ಕಾನೂನಿನಿಂದ ಲೈಂಗಿಕ ಕಿರುಕುಳವನ್ನು ತಡೆಯಬಹುದೇ?

ಪ್ರಭಾವಶಾಲಿ ಅಧಿಕಾರಿಗಳಿರುವ ಸಂಸ್ಥೆಗಳಲ್ಲಿ ಲೈಂಗಿಕ ಕಿರುಕುಳದ ಘಟನೆಗಳು ಬಯಲಿಗೆ ಬರುವುದೇ ಇಲ್ಲ. ಮನೆ ಕೆಲಸಕ್ಕೆ ಬರುವ ಮಹಿಳೆಯರನ್ನು ಈ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲು ಕಾರಣವೇನು? ಇದು ಎರಡನೆಯ ಸಂಶಯ. ಸುಮಾರು ಶೇ.50 ಲೈಂಗಿಕ ಕಿರುಕುಳಗಳು ಮನೆ ಕೆಲಸಕ್ಕೆ ಬರುವ ಹೆಂಗಸರ ಮೇಲೆಯೇ ನಡೆಯುತ್ತದೆ.
ಹಿಂದೆ ಒಮ್ಮೆ, ಲೈಂಗಿಕ ಕುರಿತಾದ ಮಾತು, ತಮಾಷೆ, ಚೇಷ್ಟೆ, ನೋಟ ಹಿಂಬಾಲಿಸುವಿಕೆ, ಮೈಸ್ಪರ್ಶ ಇತ್ಯಾದಿ ಅನಾಚಾರ ಎಸಗಿದರೆ ಬಲವಾದ ಶಿಕ್ಷೆಗೆ ಗುರಿಪಡಿಸುವ ಕಾನೂನು ಪಾಸಾಗಿತ್ತು. ಅದೇನಾಯಿತು? ಈಗ ಮತ್ತೆ ಇನ್ನೊಂದು ಮಸೂದೆ ಮಂಡಿಸುವ ಅವಶ್ಯಕತೆ ಇದೆಯೇ? ಲೈಂಗಿಕ ಕಿರುಕುಳಗಳ ಅಪರಾಧಿಗಳನ್ನು ದಂಡಿಸಲು ಕಾನೂನುಗಳ ಕೊರತೆ ಇಲ್ಲ. ಸಂಬಂಧಪಟ್ಟವರಲ್ಲಿ ಇಚ್ಛಾಶಕ್ತಿಯ ಕೊರತೆಯೇ ಎದ್ದು ಕಾಣುತ್ತಿದೆ. ಇನ್ನು ಕುಲೀನ ಮನೆತನದಿಂದ ಬಂದ ಅನೇಕ ಮಹಿಳೆಯರು ಇಂತಹ ಪ್ರಕರಣಗಳನ್ನು ಬೆಳಕಿಗೆ ತಾರದೆ ಕುಲಗೌರವಕ್ಕಾಗಿ ಮೌನವಾಗಿದ್ದು ಬಿಡುತ್ತಾರೆ.
ಅನಪೇಕ್ಷಿತ ಲೈಂಗಿಕಾಸಕ್ತಿ ಹಾಗೂ ಕಿರುಕುಳ ನಡೆಯಲು ಮುಖ್ಯ ಕಾರಣ ಪತ್ರಿಕೆಗಳಲ್ಲಿ, ಚಲನಚಿತ್ರಗಳಲ್ಲಿ, ವೈಬ್ ಸೈಟುಗಳಲ್ಲಿ ಅಶ್ಲೀಲ ಚಿತ್ರಗಳನ್ನು ತೋರಿಸುವುದು. ಅಶ್ಲೀಲ ಚಿತ್ರಗಳುಳ್ಳ ಪುಸ್ತಕಗಳನ್ನು ಪ್ರಕಟಪಡಿಸುವುದು, ಯುವತಿಯರು ಭಾರತೀಯ ಸಂಸ್ಕೃತಿಗೊಪ್ಪುವ ಉಡುಪುಗಳನ್ನು ತೊಡದೆ, ಎದೆಯ ಮೇಲು ಭಾಗವನ್ನು ಮುಚ್ಚದೆ ತೆರೆದಿಡುವುದು, ಹೊಕ್ಕುಳ ಕಾಣುವಂತೆ ಬಟ್ಟೆ ಧರಿಸಿ ಅದರ ಮಧ್ಯದಲ್ಲಿ ಶೃಂಗಾರದ ಒಂದು ವಸ್ತುವನ್ನು ತಾಗಿಸಿಡುವುದು. ಅರ್ಧ ಬ್ರಾ, ಪ್ಯಾಂಟಿ, ಬಿಕಿನಿ, ಯುವಕರೊಂದಿಗೆ ಅಸಭ್ಯ ನೃತ್ಯ, ಸಾರ್ವಜನಿಕ ಸ್ಥಳಗಳಲ್ಲೂ ಚುಂಬನ ಆಲಿಂಗನ ಇತ್ಯಾದಿ ಅನೇಕ ಕಾರಣಗಳಿರುತ್ತವೆ. ಇವುಗಳನ್ನು ತಡೆಯಲು ಸಾಧ್ಯವಿದೆಯೇ?
ಹಿಂದೊಮ್ಮೆ ಪ್ರಸಾರ ಭಾರತಿ ಸಂಸ್ಥೆಯ ಮುಖ್ಯಸ್ಥೆ ರಾತ್ರಿ 11 ಗಂಟೆಯ ನಂತರ ದೂರದರ್ಶನದಲ್ಲಿ ಅಶ್ಲೀಲ ಚಿತ್ರಗಳುಳ್ಳ ದೃಶ್ಯಗಳನ್ನು ತೋರಿಸಬಹುದು ಅಂದಿದ್ದರು. ನಮ್ಮ ಇಂದಿನ ಯುವಕ ಯುವತಿಯರು ಬೆಳಿಗ್ಗೆ 10 ಗಂಟೆಯವರೆಗೆ ಮಲಗಿ ರಾತ್ರಿ 11 ಗಂಟೆಯ ನಂತರವೇ ಚಟುವಟಿಕೆಗಳಲ್ಲಿ ತೊಡಗುತ್ತಾರೆಂಬುದು ಅವರಿಗೆ ಗೊತ್ತಿಲ್ಲದೇ ಹೋಗಿತ್ತು. ಮಹಿಳೆಯರು ಭಾರತೀಯ ಸಂಸ್ಕೃತಿಗೆ ಒಪ್ಪುವ ಉಡುಪನ್ನು ಧರಿಸುವಂತಾಗಬೇಕು.
ಕಾನೂನಿನಿಂದ ಇದನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲದಿದ್ದರೂ ಸಮಾಜ ಪ್ರೋತ್ಸಾಹವನ್ನು ಕೊಡಬೇಕು. ಮುಸ್ಲಿಮ್ ರಾಷ್ಟ್ರಗಳಲ್ಲಿರುವಂತೆ ನಮ್ಮಲ್ಲಿ ಹೆಂಗಸರಿಗೆ 'ಡ್ರೆಸ್ಕೋಡ್ " ಇಲ್ಲದಿರುವುದು ಒಂದು ಕೊರತೆ. ಪಾಶ್ಚಿಮಾತ್ಯ ಪ್ರಭಾವ ಇನ್ನೊಂದು ಕಾರಣ. ಮಸೂದೆ ತಯಾರಿಸುವವರು ಇದನ್ನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕಾದುದು ತೀರಾ ಅವಶ್ಯ. ಕೇವಲ ಕಾನೂನುಗಳಿಂದ ಲೈಂಗಿಕ ಕಿರುಕುಳಗಳನ್ನು ತಡೆಯಲು ಸಾಧ್ಯವಾಗದು. ರಾಜಾರೋಷವಾಗಿ ನಡೆಯುವುದನ್ನು ತಡೆಯಬಹುದಷ್ಟೆ!
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications