಿಸಿದ್ದಾರೆ !
'ಅನುಭವವು ಸವಿ ; ಅದರ ನೆನಪು ಇನ್ನಷ್ಟು ಸವಿ’ ಎನ್ನುತ್ತ, ಕವಿ ಏನನ್ನು ಮೆಲುಕು ಹಾಕುತ್ತಿದ್ದಾನೆ ಎಂಬುದರ ಸ್ಥೂಲ ಪರಿಚಯಕ್ಕಾಗಿ, ಅವನ ಐವತ್ತರಲ್ಲಿ ಅಷ್ಟು 'ವಾಚ್ಯ’ವಲ್ಲದ ಏಳು ಪದ್ಯಗಳನ್ನು ಇಲ್ಲಿ ಕನ್ನಡಿಸಲು ಪ್ರಯತ್ನಿಸುತ್ತಿದ್ದೇನೆ ; ಮೂಲದ ಸೊಬಗನ್ನು ಸವಿಯಬೇಕೆನ್ನಿಸುವವರಿಗಾಗಿ ಸಂಸ್ಕೃತಮೂಲವನ್ನು ಕೊನೆಯಲ್ಲಿ ಇರಿಸಿದ್ದೇನೆ, ಪರಾಂಬರಿಸಿ:
ಬಿಲ್ಹಣನ 'ಚೌರ-ಪಂಚಾಶಿಕಾ’ದಿಂದ ಆಯ್ದ ಪದ್ಯಗಳು:
ಇಂದಿಗೂ
ನಾನವಳಾಡಿದುದ
ಮತ್ತೆ
ಮತ್ತೆ
ಜ್ಞಾಪಿಸಿಕೊಳುವೆ:
'ನನ್ನದೇ
ತಪ್ಪಾಯ್ತು,
ಅದನೊಪ್ಪಿಕೊಳ್ಳೆ’ನುತ್ತ,
ಕಾಡುತ್ತ,
ಅವಳ
ಪಾದದಡಿ
ಬಿದ್ದು
ಬೇಡಿದ್ದೆನು,
ಅಂದು,
ಮಂಡಿಯೂರಿ;
ಸೆರಗ
ತುದಿಯಿಂದವಳು
ನನ್ನ
ಕೈಗಳನತ್ತ
ದೂರಕೆ
ತಳ್ಳಿ,
ಕಡು
ಮುನಿದು,
ಗುಡುಗಿದಳೆ:
'ಹೋಗಿ
ಹೋಗಿರೆ’ಂದು
!
।।
1
।।
ಇಂದಿಗೂ
ನಾನವಳ
ಇಲ್ಲಿಯೇ
ಕಂಡು,
ಕಾಣುತಲಿರುವೆ
:
ಕದ್ದೇ
ಕನ್ನಡಿಯಲ್ಲಿ
ಇಣುಕಿಣುಕಿ
ನೋಡುತ್ತಿದ್ದಳು
ಅಂದು,
ನಾನಿದ್ದೆ
ಮರೆಯಲ್ಲಿ
ಅಡಗಿ
ಅವಳ
ಹಿಂದೆ
ಹಿಂದೆ;
ನಾನದನು
ಗಮನಿಸಿದೆ-
ಎಂದು
ತಿಳಿದಳು;
ಆಗ
ಒಡನೆ,
ನಸು
ನಡುಗಿದಳು,
ಗಡಿಬಿಡಿಗೊಂಡು
ನಾಚಿದಳೆ,
ಮದನೆ!
।।2।।
ಇಂದಿಗೂ
ನಾನವಳ
ನನ್ನೆದುರೆ
ನೋಡಿ,
ನೋಡುತಲಿರುವೆ:
ನಾ
ಬರುವ
ದಾರಿಯನೆ
ತನ್ನೆಲ್ಲ
ಕಣ್ಣಾಗಿಸಿಕೊಂಡು,
ಆ
ಕಣ್ಣುಗಳ
ಮೇಲೇನೆ
ಕೈಯಿರಿಸಿ,
ಹಂಬಲಿಸಿ,
ಕಾಯುತಿಹಳ;
ನನ್ನನೇಕೋ
ಗಮನಿಸಲಿಲ್ಲ,
ಬಾಗಿಲಾಚೆಯ
ಮರೆಯಲೇ
ಇದ್ದೆ
!
ನನ್ನ
ಹೆಸರಿನ
ಹಾಡೊಂದ,
ಆಹಾ,
ಮೆಲ್ಲ
ಮೆಲ್ಲ
ಗುನುಗುತಿಹಳಲ್ಲ
!
।।
3
।।
ಇಂದಿಗೂ
ನಾ
ನೆನೆ
ನೆನೆ
ನೆನೆವೆ,
ಆ
ಮುತ್ತನಿತ್ತವಳನ್ನ
:
ನನ್ನ
ಕತ್ತನು
ಬಳಸಿ
ಸುತ್ತಿದ್ದ
ಕೈ
ಬಳ್ಳಿಯವಳನ್ನ,
ತಬ್ಬಿ,
ಉಬ್ಬಿದ
ಎದೆಗೆ
ನನ್ನನಪ್ಪಿ
ಮುದ್ದಾಗಿ
ನಿಂದವಳನ್ನ,
ಅರೆ
ಬಿರಿದ
ಕಣ್ಣುಗಳಿಂದ
ಆನಂದ
ತುಳುಕಿಸುತ್ತಿದ್ದವಳನ್ನ,
ಹಸಿದ
ತುಟಿಗೆ
ತುಟಿರಸವಿತ್ತ
ಆ
ಮಗುದೆಯನ್ನ
!
।।
4
।।
ಇಂದಿಗೂ
ಮಾರ್ದನಿಗೊಳುತ
ಎದೆಯ
ಮೂಲೆ
ಮೂಲೆಯಲ್ಲಿಹವು-
ಸುಂದರಾಂಗಿಯ
ಜೇನಿನ
ಸವಿಯ
ಆ
ಮಧುರ
ಸೊಲ್ಲು
;
ಸ್ಪಷ್ಟ
?
ಯಾರಿಗೆ
ಬೇಕು
?
ಎದೆ
ಮಿಡಿತ
ಎದೆಗೆ
ತೀಡಿದರಾಯ್ತು;
ಒಂದಾಗಿ
ಕೂಡಿರುವಾಗ,
ಮನಸೆಲ್ಲೋ,
ಕಣ್ಣರೆ
ತೆರೆದಿರುವಾಗ,
ಉಸಿರು
ಬಿಸಿ,
ಮಾತು
ಹಸಿ,
ನುಡಿಗೆ
ಅರ್ಥವೆಲ್ಲೋ
!
।।
5
।।
ಇಂದಿಗೂ
ನಾನದ
ಮನಸಲ್ಲೇ
ಮೆಲು
ಮೆಲುಕು
ಹಾಕುತ್ತಿರುವೆ:
ಆ
ರಾತ್ರಿ
ಅವಳ
ಜೊತೆಯಲಿ
ಇದ್ದೆ,
ನಾ
ಸೀನಿದೆನು
ಒಮ್ಮೆ
;
'ಚಿರಕಾಲ
ಬಾಳೆ’ಂದು
ಹರಸಿದಳೆ,
ಆ
ಅರಸುಗುವರಿ,
ಚೆನ್ನೆ
?
ಉಹ್ಞು,
ಚಿನ್ನದೊಡವೆಯನೊಂದ
ನನ್ನ
ಕಿವಿಗಿರಿಸಿದಳಲ್ಲ
!
ಹೊನ್ನು
ಶಾಶ್ವತ
ಬಾಳ್ವೆಯ
ಕುರುಹು,
ಸೂಚಿಸಿದಳದೇನು
ಜಾಣೆ
?
।।
6
।।
ಇಂದಿಗೂ
ನನಗವಳು,
ನನ್ನವಳು,
ಎಲ್ಲ
ಎಲ್ಲಕ್ಕೂ
ಮಿಗಿಲು
!
ಜಿಂಕೆ
ಮರಿಗಣ್ಣಿನ
ಪ್ರಣಯಿ,
ಓ
ಎನ್ನ
ಒಲವೆ,
ಮನದನ್ನೆ
!
ಹಾಲು
ಬಣ್ಣದ
ಕೊಡಗಳ
ಹೊತ್ತ
ಎದೆಯ
ಹೆಣ್ಣೆ,
ದಿನ
ಕಳೆಯೆ,
ಮತ್ತೊಮ್ಮೆ
ನೀನೆನ್ನ
ಬಳಿ
ಸಾರಿ
ಬರುವೆಯಾ
ಮನ್ನೆ
?
ಬೇಡ,
ಮೂಲೋಕ
ಸ್ವರ್ಗ-
ಸುಖ,
ಇನ್ನದೇತಕೆ
?
ಇರಲು
ನೀನು
ನೀನೆ
!
।।7।।
ಮೂಲ
:
(ಅದ್ಯಾಪಿ
ತಂ
ಅವಿಗಣಯ್ಯಾ
ಕೃತಾಪರಾಧಂ,
ಮಾಂ
ಪಾದಮೂಲ-
ಪತಿತಂ
ಸಹಸಾ
ಗಲನ್ತೀಮ್
।
ವಸ್ತ್ರಾಂಚಲಂ
ಮಮ
ಕರಾನ್
ನಿಜ
ಆಕ್ಷಿಪನ್ತೀಂ,
'ಮಾ
ಮಾ’
ಇತಿ
ರೋಷ-
ಪರುಷಂ
ಬ್ರುವನ್ತೀಂ-
ಸ್ಮರಾಮಿ
।।
1
।।
ಅದ್ಯಾಪಿ
ತಂ
ರಹಸಿ
ದರ್ಪಣಂ
ಈಕ್ಷಮಾನಾಂ,
ಸಂಕ್ರಾನ್ತಮತ್
ಪ್ರತಿನಿಭಂ
ಮಯಿ
ಪೃಷ್ಠಲೀನೇ।
ಪಶ್ಯಾಮಿ,
ವೇಪಥುಮತಿಂ
ಚ
ಸ-ಸಂಭ್ರಮಾಂ
ಚ,
ಲಜ್ಜಾ
ಕುಲಾಂ
ಸಮದನಾಂ
ಚ
ಸ-ವಿಭ್ರಮಾಂ
ಚ
।।
2
।।
ಅದ್ಯಾಪಿ
ತಂ
ಮಯಿ
ಸಮೀಪ-ಕವಾಟ-
ಲೀನೆ,
ಮನ್-
ಮಾರ್ಗ-
ಮುಕ್ತ-ದೃಶ-ಆನನ-ದತ್ತ-ಹಸ್ತಾಮ್।
ಮದ-ಗೋತ್ರ-ಲಿಂಗಿತ-ಪದಂ
ಮೃದು-ಕಾಕಲೀಭಿ:,
ಕಿಂಚಿತ್
ಚ
ಗಾತು-ಮನಸಂ
ಮನಸಾ
ಸ್ಮರಾಮಿ
।।3।।
ಅದ್ಯಾಪಿ
ತಂ
ಭುಜ-ಲತಾರ್ಪಿತ-ಕಂಠ-ಪಾಶಾಂ,
ವಕ್ಷಸ್ಥಲಂ
ಮಮ
ಪಿಧಾಯ
ಪಯೋಧರಾಭ್ಯಾಮ್।
ಈಶನ್
ನಿಮೀಲಿತ
ಸಲೀಲ-ವಿಲೋಚನಾಭ್ಯಾಂ,
ಪಶ್ಯಾಮಿ,
ಮುಗ್ಧವದನಾಂ
ವದನಂ
ಪಿಬನ್ತೀಮ್।।4।।
ಅದ್ಯಾಪಿ
ಮೇ
ವರತನೋರ್
ಮಧುರಾಣಿ
ತಸ್ಯಾ:,
ಯಾನಿ
ಅರ್ಥವನ್ತೀ
ನ
ಚ
ಯಾನಿ
ನಿರರ್ಥಕಾನಿ।
ನಿದ್ರಾ-ನಿಮೀಲಿತ-ದೃಶೋ
ಮದಂ
ಅನ್ತರಾಯಾಸ್,
ತಾನಿ
ಅಕ್ಷರಾಣಿ
ಹೃದಯೇ
ಕಿಂ
ಅಪಿ
ಧ್ವನನ್ತಿ
।।5।।
ಅದ್ಯಾಪಿ
ತನ್
ಮನಸಿ
ಸಂ-ಪರಿವರ್ತತೇ
ಮೇ,
ರಾತ್ರೌ
ಮಯಿ
ಕ್ಷುತವತೀ
ಕ್ಷಿತಿಪಾಲ-ಪುತ್ರ್ಯಾ।
'ಜೀವ’-ಇತಿ
ಮಂಗಲವಚ:
ಪರಿಹೃತ್ಯ
ಕೋಪಾತ್,
ಕರ್ಣೇ
ಕೃತಂ
ಕನಕ-ಪತ್ರಂ
ಅನಾಲಪತ್ಯಾ।।6।।
ಅದ್ಯಾಪಿ
ತಂ
ಪ್ರಣಯಿನಿಂ,
ಮೃಗ-ಶಾಬಕಾಕ್ಷೀಂ,
ಪೀಯೂಷ-ವರ್ಣ-ಕುಚ-ಕುಂಭ-ಯುಗಂ
ವಹನ್ತೀಮ್।
ಪಶ್ಯಾಮಿ
ಅಹಂ
ಯದಿ
ಪುನರ್
ದಿವಸಾವಸಾನೇ,
ಸ್ವರ್ಗ-ಅಪವರ್ಗ-ವರರಾಜ್ಯ-ಸುಖಂ
ತ್ಯಜಾಮಿ।।7।।)