ಕಲವಾರಹಳ್ಳಿ ದುರ್ಗಮ ಬೆಟ್ಟಕ್ಕೆ ಟ್ರೆಕ್ಕಿಂಗ್ ಮಾರ್ಗದರ್ಶಿ

ಬೈಕು, ಕಾರು ಇದ್ದರಂತೂ ಬಸ್ಸಿನ ಹಂಗೇ ಬೇಕಿಲ್ಲ, ಬೆಂಗಳೂರು, ಮೈಸೂರು ಸುತ್ತಮುತ್ತ ನೂರಾರು ಚಾರಣಕ್ಕೆ ಆಹ್ವಾನವೀಯುವ ಸ್ಥಳಗಳು ಸಿಗುತ್ತವೆ. ತುಮಕೂರು ರಸ್ತೆಯಲ್ಲಿನ ಡಾಬಸ್ ಪೇಟೆ ಬಳಿಯ ಶಿವಗಂಗಾ ಬೆಟ್ಟ, ತುಮಕೂರು ಬಳಿಯ ಸಿದ್ದಗಂಗಾ ಬೆಟ್ಟ, ಮಾಗಡಿ ಬಳಿಯ ಸಾವನದುರ್ಗ ಬೆಟ್ಟ, ರಾಮನಗರ ಸಮೀಪದ ಶೋಲೆ ಶೂಟಿಂಗ್ ನಡೆದ ರಾಮಗಿರಿ, ನಂಜನಗೂಡಿನ ಹತ್ತಿರದ ಹಿಮವದ್ ಪರ್ವತ (ಗೋಪಾಲಸ್ವಾಮಿ ಬೆಟ್ಟ). ಪಟ್ಟಿ ಮಾಡುತ್ತ ಹೋದರೆ ನೂರಾರು ಸಿಗುತ್ತವೆ.
ಆದರೆ, ಬೆಂಗಳೂರು ಬಳಿಯ ನಂದಿ ಬೆಟ್ಟದ ಬಳಿಯೇ ಸಾಹಸಿಗರಿಗೆ ಪಂಥಾಹ್ವಾನ ನೀಡುವ ಇನ್ನೊಂದು ತಾಣವಿರುವುದನ್ನು ಬಲ್ಲಿರಾ? ಅದೇ ಕಲವಾರಹಳ್ಳಿ ಬೆಟ್ಟ. ಈ ಬೆಟ್ಟವನ್ನು ಸ್ಕಂದ ಬೆಟ್ಟವೆಂದೂ ಕರೆಯುತ್ತಾರೆ. ಉಳಿದ ಚಾರಣಗಳು ನೀಡುವ ರೋಮಾಂಚನ ಒಂದು ಬಗೆಯದಾದರೆ ಸ್ಕಂದ ಬೆಟ್ಟದಲ್ಲಿ ಮಾಡುವ ಚಾರಣದ ಥ್ರಿಲ್ಲೇ ಬೇರೆ, ಆ ಅನುಭವ ಅನಿರ್ವಚನೀಯವಾದುದು.
ಪರಿಶುದ್ಧ ಗಾಳಿಯನ್ನು ಹೀರುತ್ತಾ, ಪೂರ್ಣಚಂದಿರನ ನೀರವ ರಾತ್ರಿಯಲ್ಲಿ ಬೀಸುವ ತಣ್ಣನೆಯ ಗಾಳಿಗೆ ಮೈಯೊಡ್ಡುತ್ತಾ, ಬೆಳ್ಳಂಬೆಳಿಗ್ಗೆ ಕೇಸರಿ ಬಣ್ಣದ ಉದಯರವಿಯನ್ನು ಕ್ಯಾಮೆರಾದಲ್ಲಿ ಕ್ಲಿಕ್ಕಿಸುತ್ತಾ, ಮೊಸರುಸದೃಶ ಮೋಡಗಳ ಮೇಲೆ ತೇಲಾಡುವ ಅನುಭವವನ್ನು ಅಕ್ಷರದಲ್ಲಿ ಹಿಡಿದಿಡುವುದು ಅಕ್ಷರಶಃ ಸಾಧ್ಯವಿಲ್ಲ. ಅದನ್ನು ಅನುಭವಿಸಿಯೇ ದಕ್ಕಿಸಿಕೊಳ್ಳಬೇಕು.
ಸ್ಕಂದ ಬೆಟ್ಟ ತಲುಪುವ ಬಗೆ : ಬೆಂಗಳೂರಿನಿಂದ 70 ಕಿ.ಮೀ. ದೂರದಲ್ಲಿರುವ ಈ ಚಾರಣ ತಾಣಕ್ಕೆ ಹೋಗಲು ಎರಡು ಮಾರ್ಗಗಳಿವೆ. ಒಂದು, ಬೆಂಗಳೂರಿನಿಂದ ಬಳ್ಳಾರಿ ರಸ್ತೆಗುಂಟ ಸಾಗಿ ನಂದಿಬೆಟ್ಟದ ತಿರುವಿನಲ್ಲಿ ತಿರುಗಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಸಮಾಧಿಯಿರುವ ಮುದ್ದೇನಹಳ್ಳಿಯ ಮುಖಾಂತರ ಕಲವಾರ ಹಳ್ಳಿ ತಲುಪಬಹುದು.
ಎರಡನೇ ದಾರಿ, ಚಿಕ್ಕಬಳ್ಳಾಪುರದ ಮುಖಾಂತರ ಕಲವಾರ ಹಳ್ಳಿ ತಲುಪುವುದು. ಈ ಎರಡು ದಾರಿಗಳಲ್ಲಿ ನಂದಿ ಬೆಟ್ಟದ ಮುಖಾಂತರ ಸಾಗುವ ದಾರಿಯೇ ಹತ್ತಿರದು. ಇಲ್ಲಿಂದ ಓಂಕಾರ ಜ್ಯೋತಿ ಆಶ್ರಮ ಅಥವಾ ಪಾಪಾಗ್ನಿ ಮಠ ತಲುಪಬೇಕು. ಬೆಟ್ಟದ ಬುಡದಲ್ಲಿರುವ ಈ ಸ್ಥಳದಿಂದ ಚಾರಣ ಪ್ರಾರಂಭಿಸಬೇಕು. ಇಲ್ಲಿರುವ ಶಿವನ ದೇವಸ್ಥಾನದ ಬಳಿ ವಾಹನಗಳನ್ನು ನಿಲ್ಲಿಸಿ ಚಾರಣ ಪ್ರಾರಂಭಿಸಬಹುದು. ನಂದಿ ಬೆಟ್ಟದಿಂದ ಪಾಪಾಗ್ನಿ ಮಠ 6 ಕಿ.ಮೀ. ದೂರದಲ್ಲಿದೆ. ಚಿಕ್ಕಬಳ್ಳಾಪುರದಿಂದ ಮಠ 3 ಕಿ.ಮೀ. ದೂರದಲ್ಲಿದೆ.
ನೆನಪಿನಲ್ಲಿಡಿ : ಕಲವಾರ ಬೆಟ್ಟದ ಬುಡದಿಂದ ತುದಿ ಮುಟ್ಟುವವರೆಗೂ ಪರಿಶುದ್ಧ ಗಾಳಿ, ಅತ್ಯದ್ಭುತ ನಿಸರ್ಗ ಸೌಂದರ್ಯದ ಹೊರತಾಗಿ ಏನೂ ಸಿಗುವುದಿಲ್ಲವಾದ್ದರಿಂದ ಬುತ್ತಿ, ನೀರನ್ನು ತೆಗೆದುಕೊಂಡು ಹೋಗಬೇಕು. ತುದಿ ಮುಟ್ಟುವ ದಾರಿ ಕೂಡ ಅನೇಕ ಕಡೆಗಳಲ್ಲಿ ಅತ್ಯಂತ ಕಡಿದಾಗಿದ್ದು ಯಾವುದೇ ಮೆಟ್ಟಿಲುಗಳ ಸಹಾಯವೂ ಇರುವುದಿಲ್ಲ. ಅದಲ್ಲದೆ, ರಾತ್ರಿ ಸಮಯದಲ್ಲಿ ಟ್ರೆಕ್ ಮಾಡಬೇಕಾಗಿರುವುದರಿಂದ ಪ್ರಥಮ ಚಿಕಿತ್ಸೆ ಕಿಟ್ ತೆಗೆದುಕೊಂಡು ಹೋಗುವುದು ಅತಿ ಅವಶ್ಯಕ. ಸಮುದ್ರಮಟ್ಟದಿಂದ 1750 ಮೀ. ಎತ್ತರದಲ್ಲಿರುವ ಈ ತಾಣ ಯುವ ಚಾರಣಿಗರಿಗೆ ಚಾಲೆಂಜಿಂಗ್ ಎನ್ನುವುದರಲ್ಲಿ ಸಂದೇಹವಿಲ್ಲ.
(ಈ ಸ್ಥಳಕ್ಕೆ ಟ್ರೆಕ್ಕಿಂಗ್ ಹೋಗುವವರಿಗೆ ಶುಭಹಾರೈಕೆಗಳು. ಹೋಗಿ ಬಂದ ಮೇಲೆ ನಿಮ್ಮ ಅನುಭವಗಳನ್ನು (ಅಕ್ಷರದಲ್ಲಿ ಹಿಡಿದಿಡಲಾಗದಿದ್ದರೂ) ನಮಗೆ ಬರೆದು ತಿಳಿಸಿ - ಸಂಪಾದಕ)
ಚಾರಣ ಕುರಿತ ಲೇಖನಗಳು
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications