ಭ್ರಷ್ಟ ಕಾರ್ಪೋರೇಟ್, ಎನ್ ಜಿಒಗಳು ವಿರುದ್ಧ ಯಾವ ಅಸ್ತ್ರ ?

ಇವರನ್ನು ಸೇರಿಸಿದರೆ ಭ್ರಷ್ಟಾಚಾರದ ಶೇ.50 ಭಾಗ ನಿಯಂತ್ರಣಕ್ಕೆ ಬರುತ್ತದೆ. ಲೋಕಪಾಲ ಮಸೂದೆಯಿಂದ ಭ್ರಷ್ಟಾಚಾರ ನಿರ್ಮೂಲನೆಯಾಗುತ್ತದೆ ಎಂಬ ಭ್ರಮೆ ಬೇಡ. ಹಾಗೆಂದು ಕಾನೂನೇ ಬೇಡ ಎನ್ನಲಾಗದು.
ಆದರೆ ಸರ್ಕಾರಿ ಲೋಕಪಾಲ ಹಾಗೂ ಜನಲೋಕಪಾಲ ಎರಡೂ ಕರಡಿನಲ್ಲಿ ದೋಷಗಳಿರುವುದರಿಂದ ಅವರೆಡನ್ನೂ ಸೇರಿಸಿ ಒಂದು ಪ್ರಬಲ ಲೋಕಪಾಲ ಮಸೂದೆ ರಚನೆ
ಯಾಗಲಿ. ಮಾಹಿತಿ ಹಕ್ಕು ಕಾಯಿದೆಯಂತೆ ಲೋಕಪಾಲ ಕೂಡಾ ಜನತೆಯ ಕೈಗೆ ಅಣ್ಣಾ ನೀಡುತ್ತಿರುವ ಪ್ರಬಲ ಅಸ್ತ್ರ ಎಂಬುದನ್ನು ಅರಿತುಕೊಳ್ಳಬೇಕು.
ಸಂಸತ್ತಿನಲ್ಲಿ ಜನ ಲೋಕಪಾಲ್ ಸೇರಿದಂತೆ ಎಲ್ಲಾ ಪ್ರಸ್ತಾವಿತ ಲೋಕಪಾಲ ಮಸೂದೆಗಳ ಸಮಗ್ರ ಚರ್ಚೆಯಾಗಬೇಕು.
ಕೇಂದ್ರದ 2ಜಿ ಸ್ಪೆಕ್ಟಂ ಹಗರಣವನ್ನು ಪ್ರಪ್ರಥಮವಾಗಿ ಬೆಳಕಗೆ ತಂದವರು ಎಡಪಕ್ಷದ ರಾಷ್ಟ್ರೀಯ ನಾಯಕರಾದ ಸೀತಾರಾಮ್ ಯೆಚೂರಿಯವರು. ಕಾರ್ಪೊರೇಟ್ಸ್, ಎಂಎನ್ ಸಿ, ಎನ್ ಜಿಒಗಳಲ್ಲಿನ ಭ್ರಷ್ಟತೆಯನ್ನು ಬಯಲಿಗೆಳೆಯುತ್ತಿದ್ದ ಎಡಪಕ್ಷಗಳು ಈ ಸಮಯದಲ್ಲಿ ಸುಮ್ಮನಿದ್ದರೆ ಪ್ರಬಲ ಮಸೂದೆ ಹೊರ ಬರಲು ಸಾಧ್ಯವಿಲ್ಲ ಎನ್ನಿಸುತ್ತದೆ.












Click it and Unblock the Notifications