ಬೆಂಗಳೂರು, ಕರಾವಳಿ ರೈಲು ಪ್ರಯಾಣಿಕರ ಗಮನಕ್ಕೆ
ಬೆಂಗಳೂರು, ಫೆಬ್ರವರಿ 13: ಹಾಸನ ಜಿಲ್ಲೆಯ ಜನರ ಬಹುವರ್ಷಗಳ ಬೇಡಿಕೆಗೆ ಮಣಿದ ರೈಲ್ವೆ ಇಲಾಖೆ ತಾತ್ಕಾಲಿಕ ನಿಲುಗಡೆ ನೀಡಲು ಆದೇಶಿಸಿದೆ. ಬೆಂಗಳೂರು ಮತ್ತು ಕರಾವಳಿ ನಡುವೆ ಸಂಚಾರ ನಡೆಸುವ ರೈಲುಗಳು ಈ ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿವೆ.
ನೈಋತ್ಯ ರೈಲ್ವೆ ಈ ಕುರಿತು ಆದೇಶ ಹೊರಡಿಸಿದೆ. ಪ್ರಾಯೋಗಿಕವಾಗಿ 6 ತಿಂಗಳ ಅವಧಿಗೆ ಹಾಸನದ ಆಲೂರು ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ಮಾಡಲು ಆದೇಶ ಹೊರಡಿಸಲಾಗಿದೆ. ವೇಳಾಪಟ್ಟಿಯನ್ನು ನೀಡಲಾಗಿದೆ.

ಕರಾವಳಿ ಮತ್ತು ಬೆಂಗಳೂರು ನಗರ ಸಂಪರ್ಕಿಸುವ ಯಶವಂತಪುರ-ಕಾರವಾರ, ಕಾರವಾರ-ಯಶವಂತಪುರ, ಯಶವಂತಪುರ-ಮಂಗಳೂರು, ಮಂಗಳೂರು-ಯಶವಂತಪುರ ರೈಲುಗಳು ಆಲೂರು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿವೆ.
ರೈಲುಗಳ ಪಟ್ಟಿ
* ರೈಲು ನಂಬರ್ 16515 ಯಶವಂತಪುರ-ಕಾರವಾರ ರೈಲು 12/2/2024 ರಿಂದ 29/7/2024ರ ತನಕ ಆಲೂರು ನಿಲ್ದಾಣಕ್ಕೆ ಬೆಳಗ್ಗೆ 10.30ಕ್ಕೆ ಆಗಮಿಸಿ 10.33ಕ್ಕೆ ಹೊರಡಲಿದೆ. ರೈಲು ನಂಬರ್ 16516 ಕಾರವಾರ-ಯಶವಂತಪುರ ರೈಲು ಆಲೂರು ನಿಲ್ದಾಣಕ್ಕೆ ಸಂಜೆ 4.17ಕ್ಕೆ ಆಗಮಿಸಿ, 4.18ಕ್ಕೆ ಹೊರಡಲಿದೆ. ಈ ವೇಳಾಪಟ್ಟಿ 13/2/2024 ರಿಂದ 30/7/2024ರ ತನಕ ಜಾರಿಯಲ್ಲಿರುತ್ತದೆ.
* ರೈಲು ನಂಬರ್ 16575 ಯಶವಂತಪುರ-ಮಂಗಳೂರು ರೈಲು 13/2/2024 ರಿಂದ 30/7/2024ರ ತನಕ ಆಲೂರು ನಿಲ್ದಾಣಕ್ಕೆ ಬೆಳಗ್ಗೆ 10.32ಕ್ಕೆ ಆಗಮಿಸಿ 10.33ಕ್ಕೆ ಹೊರಡಲಿದೆ. ರೈಲು ನಂಬರ್ 16576 ಮಂಗಳೂರು-ಯಶವಂತಪುರ ರೈಲು 14/2/2024 ರಿಂದ 31/7/2024ರ ತನಕ ಆಲೂರು ನಿಲ್ದಾಣಕ್ಕೆ ಸಂಜೆ 4.17ಕ್ಕೆ ಆಗಮಿಸಿ, 4.18ಕ್ಕೆ ಹೊರಡಲಿದೆ.
* ರೈಲು ನಂಬರ್ 16539 ಯಶವಂತಪುರ-ಮಂಗಳೂರು ರೈಲು 17/2/2024 ರಿಂದ 27/7/2024ರ ತನಕ ಆಲೂರು ನಿಲ್ದಾಣಕ್ಕೆ ಬೆಳಗ್ಗೆ 10.30ಕ್ಕೆ ಆಗಮಿಸಿ, 10.33ಕ್ಕೆ ನಿರ್ಗಮಿಸಲಿದೆ. ರೈಲು ನಂಬರ್ 16540 ಮಂಗಳೂರು-ಯಶವಂತಪುರ ರೈಲು 18/28/2024 ರಿಂದ 28/7/2024ರ ತನಕ ಆಲೂರು ನಿಲ್ದಾಣಕ್ಕೆ 12.14ಕ್ಕೆ ಆಗಮಿಸಿ, 12.15ಕ್ಕೆ ಹೊರಡಲಿದೆ.
ಆಲೂರು ಮಲೆನಾಡ ಮಡಿಲಿನಲ್ಲಿರುವ ರೈಲು ನಿಲ್ದಾಣ. ಇಲ್ಲಿ ರೈಲು ನಿಲ್ದಾಣವಿದ್ದರೂ ಪ್ರತಿದಿನ ಇದೇ ಮಾರ್ಗದಲ್ಲಿ ಪ್ಯಾಸೆಂಜರ್ ಮತ್ತು ಎಕ್ಸ್ಪ್ರೆಸ್ ರೈಲುಗಳು ಚಲಿಸಿದರೂ ಸಹ ಯಾವ ರೈಲು ನಿಲುಗಡೆಗೊಳ್ಳುತ್ತಿರಲಿಲ್ಲ.
ಮಂಗಳೂರು-ಬೆಂಗಳೂರು ಮತ್ತು ಬೆಂಗಳೂರು-ಮಂಗಳೂರು ಮಾರ್ಗವಾಗಿ ಸಾಗುವ ಎಲ್ಲಾ ರೈಲುಗಳು ಆಲೂರು ಮೂಲಕವೇ ಸಾಗಬೇಕಿತ್ತು. ಆದರೆ ಯಾವುದೇ ರೈಲು ಇಲ್ಲಿ ನಿಲ್ಲುತ್ತಿರಲಿಲ್ಲ ಎಂಬುದು ಅಚ್ಚರಿಯ ಸಂಗತಿ. ಕೊನೆಗೆ ಹಾಸನದ ರೈಲು ಬಳಕೆದಾರರು ಆಲೂರಿನಲ್ಲಿ ರೈಲು ನಿಲುಗಡೆ ಮಾಡಬೇಕು ಎಂದು ಮನವಿ ಮಾಡುತ್ತಲೇ ಬಂದಿದ್ದರು.
2009ರ ಡಿಸೆಂಬರ್ನಲ್ಲಿ ಆಲೂರು ರೈಲು ನಿಲ್ದಾಣ ಸ್ಥಾಪನೆಯಾಯಿತು. ತಮ್ಮ ಊರಿನ ಮೂಲಕವೇ ಹತ್ತಾರು ರೈಲುಗಳು ಸಂಚಾರ ನಡೆಸಿದರೂ ಸಹ ಆಲೂರಿನ ಜನರಿಗೆ ರೈಲಿನಲ್ಲಿ ಸಂಚಾರ ನಡೆಸುವ ಭಾಗ್ಯ ಸಿಕ್ಕಿರಲಿಲ್ಲ. ಆಲೂರು ಪಟ್ಟಣದಿಂದ ಸುಮಾರು 1 ಕಿ. ಮೀ. ದೂರದಲ್ಲಿ ರೈಲು ನಿಲ್ದಾಣವಿದೆ.
ಪ್ಲಾಟ್ ಫಾರಂ, ಶೌಚಾಲಯ, ವಿಶ್ರಾಂತಿ ಕೊಠಡಿ, ಕುಡಿಯುವ ನೀರು, ನಿಲ್ದಾಣಕ್ಕೆ ಅಗತ್ಯ ಸಿಬ್ಬಂದಿ ಇದ್ದರೂ ಸಹ ಆಲೂರಿನಲ್ಲಿ ರೈಲು ಏಕೆ ನಿಲ್ಲುತ್ತಿರಲಿಲ್ಲ ಎಂಬ ಪ್ರಶ್ನೆಗೆ ರೈಲ್ವೆ ಅಧಿಕಾರಿಗಳೇ ಉತ್ತರ ನೀಡಬೇಕಿತ್ತು.
ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಲೂ ಸಹ ಆಲೂರು ರೈಲು ನಿಲ್ದಾಣದಲ್ಲಿ ರೈಲು ನಿಲ್ಲುವಂತೆ ಆಗಿರಲಿಲ್ಲ. ಈಗ ನೈಋತ್ಯ ರೈಲ್ವೆ ಪ್ರಾಯೋಗಿಕವಾಗಿ ಆಲೂರಿನಲ್ಲಿ ರೈಲುಗಳನ್ನು ನಿಲ್ಲಿಸಲು ಒಪ್ಪಿಗೆ ನೀಡಿದೆ. ಜನರು ಇದನ್ನು ಸದುಪಯೋಗಪಡಿಸಿಕೊಂಡು ಶಾಶ್ವತವಾಗಿ ಆಲೂರಿನಲ್ಲಿ ಎಲ್ಲಾ ರೈಲುಗಳು ನಿಲುಗಡೆಗೊಳ್ಳುವಂತೆ ಮಾಡಿಕೊಳ್ಳಬೇಕಿದೆ.
-
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಎಸ್ಐಟಿ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್












Click it and Unblock the Notifications