'ಅಕ್ಕ' ವಿಶ್ವ ಕನ್ನಡ ಸಮ್ಮೇಳನದಲ್ಲಿ ಪಾರಂಪರಿಕ ರಸಪ್ರಶ್ನೆ
ಕನ್ನಡ-ಕರ್ನಾಟಕದ ಬಗೆಗಿನ ಜ್ಞಾನವನ್ನು ಪ್ರದರ್ಶಿಸಲು ಇದೇ ಅಮೆರಿಕಾದ ಸ್ಯಾನ್ ಹೋಸೆಯಲ್ಲಿ ನಡೆಯಲಿರುವ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ Pureprayer.comರವರು ಪ್ರಸ್ತುತ ಪಡಿಸುತ್ತಿರುವ Heritage Quiz ಸರಿಯಾದ ವೇದಿಕೆ!
ಆಗಸ್ಟ್ 29, 30 ಮತ್ತು 31, 2014ರಂದು ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಆಶ್ರಯದಲ್ಲಿ ನಡೆಯಲಿರುವ ಎಂಟನೆಯ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ 2014' ಕಾರ್ಯಕ್ರಮದಲ್ಲಿ ಸಾಹಿತ್ಯಿಕ ಸಮಿತಿಯ ವತಿಯಿಂದ ಜರುಗಲಿರುವ ಈ ಕಾರ್ಯಕ್ರಮವನ್ನು Pureprayer.com ಪ್ರಸ್ತುತ ಪಡಿಸಿರುತ್ತಾರೆ. [ಉದಯೋನ್ಮುಖ ಲೇಖಕರಿಗೆ ಆಹ್ವಾನ]

ಈ ಕಾರ್ಯಕ್ರಮದಲ್ಲಿ ಎರಡು ಹಂತಗಳಿರುತ್ತವೆ. ಮೊದಲನೆಯ ಹಂತದಲ್ಲಿ ಆಗಸ್ಟ್ 1-10ರವರೆಗೆ ಹಾಗು ಆಗಸ್ಟ್ 14-20ರವರೆಗೆ ಎರಡು ಬಾರಿ ಅಂತರ್ಜಾಲದಲ್ಲಿ ಪ್ರಶ್ನೆಗಳಿಗೆ ಉತ್ತರಿಸಬಹುದು. ಮೊದಲ ಎರಡು ಸುತ್ತುಗಳು ಆಂಗ್ಲ ಭಾಷೆಯಲ್ಲಿರುತ್ತವೆ. ಫೈನಲ್ ಮಾತ್ರ ಕನ್ನಡದಲ್ಲಿರುತ್ತದೆ. ಈ ಪೂರ್ವಸಿದ್ಧತಾ ಹಂತದಲ್ಲಿ ವಿಜಯಿಗಳಾದ ಮೊದಲ ಆರು ಭಾಗಿಗಳು ಸಮ್ಮೇಳನದಂದು ವೇದಿಕೆಯ ಮೇಲೆ ಅಂತಿಮ ಹಂತದಲ್ಲಿ ಭಾಗವಹಿಸಬಹುದು.
ರಸಪ್ರಶ್ನೆಯಲ್ಲಿ ಇತಿಹಾಸ, ಸಿನಿಮಾ, ಹಾಡು, ಸಾಹಿತ್ಯ ಮುಂತಾದ ಪ್ರಕಾರಗಳಿರುತ್ತವೆ. ಅತ್ಯಾಕರ್ಷಕ ಬಹುಮಾನಗಳು, ಸಾವಿರಾರು ಜನಗಳ ಮುಂದೆ ಭಾಗವಹಿಸಬಹುದಾದ ಸದವಕಾಶವನ್ನು ಕಳೆದುಕೊಳ್ಳಬೇಡಿ. ಹೆಚ್ಚಿನ ಮಾಹಿತಿಗೆ ನೋಡಿರಿ. [ಸಾಹಿತ್ಯ ವಾಚನಕ್ಕೆ ಸಿದ್ಧರಾಗಿ]
ಕೆಲ ನಿಯಮಗಳು ಕೆಳಗಿನಂತಿವೆ
* ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಕ್ಕ ಸಮ್ಮೇಳನದಲ್ಲಿ ನೋಂದಣಿಯಾಗಿರಬೇಕು.
* ಫೈನಲ್ ಪ್ರವೇಶಿಸುವವರು ಮತ್ತೊಬ್ಬ ಸಂಗಾತಿಯನ್ನು ಕರೆತರಬೇಕು. ಅವರೂ ಸಮ್ಮೇಳನಕ್ಕೆ ನೋಂದಾಯಿಸಿಕೊಂಡಿರಬೇಕು. ಅವರೂ ಅಕ್ಕ ಸಮ್ಮೇಳನದಲ್ಲಿ ಉಪಸ್ಥಿತರಿರಬೇಕು.
* ಒಂದು ನೋಂದಾವಣಿ ಐಡಿಯಿಂದ ಒಬ್ಬರು ಮಾತ್ರ ರಸಪ್ರಶ್ನೆಯಲ್ಲಿ ಭಾಗವಹಿಸಬಹುದು.
* ಪ್ರಾಥಮಿಕ ಹಂತದಲ್ಲಿ ಒಂದು ಪ್ರಯತ್ನಕ್ಕೆ ಮಾತ್ರ ಅವಕಾಶವಿರುತ್ತದೆ.
* ಈ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಮಾಡುವ ಅಧಿಕಾರ ಸಾಹಿತ್ಯಿಕ ವೇದಿಕೆಗಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications