Bengaluru to Ooty: ಬೆಂಗಳೂರಿನಿಂದ ಊಟಿಗೆ ಪ್ರಯಾಣ ಮಾಡುವವರಿಗೆ ಉತ್ತಮ ಸಲಹೆಗಳಿವು- ಮಾಹಿತಿ ತಿಳಿಯಿರಿ
ಬೆಂಗಳೂರು, ಡಿಸೆಂಬರ್, 27: 2023 ಮುಗಿದು 2024ಕ್ಕೆ ದಾಪುಗಾಲಿಡಲು ಇನ್ನು ಕೆಲವೇ ದಿನಗಳಷ್ಟೇ ಉಳಿದಿವೆ. ಹೊಸವರ್ಷ ಬರುವ ಮುಂಚೆ ಅಥವಾ ಜನವರಿ ತಿಂಗಳಿನಲ್ಲಿ ಪ್ರವಾಸ ಮಾಡಲು ಬಹುತೇಕ ಮಂದಿ ಪ್ಲಾನ್ ಮಾಡಿಕೊಂಡಿರುತ್ತಾರೆ. ಅದರಲ್ಲೂ ಈ ವೇಳೆಯಂತೂ ಬೆಂಗಳೂರಿನಿಂದ ಊಟಿ ಕಡೆ ಪ್ರಯಾಣ ಬೆಳೆಸುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಹಾಗಾದರೆ ಊಟಿಗೆ ಯಾವ ಮಾರ್ಗದಲ್ಲಿ ಹೋದರೆ ಸೂಕ್ತ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಊಟಿ ತಮಿಳುನಾಡಿನ ಅತ್ಯುತ್ತಮ ಮತ್ತು ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಬೆಂಗಳೂರಿನಿಂದ ಊಟಿ ತಲುಪುವ ಮಾರ್ಗಗಳ ಸಂಪೂರ್ಣ ವಿವರಗಳು ಹೀಗಿವೆ ನೋಡಿ. ಬೆಂಗಳೂರಿನಿಂದ ಊಟಿಗೆ ನೇರ ರೈಲು ಇಲ್ಲ, ಕೊಯಮತ್ತೂರಿನಿಂದ ಊಟಿಗೆ ಪ್ರಯಾಣ ಬೆಳೆಸಬೇಕಾಗುತ್ತದೆ.

ಬೆಂಗಳೂರಿನಿಂದ ಊಟಿ ತಲುಪುವುದೇಗೆ?
ಬೆಂಗಳೂರಿನಿಂದ ಊಟಿಗೆ ಹೋಗುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ, ನಿಮಗಾಗಿ ಹಲವಾರು ಆಯ್ಕೆಗಳಿವೆ
* ಬಸ್ನಲ್ಲಿ ಪ್ರಯಾಣಿಸುವುದಾದರೆ 6 ರಿಂದ 8 ಗಂಟೆಗಳ ಸಮಯ ಆಗುತ್ತದೆ, ಇನ್ನು ದರವನ್ನು ನೋಡುವುದಾದರೆ 600 ರೂಪಾಯಿನಿಂದ ಪ್ರಾರಂಭವಾಗುತ್ತದೆ.
* ರೈಲಿನಲ್ಲಿ ಪ್ರಯಾಣಿಸಲಿ ಇಚ್ಚಿಸಿದರೆ ಬೆಂಗಳೂರಿನಿಂದ ಊಟಿ ತಲುಪಲು 8 ಗಂಟೆಗಳ ಬೇಕಾಗುತ್ತದೆ, ದರ 155 ರೂಪಾಯಿನಿಂದ ಪ್ರಾರಂಭವಾಗುತ್ತದೆ
* ಇನ್ನು ಒಂದು ವೇಳೆ ಕ್ಯಾಬ್ನಲ್ಲಿ ಪ್ರಯಾಣ ಮಾಡುವುದಾದರೆ, ಊಟಿ ತಲುಪಲು 5 ರಿಂದ 6 ಗಂಟೆಗಳು ಆಗುತ್ತದೆ. ಇನ್ನು ದರ 5000ದಿಂದ ಪ್ರಾರಂಭವಾಗುತ್ತದೆ.
ಬಸ್ ಪ್ರಯಾಣ: ಬೆಂಗಳೂರಿನಿಂದ ಊಟಿಗೆ ನೇರ ಬಸ್ಗಳಿವೆ. ಈ ಬಸ್ಸುಗಳು ಮೈಸೂರು ಮೂಲಕ ಊಟಿಗೆ ಅಥವಾ ಮೆಟ್ಟುಪಾಳ್ಯಂ ಮೂಲಕ ಊಟಿಗೆ ಹೋಗುತ್ತವೆ. ಹೆಚ್ಚಿನ ಖಾಸಗಿ ಬಸ್ ಸೇವಾ ಪೂರೈಕೆದಾರರು ಮತ್ತು ತಮಿಳುನಾಡು ಬಸ್ಗಳು ಮೆಟ್ಟುಪಾಳ್ಯಂ - ಊಟಿ ಮಾರ್ಗವನ್ನು ಬಳಸಿದರೆ, ಕರ್ನಾಟಕ ರಾಜ್ಯ ಸಾರಿಗೆ (KSRTC) ಬಸ್ಗಳು ಮೈಸೂರು ಮತ್ತು ಗುಡಲೂರು ಮೂಲಕ ಊಟಿಗೆ ಹೋಗುತ್ತವೆ.
* ಕೆಎಸ್ಆರ್ಟಿಸಿ ಬಸ್ಗಳು ಬೆಂಗಳೂರಿನಿಂದ ಊಟಿ ತಲುಪಲು 6 ರಿಂದ 8 ಗಂಟೆಗಳ ಕಾಲ ಸಮಯವನ್ನಯ ತೆಗೆದುಕೊಳ್ಳುತ್ತವೆ. ದರ 600 ರೂಪಾಯಿ ಆಗಿರುತ್ತದೆ.
* ಗ್ರೀನ್ಲೈನ್ ಟ್ರಾವೆಲ್ಸ್ : ಪ್ರಯಾಣದ ಸಮಯ 8 ಗಂಟೆಳು ಆಗಿರುತ್ತದೆ. ಇನ್ನು ದರ 1,249 ರೂಪಾಯಿ ಆಗಿರುತ್ತದೆ.
* ಎಸ್ಆರ್ಎಸ್: ಪ್ರಯಾಣದ ಸಮಯ 5 ರಿಂದ 6 ಗಂಟೆಗಳು ಆಗಲಿದ್ದು, ದರ 9,999 ಆಗಿರುತ್ತದೆ.
ರೈಲು ಪ್ರಯಾಣ: ಬೆಂಗಳೂರಿನಿಂದ ರೈಲಿನ ಮೂಲಕವೂ ಊಟಿ ತಲುಪಬಹುದು. ಮೊದಲು ಕೊಯಮತ್ತೂರಿಗೆ ತಲುಪಬೇಕಾಗುತ್ತದೆ. ಅಲ್ಲಿಂದ ನೀವು ಊಟಿಗೆ ಬಸ್ ಅಥವಾ ಟ್ಯಾಕ್ಸಿ ಮೂಲಕ ಪ್ರಯಾಣಿಸಬಹುದು.
* ಎರ್ನಾಕುಲಂ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣದ ಸಮಯ 7 ರಿಂದ 8 ಗಂಟೆಗಳವರೆಗೆ ಆಗಲಿದ್ದು, ಪ್ರಯಾಣ ದರ 155 ರೂಪಾಯಿ ಆಗಿರುತ್ತದೆ.
* ಎರ್ನಾಕುಲಂ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣದ ಸಮಯ 7 ರಿಂದ 8 ಗಂಟೆಗಳವರೆಗೆ ಆಗಲಿದ್ದು, ಇದರಲ್ಲಿಯೂ ಪ್ರಯಾಣ ದರ 155 ರೂಪಾಯಿ ಆಗಲಿದೆ.
ವಿಮಾನ ಪ್ರಯಾಣ: ವಿಮಾನಗಳಲ್ಲಿ ಪ್ರಯಾಣಿಸಲು ಇಷ್ಟಪಡುವವರಿಗೆ, ಹತ್ತಿರದ ವಿಮಾನ ನಿಲ್ದಾಣವೆಂದರೆ ಕೊಯಮತ್ತೂರು ಆಗಿದೆ. ನೀವು ಬೆಂಗಳೂರು-ಕೊಯಮತ್ತೂರು ವಿಮಾನವನ್ನು ತೆಗೆದುಕೊಂಡು, ನಂತರ ಕೊಯಮತ್ತೂರಿನಿಂದ ಊಟಿಗೆ ಬಸ್ ಅಥವಾ ಕ್ಯಾಬ್ ಮೂಲಕ ಪ್ರಯಾಣಿಸಬಹುದಾಗಿದೆ.
ಕಾರಿನ ಮೂಲಕ ಪ್ರಯಾಣ: ಬೆಂಗಳೂರಿನಿಂದ ಊಟಿಗೆ ಪ್ರಯಾಣಿಸಲು ಉತ್ತಮ ಮೋಡ್ ಕಾರನ್ನು ಆಯ್ಕೆ ಮಾಡುವುದು, ದುಬಾರಿ ಆದರೂ ಉತ್ತಮವಾಗಿದೆ. ನೀವು ಮೈಸೂರಿನ ಮೂಲಕ ಪ್ರಯಾಣಿಸುತ್ತಿದ್ದರೆ, ಬೆಂಗಳೂರಿನಿಂದ ಊಟಿಗೆ ರಸ್ತೆಯ ಮೂಲಕ ಸುಮಾರು 271 ಕಿಲೋ ಮೀಟರ್ ದೂರವಿದೆ. ಮೆಟ್ಟುಪಾಳ್ಯಂ ಮೂಲಕ ಹೋಗುವ ಮಾರ್ಗವು ಸುಮಾರು 300 ಕಿಲೋಮೀಟರ್ಗಳು ಆಗಿರುತ್ತದೆ.
ಇನ್ನು ಬೆಂಗಳೂರಿನಿಂದ ಊಟಿಗೆ ನೇರ ವಿಮಾನಗಳಿಲ್ಲ. ನೀವು ಕೊಯಮತ್ತೂರಿನವರೆಗೆ ಮಾತ್ರ ವಿಮಾನಗಳನ್ನು ಹೊಂದಿದ್ದೀರಿ, ನಂತರ ನೀವು ಊಟಿಗೆ ಪರ್ವತದ ಮೂಲಕ ರಸ್ತೆಯ ಮೂಲಕ ಪ್ರಯಾಣಿಸಬೇಕಾಗಿದೆ. ಬೆಂಗಳೂರಿನಿಂದ ಊಟಿಗೆ ರಸ್ತೆ ಪ್ರಯಾಣವು ಸರಿಸುಮಾರು 6 ರಿಂದ 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಬೆಂಗಳೂರಿನಿಂದ ಊಟಿಗಿರುವ ವಿವಿಧ ರಸ್ತೆ ಮಾರ್ಗಗಳು
* ಬೆಂಗಳೂರು- ಮೈಸೂರು - ಗುಂಡ್ಲುಪೇಟೆ - ತೆಪ್ಪಕಾಡು - ಮಸಣಿಗುಡಿ - ಊಟಿ
* ಬೆಂಗಳೂರು- ಮೈಸೂರು -ಗುಂಡ್ಲುಪೇಟೆ- ತೆಪ್ಪಕಾಡು - ಗುಡಲೂರು - ಊಟಿ
* ಬೆಂಗಳೂರಿನಿಂದ ಕನಕಪುರಕ್ಕೆ (ನೈಸ್ ರಸ್ತೆ ಮೂಲಕ) - ಕೊಳ್ಳೇಗಾಲ - ಚಾಮರಾಜನಗರ - ಗುಂಡ್ಲುಪೇಟೆ - ಮಸಿನಗುಡಿ - ಊಟಿ
* ಬೆಂಗಳೂರಿನಿಂದ ಕನಕಪುರಕ್ಕೆ (ನೈಸ್ ರಸ್ತೆ ಮೂಲಕ) - ಕೊಳ್ಳೇಗಾಲ - ಚಾಮರಾಜನಗರ - ಗುಂಡಲಪೇಟೆ - ಗುಡಲೂರು - ಊಟಿ
* ಬೆಂಗಳೂರು - ಹೊಸೂರು - ಕೃಷ್ಣಗಿರಿ - ಧರ್ಮಪುರಿ - ಮೇಟೂರು - ಸತ್ಯಮಂಗಲಂ - ಮೆಟ್ಟುಪಾಳ್ಯಂ - ಊಟಿ
ಬೆಂಗಳೂರಿನಿಂದ ಊಟಿಗೆ ಈ ಕ್ಯಾಬ್ ಉತ್ತಮವೇ?
ನೀವು ಕುಟುಂಬ ಅಥವಾ ಸ್ನೇಹಿತರೊಂದಿಗೆ ಗುಂಪಾಗಿ ಪ್ರಯಾಣಿಸುತ್ತಿದ್ದರೆ, ಕ್ಯಾಬ್ ಅನ್ನು ಬುಕ್ ಮಾಡಲು ಅನುಕೂಲಕರ ಮತ್ತು ಬಜೆಟ್ ಸ್ನೇಹಿಯಾಗಿಯೂ ಇರುತ್ತದೆ. ಬೆಂಗಳೂರು ಊಟಿ ಕ್ಯಾಬ್ ಸೇವೆಗಳನ್ನು ಒದಗಿಸುವ ಹಲವಾರು ಕ್ಯಾಬ್ ಪೂರೈಕೆದಾರರು ಇದ್ದಾರೆ. ನೀವು ರಸ್ತೆ ಮೂಲಕ ಪ್ರಯಾಣಿಸುವಾಗ ಊಟಿಗೆ ಹೋಗುವ ಮಾರ್ಗದಲ್ಲಿರುವ ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ಇರುತ್ತದೆ.
ನಿಮ್ಮ ಕಾರಿನಲ್ಲಿ ಊಟಿಗೆ ಹೋಗಬಹುದೇ?
ನೀವು ನಿಮ್ಮ ಕಾರನ್ನು ಅಥವಾ ಬಾಡಿಗೆ ಕಾರನ್ನು ಊಟಿಗೆ ಓಡಿಸಬಹುದು. ಆದರೂ ನೀವು ಪರ್ವತಗಳಲ್ಲಿ ಚಾಲನೆ ಮಾಡಿದ ಅನುಭವವನ್ನು ಹೊಂದಿದ್ದರೆ ಮಾತ್ರ ಇದು ಉತ್ತಮ ಆಯ್ಕೆಯಾಗಿದೆ. ಊಟಿಗೆ ಪರ್ವತದ ಮೇಲಿರುವ ರಸ್ತೆಯಲ್ಲಿ ಹಲವಾರು ತಿರುವುಗಳು ಮತ್ತು ಅಪಾಯಕಾರಿ ತಿರುವುಗಳಿವೆ. ಆದ್ದರಿಂದ, ನೀವು ಅನುಭವಿ ಚಾಲಕರಾಗಿದ್ದರೆ, ಖಂಡಿತವಾಗಿಯೂ ಊಟಿಗೆ ಕಾರನ್ನು ಓಡಿಸಬಹುದು. ಇಲ್ಲದಿದ್ದರೆ, ಅನುಭವಿ ಚಾಲಕರನ್ನು ನೇಮಿಸಿಕೊಳ್ಳುವುದು ಅಥವಾ ಕ್ಯಾಬ್ ಆಯ್ಕೆ ಉತ್ತಮವಾಗಿದೆ.
ಬೆಂಗಳೂರಿನಿಂದ ಮೈಸೂರಿನ ಮೂಲಕ ಊಟಿಗೆ ಹೋಗುವ ರಸ್ತೆಯು ಮುದುಮಲೈ ವನ್ಯಜೀವಿ ಅಭಯಾರಣ್ಯ ಮತ್ತು ಬಂಡೀಪುರ ವನ್ಯಜೀವಿ ಅಭಯಾರಣ್ಯದ ಮೂಲಕ ಸಾಗುತ್ತದೆ. ನಿಮ್ಮ ಪ್ರವಾಸವನ್ನು ಪ್ರಾರಂಭಿಸುವ ಮೊದಲು, ರಸ್ತೆಯು ತೆರೆದಿದೆಯೇ ಎಂದು ಪರಿಶೀಲಿಸಿ. ಏಕೆಂದರೆ ಮಳೆ, ಪ್ರವಾಹ ಅಥವಾ ಇತರ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ರಸ್ತೆಗಳನ್ನು ಕ್ಲೋಸ್ ಮಾಡಿರುತ್ತಾರೆ. ಅಲ್ಲದೆ, ನೀವು ಊಟಿ ಅಥವಾ ಬೆಂಗಳೂರಿನ ಕಡೆಗೆ ಪ್ರಯಾಣಿಸುತ್ತಿದ್ದರೂ ಕತ್ತಲಾಗುವ ಮೊದಲು ಅರಣ್ಯ ಪ್ರದೇಶವನ್ನು ಬಿಡುವ ರೀತಿಯಲ್ಲಿ ನಿಮ್ಮ ಪ್ರಯಾಣವನ್ನು ಯೋಜಿಸುವುದು ಉತ್ತಮ.
ಈ ಮಾರ್ಗದಲ್ಲೂ ಟೋಲ್ಗಳಿವೆಯೇ?
ಸದ್ಯಕ್ಕೆ ಬೆಂಗಳೂರಿನಿಂದ ಮೈಸೂರು ಮೂಲಕ ಊಟಿಗೆ ಹೋಗುವ ಮಾರ್ಗದಲ್ಲಿ ಟೋಲ್ ಇಲ್ಲ. ಆದರೆ, ಬೆಂಗಳೂರಿನಿಂದ ಕೊಯಮತ್ತೂರು ಮಾರ್ಗದಲ್ಲಿ ಸುಮಾರು 5 ಟೋಲ್ಗಳಿವೆ. ಇನ್ನು ರಾತ್ರಿಯಲ್ಲಿ ವಾಹನ ಚಲಾಯಿಸುವುದು ಅಪಾಯಕಾರಿಯಾಗಿದೆ. ಕಾರಣ ಹಗಲಿನಲ್ಲಿ ಪರ್ವತಗಳನ್ನು ಹತ್ತುವುದು ಉತ್ತಮ. ಅಲ್ಲದೆ, ರಾತ್ರಿಯಲ್ಲಿ ಪ್ರಾಣಿಗಳ ಚಲನೆ ಇರಬಹುದು. ಆದ್ದರಿಂದ, ಕತ್ತಲಾಗುವ ಮೊದಲು ಊಟಿ ತಲುಪಲು ಪ್ಲಾನ್ ಮಾಡಿಕೊಳ್ಳಿ.
ಮೌಂಟೇನ್ ರೈಲಿನಲ್ಲಿ ಊಟಿಗೆ ಹೋಗುವುದು ಜೀವಮಾನದಲ್ಲಿ ಒಮ್ಮೆ ಅನುಭವಿಸುವ ಅನುಭವ. ಆದರೂ ಈ ರೈಲು ಬೆಳಗ್ಗೆ 7.10ಕ್ಕೆ ಮೆಟ್ಟುಪಾಳ್ಯಂನಿಂದ ಪ್ರಾರಂಭವಾಗುತ್ತದೆ. ನೀವು ಈ ರೈಲಿನಲ್ಲಿ ಹೋಗಲು ಬಯಸಿದರೆ, ಬೆಳಿಗ್ಗೆ ಸುಮಾರು 5 ಗಂಟೆಗೆ ಕೊಯಮತ್ತೂರು ತಲುಪಿ, ನಂತರ ಮೆಟ್ಟುಪಾಳ್ಯಂ ರೈಲ್ವೇ ನಿಲ್ದಾಣಕ್ಕೆ ಹೋಗುವ ರೀತಿಯಲ್ಲಿ ನಿಮ್ಮ ಪ್ರಯಾಣವನ್ನು ಯೋಜಿಸಬೇಕು. ನೀವು IRCTC ವೆಬ್ಸೈಟ್ನಲ್ಲಿ ಈ ರೈಲಿಗೆ ಟಿಕೆಟ್ಗಳನ್ನು ಬುಕ್ ಮಾಡಬಹುದು.
ಅತ್ಯಂತ ರಮಣೀಯ ಮಾರ್ಗ: ಬೆಂಗಳೂರಿನಿಂದ ಊಟಿಗೆ ಹೋಗುವ ಅತ್ಯಂತ ರಮಣೀಯ ಮಾರ್ಗವೆಂದರೆ ಬೆಂಗಳೂರು - ಶ್ರೀರಂಗಪಟ್ಟಣ - ಮೈಸೂರು - ಚಾಮರಾಜನಗರ - ಬಂಡೀಪುರ - ಮುದುಮಲೈ - ಗುಡಲೂರು - ಊಟಿ.
ರಾಷ್ಟ್ರೀಯ ಹೆದ್ದಾರಿ 181 ಮೆಟ್ಟುಪಾಳ್ಯಂನಿಂದ ಕೂನೂರ್ ಮೂಲಕ ಊಟಿಗೆ 14 ಅಪಾಯಕಾರಿ ತಿರುವುಗಳನ್ನು ಹೊಂದಿದೆ. ಆದರೆ ನೀವು ಮೈಸೂರು ಮತ್ತು ಮಸಿನಗುಡಿ ಮೂಲಕ ಪ್ರಯಾಣಿಸುತ್ತಿದ್ದರೆ, ಕಲ್ಲಾಟಿ ಮಾರ್ಗವೆಂದು ಪ್ರಸಿದ್ಧವಾಗಿದೆ, ನೀವು ಊಟಿ ತಲುಪಲು ಇಲ್ಲಿ 36 ತಿರುವುಗಳ ಮೂಲಕ ಚಲಿಸಬೇಕಾಗುತ್ತದೆ. ರಾತ್ರಿ ಸಮಯದಲ್ಲಿ ಈ ಮಾರ್ಗವನ್ನು ಮುಚ್ಚಲಾಗುತ್ತದೆ ನೆನಪಿರಲಿ.
-
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
Bengaluru: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸತತ 3ನೇ ಬಾರಿ ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ಏರ್ಪೋರ್ಟ್ ಪ್ರಶಸ್ತಿ -
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price












Click it and Unblock the Notifications