ನಾವಿಕ ಸಮ್ಮೇಳನದಲ್ಲಿ ಎಂಡಿ ಪಲ್ಲವಿ ಸಂಗೀತಸುಧೆ

ರಂಗಕರ್ಮಿ ಎಎಸ್ ಮೂರ್ತಿ ಅವರ ಮೊಮ್ಮಗಳಾಗಿರುವ ಪಲ್ಲವಿ ಅವರಿಗೆ ಅಭಿನಯ ರಕ್ತದಲ್ಲಿಯೇ ಹರಿದುಬಂದಿತು. ನಟನೆಯ ಜೊತೆಜೊತೆಗೆ ಸಂಗೀತ ಕೂಡ ಪಲ್ಲವಿಯಲ್ಲಿ ಅನುಪಲ್ಲವಿಸಿದೆ. ಡ್ರಮ್ಮರ್ ಅರುಣ್ ಅವರನ್ನು ಮದುವೆಯಾದನಂತರ ಇಬ್ಬರ ತಾಳಮೇಳದ ಸಂಗೀತ ಇಡೀ ಜಗತ್ತಿನಾದ್ಯಂತ ಸಂಗೀತ ಪ್ರೇಮಿಗಳ ಗುಂಗು ಹಿಡಿಸಿದೆ.
ಪ್ರಸ್ತುತ, ಎಂಡಿ ಪಲ್ಲವಿ ಅರುಣ್ ಅವರು ಜುಲೈ 2ರಿಂದ 4ರವರೆಗೆ ಲಾಸ್ ಏಂಜಲಿಸ್, ಅಮೆರಿಕಾದಲ್ಲಿ ನಡೆಯುತ್ತಿರುವ ಪ್ರಪ್ರಥಮ ನಾವಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕ ಸರಕಾರದ ವತಿಯಿಂದ ಭಾಗವಹಿಸುತ್ತಿದ್ದಾರೆ. ಗಂಡ ಅರುಣ್ ಮತ್ತು ಕೀಬೋರ್ಡ್ ನುಡಿಸುವ ಕೃಷ್ಣ ಉಡುಪ ಅವರು ಜೊತೆಯಾಗಲಿದ್ದಾರೆ. ಅಮೆರಿಕದ ಪಶ್ಚಿಮ ಕರಾವಳಿಯ ಕನ್ನಡಿಗರು ಪಲ್ಲವಿ, ಅರುಣ್ ಅವರ ಫ್ಯುಷನ್ ಮ್ಯುಸಿಕ್ ಮೋಡಿಗೊಳಗಾಗುವುದರಲ್ಲಿ ಸಂದೇಹವಿಲ್ಲ.
ಅರುಣ್ ಅವರು ಅರ್ಧ ಶತಕದ ಹತ್ತಿರ ಸಾಗರೋಲ್ಲಂಘನ ಮಾಡಿದ್ದರೆ ಪಲ್ಲವರಿಯವರಿಗೆ ಇದು ಅಮೆರಿಕಾಕ್ಕೆ ಎರಡನೇ ಭೇಟಿ. ನಾವಿಕದಲ್ಲಿ ಸಂಗೀತಸುಧೆ ಹರಿಸಲಿರುವ ಪಲ್ಲವಿಯವರು ದಟ್ಸ್ ಕನ್ನಡ ಜೊತೆ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಪ್ರಶಸ್ತಿ-ಪುರಸ್ಕಾರ : ಅವರಿಗೆ ಖ್ಯಾತಿ ತಂದು ಕೊಟ್ಟದ್ದು ಸೂರಿ ನಿರ್ದೇಶನದ, ದುನಿಯಾ ಚಿತ್ರದ, ನಾಗೇಂದ್ರ ಪ್ರಸಾದ್ ಸಾಹಿತ್ಯವಿದ್ದ, ವಿ ಮನೋಹರ್ ಸಂಗೀತ ನೀಡಿದ್ದ 'ನೋಡಯ್ಯ ಕ್ವಾಟೆ ಲಿಂಗವೆ' ಹಾಡು. ಜೀವ ತುಂಬಿ ಹಾಡಿದ್ದಕ್ಕೆ ಎಂಡಿ ಪಲ್ಲವಿ ಅವರಿಗೆ 2006-07ನೇ ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಜ್ಯ ಪ್ರಶಸ್ತಿಯೂ ಹುಡುಕಿಕೊಂಡು ಬಂದಿತು. ಇತ್ತೀಚೆಗೆ ಬಿಡುಗಡೆಯಾಗಿದ್ದ ಗುರುಪ್ರಸಾದ್ ನಿರ್ದೇಶನದ ಎದ್ದೇಳು ಮಂಜುನಾಥ ಚಿತ್ರದ 'ಈ ಲೋಕವೆ ದೇವರು ಮಾಡಿರೋ ಬಾರು' ಹಾಡು ಚಿತ್ರರಸಿಕರನ್ನು ಮತ್ತಿನಲ್ಲಿ ತೇಲಾಡಿಸಿತ್ತು.
ನಟನೆಯಲ್ಲೂ ಸೈ ಎಂದಿರುವ ಪಲ್ಲವಿ ಟಿಎನ್ ಸೀತಾರಾಂ ಅವರು ಮಾಯಾಮೃಗ, ಮುಕ್ತ ಮುಕ್ತ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಗರ್ವ ಧಾರಾವಾಹಿಯ ನಟನೆಗೆ ಆರ್ಯಭಟ ಅತ್ಯುತ್ತಮ ನಟಿ ಪ್ರಶಸ್ತಿ ಅವರ ಮುಡಿಗೇರಿತು. ಗಿರೀಶ್ ಕಾಸರವಳ್ಳಿಯವರ 'ಗುಲಾಬಿ ಟಾಕೀಸ್'ನಲ್ಲಿ ಪಲ್ಲವಿ ಅಭಿನಯ ಚಾತುರ್ಯ ತೋರಿದ್ದರು.
ಮಕ್ಕಳ ಸಂಗೀತ ಗಂಧವನ್ನು ಕಂಡುಹಿಡಿಯುವ ಜೀ ಕನ್ನಡ ಸರಿಗಮ ಲಿಟ್ಲ್ ಚಾಂಪ್ಸ್ ಕಾರ್ಯಕ್ರಮದ ನಿರೂಪಕಿಯಾಗಿ ಮತ್ತು ಗುಣಗಾನ, ಹಿರಿಯರಿಗೆ ನಮನ ಕಾರ್ಯಕ್ರಮದ ನಿರೂಪಕಿಯಾಗಿಯೂ ಎಂಡಿ ಪಲ್ಲವಿ ಅರುಣ್ ಪ್ರತಿಭೆ ಮೆರೆದಿದ್ದಾರೆ. ಅರುಣ್ ಜತೆಗೂಡಿ ಕಟ್ಟಿರುವ ಸಮುದ್ರ ಸಂಸ್ಥೆಯ ಮುಖಾಂತರ ಪಲ್ಲವಿಯವರು ಬಿಡುವಿಲ್ಲದೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಬಿಡುವಿಲ್ಲದ ಸಮಯದಲ್ಲಿ ಅನುವು ಮಾಡಿಕೊಂಡು ಕನ್ನಡ, ಇಂಗ್ಲಿಷ್ ನಾಟಕವೊಂದರಲ್ಲಿ ಕೂಡ ಅವರು ತಾಲೀಮು ನಡೆಸುತ್ತಿದ್ದಾರೆ ಹಿಂದೂಸ್ತಾನ ಸಂಗೀತ ಪ್ರವೀಣೆ ಪಲ್ಲವಿ. ಅವರಿಗೆ ದಟ್ಸ್ ಕನ್ನಡ ವತಿಯಿಂದ ಶುಭಹಾರೈಕೆಗಳು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications