ವಿಸ್ತಾರಾ ಏರ್ಲೈನ್ಸ್ನ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು-ಇದರಿಂದ ಏನೆಲ್ಲಾ ಆಯ್ತು ಗೊತ್ತಾ?
ನವದೆಹಲಿ, ಏಪ್ರಿಲ್, 02: ಸಾಮಾನ್ಯವಾಗಿ ಹವಾಮಾನ ವೈಪರಿತ್ಯದ ವೇಳೆ ವಿಮಾನಗಳನ್ನು ರದ್ದು ಮಾಡಲಾಗುತ್ತದೆ. ಆದರೆ ಕಳೆದ ವಾರ ಟಾಟಾ ಗ್ರೂಪ್ನ ವಿಸ್ತಾರಾ ಏರ್ಲೈನ್ಸ್ನ ಹಲವಾರು ವಿಮಾನಗಳನ್ನು ರದ್ದುಗೊಳಿಸಿತ್ತು. ಅಲ್ಲದೆ, ಅನೇಕ ವಿಮಾನಗಳು ವಿಳಂಬದೊಂದಿಗೆ ತನ್ನ ಪ್ರಯಾಣವನ್ನು ಆರಂಭಿಸಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ವೇಳೆ ಪ್ರಯಾಣಿಕರು ಏನೆಲ್ಲ ಸಮಸ್ಯೆಗಳನ್ನು ಅನುಭವಿಸಿದರು ಎಂದು ಇಲ್ಲಿ ತಿಳಿಯಿರಿ.
ಇನ್ನು ವಿಮಾನಗ ಸಂಚಾರ ಆರಂಭದ ಸಮಯದಲ್ಲಿ ಪ್ರಯಾಣಿಕರು ನಾವು ತುಂಬಾ ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಈ ಕುರಿತು ಇದೀಗ ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ವಿಸ್ತಾರಾದಿಂದ ವಿವರವಾದ ವರದಿಯನ್ನು ಕೇಳಿದೆ. ಈ ವರದಿಯಲ್ಲಿ, ವಿಮಾನಯಾನ ವಿಮಾನಗಳ ವಿಳಂಬ ಮತ್ತು ರದ್ದತಿಗೆ ಕಾರಣವನ್ನು ಸಚಿವಾಲಯ ಟ್ವೀಟ್ ಮೂಲಕ ಕೇಳಿದೆ.

ಸಾಮಾನ್ಯವಾಗಿ ವಿಮಾನಗಳ ವಿಳಂಬದಿಂದ ತುಂಬಾ ತೊಂದರೆಗಳನ್ನು ಅನುಭವಿಸಿದ ತುಂಬಾ ಉದಾಹರಣೆಗಳಿವೆ. ಹಾಗೆಯೇ ವಿಮಾನಯಾನ ಸಂಸ್ಥೆ ವಿಳಂಬವಾಗಿರುವ ವಿಮಾನಗಳ ಬಗ್ಗೆ ವರದಿಯನ್ನು ಕೇಳುತ್ತಿರುತ್ತದೆ. ಆದರೆ ಇದೀಗ ಟಾಟಾ ಗ್ರೂಪ್ನ ವಿಸ್ತಾರಾ ಏರ್ಲೈನ್ಸ್ನ 100ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡ ಬಗ್ಗೆ ಕಾರಣ ಹಾಗೂ ಇನ್ನಿತರ ವಿಮಾನಗಳ ಸಂಚಾರ ಆರಂಭದಲ್ಲಿ ವಿಳಂಬವಾಗಿರುವ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ಕೊಡುವಂತೆ ವಿಮಾನ ಸಂಸ್ಥೆಗೆ ಕೇಳಿದೆ.
Ministry of Civil Aviation (MoCA) sought a detailed report from Vistara regarding flight cancellations and major delays, with the airline having cancelled or delayed over 100 flights in the past week: MoCA official to ANI pic.twitter.com/IeGngZ8IKV
— ANI (@ANI) April 2, 2024
ಒಟ್ಟಿನಲ್ಲಿ ವಿಮಾನಗಳ ವಿಳಂಬದಿಂದ ತೊಂದರೆ ಅನುಭವಿಸುದಂತೂ ಪ್ರಯಾಣಿಕರೇ ಆಗಿರುತ್ತಾರೆ. ಆದ್ದರಿಂದ ಕೇಂದ್ರವು ವಿಮಾನಗಳ ವಿಳಂಬಕ್ಕೆ ಕಾರಣ ಕೇಳುವ ಮೂಲಕ ವಿಮಾನಯಾನ ಸಂಸ್ಥೆ ವಿರುದ್ಧ ಕೆಂಡಕಾರಿದೆ. ಇನ್ನು ವಿಮಾನ ಸಂಸ್ಥೆಯಿಂದ ಯಾವ ರೀತಿಯ ಉತ್ತರಗಳು ಬರುತ್ತವೆ ಹಾಗೂ ಪ್ರಯಾಣಿಕರಿಗಾದ ಅನಾನುಕೂಲತೆಗಳನ್ನು ಹೇಗೆ ಸರಿಪಡಿಸುತ್ತದೆ ಎಂದು ಕಾದುನೋಡಬೇಕಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications