ಸರ್ವಧರ್ಮೀಯರ ಸೆಳೆಯುತಿಹಳು ಮುಂಡ್ಕೂರು ದುರ್ಗೆ

ತುಳುನಾಡಿನ ಪಾಡ್ದನ ಎಂದು ಕರೆಯಲ್ಪಡುವ ಜಾನಪದ ಹಾಡಿನಲ್ಲಿ ಬರುವ ಕಾಂತಬಾರೆ -ಬೂದಬಾರೆ ಶೂರರು ಈ ದೇವಿಯ ಆರಾಧಕರು. ಆ ಕಾಲದಲ್ಲಿ ಕ್ಷೇತ್ರವನ್ನು ಆಳುತ್ತಿದ್ದ ವೀರವರ್ಮ ಮತ್ತು ಸಹಚರರ ಉಪಟಳವನ್ನು ತಾಳಲಾರದೆ ಇವರು ಅವರನ್ನು ಸಾಯಿಸಿ, ಕ್ಷೇತ್ರದ ಆಡಳಿತವನ್ನು ಎಂಟು ಬ್ರಾಹ್ಮಣ ಕುಟುಂಬಕ್ಕೆ ಹಸ್ತಾಂತರಿಸಿದರು. ಭಂಗ ಮತ್ತು ಚೋಟ ಜಮೀನ್ದಾರ ಕುಟುಂಬದವರು ದೇವಾಲಯದ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು ಎನ್ನುವುದು ಪುರಾಣ.
ಕ್ಷೇತ್ರದಲ್ಲಿ ದುರ್ಗಿ ಅಲ್ಲದೆ ಕ್ಷಿಪ್ರಪ್ರಸಾದ ಸ್ವರೂಪಿ ಮಹಾಗಣಪತಿ, ನವಗ್ರಹ, ನಾಗ ಮುಂತಾದ ದೇವರಿಗೂ ವಿಶೇಷ ಪೂಜೆ ಸಲ್ಲುತ್ತದೆ. ಧೂಮಾವತಿ, ರಕ್ತೇಶ್ವರಿ, ಪಿಲಿಚಂಡಿ, ವಾರಾಹಿ ಪಂಜುರ್ಲಿ ಮುಂತಾದ ಭೂತಗಳಿಗೂ ಪೂಜೆ ಸಲ್ಲುತ್ತದೆ. ಕುಂಭ, ಕಾರ್ತಿಕ ಮಾಸದಲ್ಲಿ ಮತ್ತು ಶರವನ್ನವರಾತ್ರಿ ಸಮಯದಲ್ಲಿ ರಥೋತ್ಸವ ಮತ್ತು ದೀಪೋತ್ಸವ ನಡೆಯುತ್ತದೆ. ಮೂರೂ ಹೊತ್ತು ಪೂಜೆ ಸಲ್ಲಿಸಲಾಗುವ ದೇವಾಲಯಗಳಲ್ಲಿ ಈ ಕ್ಷೇತ್ರವೂ ಒಂದು.
ಹೂವಿನ ಪೂಜೆ, ದುರ್ಗಾನಮಸ್ಕಾರ, ರಂಗಪೂಜೆ, ತುಲಾಭಾರ, ರಜತೋತ್ಸವ, ಚಂಡಿಕಾ ಹೋಮ ಮುಂತಾದ ಸೇವೆಗಳು ಕ್ಷೇತ್ರದಲ್ಲಿ ನಡೆಯುತ್ತಿರುತ್ತದೆ. 1978, 1992 ಮತ್ತು 2006ರಲ್ಲಿ ಬ್ರಹ್ಮಕಲಾಶಿಭಿಷೇಕ ಗರ್ಭಗುಡಿಯಲ್ಲಿ ಕೆಲವೊಂದು ಜೀರ್ಣೋದ್ದಾರ ನಡೆದಿತ್ತು. ಮುಂಡ್ಕೂರು ದುರ್ಗಿ ಭಾರ್ಗವ ಗೋತ್ರದ ಬ್ರಾಹ್ಮಣರಿಗೆ ಅಲ್ಲದೆ ತುಳುನಾಡಿನ ಬಿಲ್ಲವ, ದೇವಾಡಿಗ, ಬಂಟ್ಸ್ ಮುಂತಾದವರಿಗೂ ಮನೆ ದೇವರು. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಬಾಂಧವರೂ ದೇವಾಲಯದಲ್ಲಿ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷ.
ಕ್ಷೇತ್ರಕ್ಕೆ ಮಂಗಳೂರು ಮತ್ತು ಉಡುಪಿಯಿಂದ ಬರವ ದಾರಿ:
ಮಂಗಳೂರಿನಿಂದ ಬಜ್ಪೆ, ಕಟೀಲ್, ಕಿನ್ನಿಗೋಳಿ ಮುಖಾಂತರವಾಗಿ ಬರಬಹುದು.
ಉಡುಪಿಯಿಂದ ಕಟಪಾಡಿ, ಶಿರ್ವ, ಮಂಚಕಲ್, ಬೆಳ್ಮಣ್ ಮುಖಾಂತರವಾಗಿ ತಲುಪಬಹುದು.
ವಿಳಾಸ
ಶ್ರೀ ದುರ್ಗಾಪರಮೇಶ್ವರಿ ದೇವಾಲಯ
ಮುಂಡ್ಕೂರು ಅಂಚೆ, ಕಾರ್ಕಳ ತಾಲೂಕು
ಉಡುಪಿ ಜಿಲ್ಲೆ - 576121
ದೂರವಾಣಿ: 08258 - 267967
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications