ಚಿನ್ನಪ್ಪಿ ಮೇಲ್ಯಾಕೆ ಬಂದೆಮ್ಮಾ ಮಾರಮ್ಮಾ? ಓದುಗರ ವ್ಯಂಗ್ಯಭರಿತ ಪತ್ರ
ಅಯ್ಯೋ ತಾಯಿ ಮಾರಮ್ಮ, ಚಿನ್ನಪ್ಪಿ ಮೈಮೇಲೆ ಬಂದು, ಆರೋಪಿಗಳು ಎಷ್ಟು ಜನ ಎಂದು ಕೈ ಬೆರಳುಗಳ ಮೂಲಕ ತೋರಿಸಿದ್ದೀಯಲ್ಲಾ? ಹಾಗೆ ಮಾಡುವ ಬದಲು ನಿನ್ನ ಪ್ರಸಾದದಲ್ಲಿ ವಿಷ ಬೆರೆಸುವಾಗಲೇ ಯಾರದಾದರೂ ಮೈಮೇಲೆ ಬರಬಾರದಿತ್ತೇ? ಹಾಗೆ ಬಂದು ಈ ಅನಾಹುತವನ್ನು ತಡೆಯಬಹುದಿತ್ತಲ್ಲವೇ?
ಚಿನ್ನಪ್ಪಿ ಮೈಮೇಲೆ ಬರುವ ಬದಲು, ಪ್ರಸಾದ ತಿಂದು ಸತ್ತವರ ಮೈಮೇಲೆ ಹೋಗಿ ಅವರಿಗೆ ಜೀವಕಳೆ ತುಂಬಬಾರದೇ? ಹಾಳಾಗಿ ಹೋಗಲಿ, ಪೋಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ಹರಸಾಹಸ ಪಡುತ್ತಿದ್ದಾರೆ, ಪತ್ರಕರ್ತರು ಕ್ಯಾಮರಾ, ಪೆನ್ ಹಿಡಿದುಕೊಂಡು ಇದ್ದಬದ್ದವರನ್ನೆಲ್ಲಾ ಪ್ರಶ್ನೆ ಕೇಳುತ್ತಿದ್ದಾರೆ, ಹೋಗಿ ಅವರಿಗಾದರೂ ಸಹಾಯ ಮಾಡಬಾರದೇ?
ವಿಷವಿಕ್ಕಿದವರೂ, ತಿಂದು ಸತ್ತವರೂ, ತನಿಖೆ ನಡೆಸುತ್ತಿರುವವರೂ, ಸಂದರ್ಶನ ನಡೆಸುತ್ತಿರುವವರೂ ಎಲ್ಲರೂ ನಿನ್ನ ಮಕ್ಕಳೆಂದು, ಇಲ್ಲೀವರೆಗೂ ಸುಮ್ಮನಿದ್ದೆಯಾ? ಯಾರಾದರೂ ಕುರಿ ಕೋಳಿ ಬಲಿ ಕೊಡ್ತೀನಿ, ಚಿನ್ನಪ್ಪೀನೋ ಇಲ್ಲಾ ಇನ್ಯಾರಮೇಲಾದ್ರೂ ಬಂದು ನಿಜ ಹೇಳವ್ವಾ ಅಂತೇನಾದರೂ ಹರಕೆ ಮಾಡಿಕೊಂಡಿದಾರೇನು?

ಅಯ್ಯೋ ಏನು ಮಾರವ್ವನವ್ವಾ ನೀನು, ಇಷ್ಟೆಲ್ಲಾ ಕಣ್ಣ ಮುಂದೇನೇ ನಡೀತಿದ್ರೂ ಸುಮ್ನಿದ್ದು, ಈಗ ಚಿನ್ನಪ್ಪಿ ಮೇಲೆ ಬಂದಿದ್ದೀಯಲ್ಲಾ? ಹೋಗಲಿ ಕೋರ್ಟಿಗೆ ಹೋಗಿ ಜಡ್ಜ್ ಮುಂದಾದರೂ ತಪ್ಪಿತಸ್ಥರು ಯಾರು ಅಂತ ತೋರಬಾರದೇ? ಹೇಗೂ ಬೆಂಗಳೂರು ತನಕ ಹೋಗಲಿಕ್ಕೆ ನಿನಗ್ಯಾವ ಬಸ್ಸು, ಕಾರು, ರೈಲುಗಳ ಅವಶ್ಯಕತೇನೆ ಇಲ್ಲಾ, ಠಣ್ ಅಂತಾ ಅಲ್ಲೇ ಯಾರಾದ್ರೂ ವಕೀಲರ ಮೇಲೆ ಬಂದು ಬಿಡು, ಬಹಳ ಸುಲಭ, ಅದು ಬಿಟ್ಟು ಚಿನ್ನಪ್ಪೀನ ಹಿಡಿದು ರುಬ್ಬುತಿದ್ದೀಯಲ್ಲಾ, ಪಾಪ!
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications