Get Updates
Get notified of breaking news, exclusive insights, and must-see stories!

Vande Bharat: ಕಲಬುರಗಿ-ಬೆಂಗಳೂರು ರೈಲಿಗೆ ಪ್ರತಿಕ್ರಿಯೆ ಹೇಗಿದೆ?

ಬೆಂಗಳೂರು, ಮೇ 16: ಬೆಂಗಳೂರು-ಕಲಬುರಗಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದರ ಹೆಚ್ಚಾಗಿದೆ ಎಂಬ ಆರೋಪದ ನಡುವೆಯೇ ರಾಜಧಾನಿ ಮತ್ತು ಕಲ್ಯಾಣ ಕರ್ನಾಟಕ ಸಂಪರ್ಕಿಸುವ ರೈಲು ಬಹುತೇಕ ಭರ್ತಿಯಾಗಿ ಸಂಚಾರ ನಡೆಸುತ್ತಿದೆ.

ಬೆಂಗಳೂರು ನಗರದ ಬೈಯಪ್ಪನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ನಡುವೆ ಮಾರ್ಚ್‌ 15ರಿಂದ ವಂದೇ ಭಾರತ್ ಕೇಸರಿ ಬಣ್ಣದ ರೈಲು ಸಂಚಾರ ಆರಂಭವಾಗಿದೆ. ವಾರದಲ್ಲಿ 6 ದಿನ ಸಂಚಾರ ನಡೆಸುವ ರೈಲು ಪ್ರಯಾಣಿಕರಿಂದ ತುಂಬುತ್ತಿದೆ.

Bengaluru Kalaburagi Vande Bharat Train Ridership

ನೈಋತ್ಯ ರೈಲ್ವೆ ಮಾಹಿತಿ ಪ್ರಕಾರ ಮಾರ್ಚ್‌ 15 ರಿಂದ ಮೇ 1ರ ತನಕ ಶೇ 93.33ರಷ್ಟು ಆಸನಗಳು ಭರ್ತಿಯಾಗಿ ರೈಲು ಸಂಚಾರ ನಡೆಸುತ್ತಿದೆ. ಮೇ 7ರ ತನಕ ರೈಲು 21,016 ಜನರು ರೈಲಿನಲ್ಲಿ ಸಂಚಾರ ನಡೆಸಿದ್ದಾರೆ. ರೈಲಿನ ವೇಳಾಪಟ್ಟಿ ಬಗ್ಗೆಯೂ ಯಾವುದೇ ಅಪಸ್ವರ ಎತ್ತಿಲ್ಲ.

ಕಲ್ಯಾಣ ಕರ್ನಾಟಕಕ್ಕೆ ರೈಲು: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಕೆಲವೇ ದಿನಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸುವ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ವಂದೇ ಭಾರತ್ ರೈಲು ಸೇವೆಗೆ ಚಾಲನೆ ನೀಡಿದ್ದರು. ನೈಋತ್ಯ ರೈಲ್ವೆ ಈ ಮಾರ್ಗದಲ್ಲಿ ಕೇಸರಿ ಬಣ್ಣದ ವಂದೇ ಭಾರತ್ ರೈಲು ಓಡಿಸುತ್ತಿದೆ.

ಕಲಬುರಗಿಯಿಂದ ಬೆಳಗ್ಗೆ 5.15ಕ್ಕೆ ಹೊರಡುವ ರೈಲು ಮಧ್ಯಾಹ್ನ 2 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೈಯಪ್ಪನಹಳ್ಳಿ ತಲುಪುತ್ತದೆ. ಮಧ್ಯಾಹ್ನ 2.40ಕ್ಕೆ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಡುವ ರೈಲು ರಾತ್ರಿ 11.30ಕ್ಕೆ ಕಲಬುರಗಿ ನಿಲ್ದಾಣ ತಲುಪಲಿದೆ.

ವಂದೇ ಭಾರತ್ ರೈಲಿನಲ್ಲಿ ಚೇರ್ ಕಾರ್ (ಸಿಸಿ) ಮತ್ತು ಎಕ್ಸಿಕ್ಯುಟಿವ್ ಚೇರ್ ಕಾರ್ (ಇಸಿ) ಎಂಬ ಎರಡು ಬಗೆಯ ಸೀಟುಗಳಿವೆ. ಮಾರ್ಚ್‌ 15 ರಿಂದ 31ರ ತನಕ ಚೇರ್ ಕಾರ್‌ನಲ್ಲಿ 7,170 ಮತ್ತು ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿ 780 ಸೀಟುಗಳು ಭರ್ತಿಯಾಗಿವೆ.

ಏಪ್ರಿಲ್ 1 ರಿಂದ 30ರ ತನಕ ಚೇರ್ ಕಾರ್‌ನಲ್ಲಿ 12,428 ಮತ್ತು ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿ 1352 ಸೀಟುಗಳು ಭರ್ತಿಯಾಗಿವೆ. ಮೇ 1 ರಿಂದ 7ರ ತನಕ ಚೇರ್ ಕಾರ್‌ನಲ್ಲಿ 2,868 ಮತ್ತು ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿ 312 ಸೀಟುಗಳು ಭರ್ತಿಯಾಗಿವೆ. ಒಟ್ಟಾರೆ ಶೇ 93.33ರಷ್ಟು ಸೀಟುಗಳು ಭರ್ತಿಯಾಗಿ ರೈಲು ಓಡುತ್ತಿದೆ.

ಈ ರೈಲಿನ ದರ ಕೊಂಚ ಜಾಸ್ತಿ ಎಂಬ ಆರೋಪವಿದೆ. ಕಲಬುರಗಿ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ಚೇರ್ ಕಾರ್‌ನಲ್ಲಿ without food 1,216, with food 1,540. ಎಕ್ಸಿಕ್ಯುಟಿವ್ ಚೇರ್‌ ಕಾರ್ without food 2,386, with food 2,765 ರೂ. ಗಳ ದರವಿದೆ.

ವಂದೇ ಭಾರತ್ ರೈಲು ಮೂಲಕ ಬೆಂಗಳೂರಿಗೆ ಹೋಗಿ ಬರುವುದು ಸುಲಭವಾದ ಕಾರಣ ಹೆಚ್ಚು ಜನರು ಈ ರೈಲಿನಲ್ಲಿ ಸಂಚಾರ ನಡೆಸುತ್ತಿದ್ದಾರೆ. ಬಸ್ ಪ್ರಯಾಣಕ್ಕೆ ಹೋಲಿಕೆ ಮಾಡಿದರೆ ಎಸಿ ಕೋಚ್‌ಗಳಲ್ಲಿ ಅರಾಮವಾಗಿ ಸಂಚಾರ ನಡೆಸಬಹುದು, ತಳ್ಳಾಟ, ನೂಕಾಟ ಇರುವುದಿಲ್ಲ. ಆದ್ದರಿಂದ ಜನರು ರೈಲು ಸೇವೆ ಇಷ್ಟಪಟ್ಟಿದ್ದಾರೆ.

ರೈಲಿಗೆ ರಾಯಚೂರು, ಮಂತ್ರಾಲಯ ರಸ್ತೆ, ಗುಂತಕಲ್, ಅನಂತಪುರ ಮತ್ತು ಯಲಹಂಕದಲ್ಲಿ ನಿಲುಗಡೆ ಇದೆ. ಯಾದಗಿರಿಯಲ್ಲಿ ನಿಲುಗಡೆ ನೀಡಲು ಒಪ್ಪಿಗೆ ನೀಡಲಾಗಿದೆ. ಆದರೆ ರೈಲು ಇನ್ನು ನಿಲ್ಲುತ್ತಿಲ್ಲ ಎಂದು ಜನರು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+