ಮುಲ್ಕಿ ದುರ್ಗಾ ದೇಗುಲದಲ್ಲಿ ಬಿಟ್ಟಿ ಊಟ ಇಲ್ಲ

ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಐತಿಹಾಸಿಕ ಮಹತ್ವವಿದ್ದು ಈ ಹಿನ್ನೆಲೆಯಲ್ಲಿ ಬಪ್ಪನಾಡು ಆಸುಪಾಸಿನ ಅನೇಕ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ. ಅಲ್ಲದೆ ಈ ದೇವಾಲಯ ಒಂಭತ್ತು ಮಾಗಣೆಗೆ ಒಳಪಟ್ಟಿರುವುದರ ಹಿನ್ನೆಲೆಯಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಹರಕೆ ಹಾಕುತ್ತಾರೆ. ಹೀಗೆ ಬರುವವರು ದೇವಾಲಯದ ಪ್ರಸಾದವೆಂದು ಊಟ ಮಾಡುತ್ತಾರೆ. ಆದರೆ ಇಲ್ಲಿನ ಆಡಳಿತ ಮಂಡಳಿ ಇದನ್ನು ನಿಲ್ಲಿಸುವ ಮೂಲಕ ಸ್ಥಳೀಯ ಭಕ್ತಾದಿಗಳ ಭಾವನೆಗೆ ಹಾನಿ ಮಾಡಿದೆ.
ಒಂದು ವೇಳೆ ಸ್ಥಳೀಯ ಭಕ್ತಾದಿಗಳು ಊಟ ಮಾಡಲೇ ಬೇಕಿದ್ದರೆ ಅವರು ದೇವಾಲಯದ ಯಾವುದಾದರೂ ಸೇವೆಯನ್ನು ಕಡ್ಡಾಯವಾಗಿ ಮಾಡಬೇಕಿದೆ. ಉದಾಹರಣೆಗೆ ಒಂದು ಪಂಚಕಜ್ಜಾಯ ಮಾಡಿದರೆ ಅವರಿಗೆ ಊಟದ ಕೂಪನ್ ಕೊಡಲಾಗುತ್ತದೆ. ಒಬ್ಬನಿಗೆ ಒಂದೇ ಕೂಪನ್. ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಬಂದವರು ಒಬ್ಬ ಊಟ ಮಾಡಿದರೆ ಬಾಕಿ ಮಂದಿ ಉಪವಾಸ ಕೂರಬೇಕಾಗುತ್ತದೆ. ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದರೂ ಇಲ್ಲಿನ ಆಡಳಿತ ಸಮಿತಿ ಮನೆಯಿಂದ ಹಣ ತಂದು ಭಕ್ತರಿಗೆ ಊಟ ಹಾಕುವಂತೆ ಮಾಡುತ್ತಿದ್ದಾರೆ ಎಂಬ ಆರೋಪ ಭಕ್ತಾದಿಗಳದ್ದು.
ದೇಗುಲ ದರ್ಶನ : ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ
ಹಾಗೆಂದು ದೇವಳದ ಆಡಳಿತ ಮಂಡಳಿ ಇಲ್ಲಿನ ಖರ್ಚು ವೆಚ್ಚಗಳನ್ನು ನಿಯಂತ್ರಿಸಲು ಹೊರಟಿದೆ ಅಂದುಕೊಂಡರೆ ಶುದ್ಧ ತಪ್ಪಾಗುತ್ತದೆ. ಇಲ್ಲಿನ ವಿದ್ಯುತ್ ಬಿಲ್ ತಿಂಗಳಿಗೆ ೫೦ ಸಾವಿರ ಬರುತ್ತಿದೆ. ಆದರೆ ಇಷ್ಟೊಂದು ಬಿಲ್ ಯಾಕೆ ಬರುತ್ತಿದೆ? ಎಲ್ಲೆಲ್ಲಿ ವಿದ್ಯುತ್ ಸೋರಿಕೆಯಾಗುತ್ತಿದೆ ಎನ್ನುವುದಕ್ಕೂ ಇನ್ನೂ ಉತ್ತರ ಸಿಕ್ಕಿಲ್ಲ. ಅರ್ಚಕರಿಗೂ ಇಲ್ಲಿ ಸರಿಯಾಗಿ ವೇತನ ಸಿಗುತ್ತಿಲ್ಲ. ಹಾಗಾಗಿ ಅವರು ಹೊರಗೆ ಬಂದು ತೀರ್ಥ ಕೊಡುತ್ತಿದ್ದಾರೆ. ಕನಿಷ್ಠ ಭಕ್ತರು ಕೊಡುವ ಹಣವಾದರೂ ಸಿಗಬಹುದು ಎಂಬ ಆಸೆ ಅವರದ್ದು.
ದೇವಸ್ಥಾನದ ಹಾಲ್ನಲ್ಲಿ ಶುಕ್ರವಾರ ಮದುವೆ ನಡೆದರೆ ಭಕ್ತಾದಿಗಳಿಗೆ ಹೊರಗಡೆ ಬಿಸಿಲಿನಲ್ಲೇ ಊಟ. ಇನ್ನಿಲ್ಲಿ 100 ಜನ ಊಟ ಮಾಡಿದರೆ 200 ಮಂದಿಯ ಲೆಕ್ಕವನ್ನು ಆಡಳಿತ ಮಂಡಳಿ ತೋರಿಸುತ್ತದೆ ಎನ್ನುವ ಆರೋಪವೂ ಭಕ್ತಾದಿಗಳಿಂದ ಕೇಳಿ ಬಂದಿದೆ. ಸ್ಥಳೀಯ ರೋಟರಿ ಕ್ಲಬ್ ಭಕ್ತಾದಿಗಳಿಗೆಂದು 15 ಲಕ್ಷ ವೆಚ್ಚ ಮಾಡಿ ಶೌಚಾಲಯ ನಿರ್ಮಿಸಿದ್ದರೂ ಅದಕ್ಕೆ ದೇವಳದ ವತಿಯಿಂದ ನೀರಿನ ಸಂಪರ್ಕ ಕೊಟ್ಟಿಲ್ಲ.
ಕೋಮು ಸೌಹಾರ್ದತೆಗೂ ಖ್ಯಾತಿ: ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯ ಕೋಮು ಸೌಹಾರ್ದತೆಗೂ ಖ್ಯಾತಿ ಪಡೆದಿದೆ. ಆದರೆ ಈಗ ಇಲ್ಲಿ ಅವ್ಯವಸ್ಥೆಗೆ ಕುಖ್ಯಾತಿಯಾಗುತ್ತಿದೆ. ಜಿಲ್ಲೆಯ ಹೆಚ್ಚಿನ ದೇವಾಲಯಗಳಲ್ಲಿ ಮಧ್ಯಾಹ್ನ ಹೊತ್ತು ಬರುವ ಭಕ್ತಾದಿಗಳಿಗೆ ಜಾತಿ, ಮತ ನೋಡದೆ ತುತ್ತು ಅನ್ನ ನೀಡಲಾಗುತ್ತದೆ. ಅದು ಜಿಲ್ಲೆಯ ದೇವಾಲಯಗಳ ಸತ್ಸಂಪ್ರದಾಯವೂ ಹೌದು. ಆದರೆ ಇದೆಲ್ಲಾ ಸತ್ಸಂಪ್ರದಾಯವನ್ನು ಬಪ್ಪನಾಡು ದೇವಸ್ಥಾನದ ಆಡಳಿತ ಮಂಡಳಿ ನಿಲ್ಲಿಸಿ ಭಕ್ತಾದಿಗಳು ಕೇವಲ ಹುಂಡಿಗೆ ಹಣ ಹಾಕಿದರೆ ಸಾಕು ಎಂಬ ಮನೋಭಾವನೆಯಲ್ಲಿರುವಂತೆ ಕಾಣುತ್ತಿದೆ.
ಮಧ್ಯಾಹ್ನದ ಹೊತ್ತು ಎಲ್ಲರಿಗೂ ಊಟ ಹಾಕುವ ಖರ್ಚುವೆಚ್ಚವನ್ನು ನೋಡಿಕೊಳ್ಳಲು ಮುಲ್ಕಿಯಲ್ಲಿ ಉದ್ಯಮಿಗಳಿಗೇನೂ ಕೊರತೆಯಿಲ್ಲ. ಹಾಗೆಂದು ಬಪ್ಪನಾಡು ದೇವಸ್ಥಾನದಲ್ಲಿ ಹಣ ಇಲ್ಲ ಎಂದಲ್ಲ. ಇಲ್ಲೂ ಲಕ್ಷಾಂತರ ಆದಾಯವಿದೆ. ಒಂದೊತ್ತು ಊಟ ಹಾಕಿ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಕೊಡುವಷ್ಟು ಹಣ ಇಲ್ಲಿದೆ. ಆದರೆ ಇಲ್ಲಿರುವ ಆಡಳಿತ ಮಂಡಳಿಯಲ್ಲಿರುವ ಅವಿವೇಕಿಗಳಿಗೆ ಅಷ್ಟೊಂದು ಕಾಳಜಿ, ಯೋಗ್ಯತೆ ಇರಬೇಕಲ್ಲ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. [ಜಿಲ್ಲಾಸುದ್ದಿ]
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications