ಚಿತ್ರಗಳಲ್ಲಿ ಅಕ್ಕ ಸಮ್ಮೇಳನದ ಪೂರ್ವಸಿದ್ಧತೆ
ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ನ್ಯೂ ಜೆರ್ಸಿಯ ಎಡಿಸನ್ ನಗರದಲ್ಲಿ ಈಗ ಉತ್ಸವದ ವಾತಾವರಣ. ಅಮೆರಿಕನ್ನಡಿಗರು, ಕರ್ನಾಟಕದಿಂದ ಆಗಮಿಸುತ್ತಿರುವ ಅತಿಥಿಗಳಲ್ಲಿ ಏನೋ ಒಂದು ಬಗೆಯ ಸಡಗರ. ಅಮೆರಿಕ ಕಾಲಮಾನ ಶುಕ್ರವಾರ ಸಂಜೆ ಆರು ಗಂಟೆಗೆ ಮೈಸೂರು ದಸರಾ ಮಾದರಿಯಲ್ಲಿ ಆನೆ ಅಂಬಾರಿಯೊಂದಿಗೆ ಕಾರ್ಯಕ್ರಮ ವಿಧ್ಯುಕ್ತವಾಗಿ ಆರಂಭವಾಗಲಿದೆ.
ಹಿಂದಿನ ಎಲ್ಲ ಸಮ್ಮೇಳನಗಳಿಗಿಂತ ಈ ಸಮ್ಮೇಳನ ಯಶಸ್ವಿಯಾಗಲೆಂದು ನೂರಾರು ಸ್ವಯಂಸೇವಕರು ಅವಿರತವಾಗಿ ದುಡಿದಿದ್ದಾರೆ, ದುಡಿಯುತಲಿದ್ದಾರೆ. ಬಿಡುವಿಲ್ಲದ ಕಚೇರಿ ಕೆಲಸದಿಂದ ಸಮಯ ಸಿಕ್ಕಾಗಲೆಲ್ಲ ಬಿಡುವು ಮಾಡಿಕೊಂಡು ಸಮ್ಮೇಳನ ಒಪ್ಪ ಓರಣವಾಗಿಸಲು ನೂರಾರು ಜನ ಕೈಜೋಡಿಸಿದ್ದಾರೆ. ಸಮ್ಮೇಳನದ ಮೂರು ದಿನಗಳ ಪುಳಕಗಳದ್ದು ಒಂದು ತೂಕವಾದರೆ, ಸಮ್ಮೇಳನಕ್ಕಾಗಿ ವರ್ಷದ ಹಿಂದಿನಿಂದಲೇ ನಡೆಸಿದ ಸಿದ್ಧತೆಯದು ಇನ್ನೊಂದು ತೂಕ. ಎಷ್ಟೇ ಅಡೆತಡೆಗಳಿದ್ದರೂ ಒಟ್ಟಿನಲ್ಲಿ ಸಮ್ಮೇಳನ ಸುಸೂತ್ರವಾಗಿ ನಡೆಯಲಿ ಎಂಬುದೊಂದೇ ಜಪಿಸುತ್ತಿದ್ದ ಏಕೈಕ ಮಂತ್ರ.
ಯಾವುದೇ ಕಾರ್ಯಕ್ರಮ ಜರುಗಿದ ನಂತರ ಆ ಅವಿಸ್ಮರಣೀಯ ಗಳಿಗೆಗಳನ್ನು ಚಿತ್ರಗಳನ್ನು ನೋಡುವುದೇ ಸಂತಸದ ಸಂಗತಿ. ಬನ್ನಿ, ಸಮ್ಮೇಳನ ಆರಂಭವಾಗುವ ಮುನ್ನವೇ ಬೃಂದಾವನದ ಆಶ್ರಯದಲ್ಲಿ ನಡೆಯುತ್ತಿರುವ 6ನೇ ಅಕ್ಕ ಸಮ್ಮೇಳನದ ಆ ಸರಿದುಹೋದ ಗಳಿಗೆಗಳನ್ನು ಚಿತ್ರಗಳಲ್ಲಿ ಕಣ್ತುಂಬಿಕೊಳ್ಳಿ. ಕಾರ್ಯಕ್ರಮ ಶುರುವಾಗುತ್ತಿದ್ದಂತೆ ಇನ್ನಷ್ಟು ಚಿತ್ರಗಳು ಗ್ಯಾಲರಿ ಮುಖಾಂತರ ಹರಿದುಬರಲಿದೆ, ನಿರೀಕ್ಷಿಸಿ.
ಅಕ್ಕ ಗ್ಯಾಲರಿ
* ಸ್ಮರಣ ಸಂಚಿಕೆಗಳು
* ಕಾರ್ಯಕ್ರಮ ನಿರೂಪಕರ ಪೂಲ್
* ಧ್ಯೇಯ, ಆಶಯ ಗೀತೆಗಳ ಅನಾವರಣ
* ಭರ್ಜರಿ ಅಕ್ಕ ರೋಡ್ ಶೋ
* ಆಹ್ವಾನಕೋರಿ ಬೆಂಗಳೂರಿಗೆ ಆಗಮಿಸಿದ ಸಂದರ್ಭ
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications