ನಾವಿಕ ಸಮ್ಮೇಳನದಲ್ಲಿ ಎಂಡಿ ಪಲ್ಲವಿ ಸಂಗೀತಸುಧೆ

ರಂಗಕರ್ಮಿ ಎಎಸ್ ಮೂರ್ತಿ ಅವರ ಮೊಮ್ಮಗಳಾಗಿರುವ ಪಲ್ಲವಿ ಅವರಿಗೆ ಅಭಿನಯ ರಕ್ತದಲ್ಲಿಯೇ ಹರಿದುಬಂದಿತು. ನಟನೆಯ ಜೊತೆಜೊತೆಗೆ ಸಂಗೀತ ಕೂಡ ಪಲ್ಲವಿಯಲ್ಲಿ ಅನುಪಲ್ಲವಿಸಿದೆ. ಡ್ರಮ್ಮರ್ ಅರುಣ್ ಅವರನ್ನು ಮದುವೆಯಾದನಂತರ ಇಬ್ಬರ ತಾಳಮೇಳದ ಸಂಗೀತ ಇಡೀ ಜಗತ್ತಿನಾದ್ಯಂತ ಸಂಗೀತ ಪ್ರೇಮಿಗಳ ಗುಂಗು ಹಿಡಿಸಿದೆ.
ಪ್ರಸ್ತುತ, ಎಂಡಿ ಪಲ್ಲವಿ ಅರುಣ್ ಅವರು ಜುಲೈ 2ರಿಂದ 4ರವರೆಗೆ ಲಾಸ್ ಏಂಜಲಿಸ್, ಅಮೆರಿಕಾದಲ್ಲಿ ನಡೆಯುತ್ತಿರುವ ಪ್ರಪ್ರಥಮ ನಾವಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕ ಸರಕಾರದ ವತಿಯಿಂದ ಭಾಗವಹಿಸುತ್ತಿದ್ದಾರೆ. ಗಂಡ ಅರುಣ್ ಮತ್ತು ಕೀಬೋರ್ಡ್ ನುಡಿಸುವ ಕೃಷ್ಣ ಉಡುಪ ಅವರು ಜೊತೆಯಾಗಲಿದ್ದಾರೆ. ಅಮೆರಿಕದ ಪಶ್ಚಿಮ ಕರಾವಳಿಯ ಕನ್ನಡಿಗರು ಪಲ್ಲವಿ, ಅರುಣ್ ಅವರ ಫ್ಯುಷನ್ ಮ್ಯುಸಿಕ್ ಮೋಡಿಗೊಳಗಾಗುವುದರಲ್ಲಿ ಸಂದೇಹವಿಲ್ಲ.
ಅರುಣ್ ಅವರು ಅರ್ಧ ಶತಕದ ಹತ್ತಿರ ಸಾಗರೋಲ್ಲಂಘನ ಮಾಡಿದ್ದರೆ ಪಲ್ಲವರಿಯವರಿಗೆ ಇದು ಅಮೆರಿಕಾಕ್ಕೆ ಎರಡನೇ ಭೇಟಿ. ನಾವಿಕದಲ್ಲಿ ಸಂಗೀತಸುಧೆ ಹರಿಸಲಿರುವ ಪಲ್ಲವಿಯವರು ದಟ್ಸ್ ಕನ್ನಡ ಜೊತೆ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಪ್ರಶಸ್ತಿ-ಪುರಸ್ಕಾರ : ಅವರಿಗೆ ಖ್ಯಾತಿ ತಂದು ಕೊಟ್ಟದ್ದು ಸೂರಿ ನಿರ್ದೇಶನದ, ದುನಿಯಾ ಚಿತ್ರದ, ನಾಗೇಂದ್ರ ಪ್ರಸಾದ್ ಸಾಹಿತ್ಯವಿದ್ದ, ವಿ ಮನೋಹರ್ ಸಂಗೀತ ನೀಡಿದ್ದ 'ನೋಡಯ್ಯ ಕ್ವಾಟೆ ಲಿಂಗವೆ' ಹಾಡು. ಜೀವ ತುಂಬಿ ಹಾಡಿದ್ದಕ್ಕೆ ಎಂಡಿ ಪಲ್ಲವಿ ಅವರಿಗೆ 2006-07ನೇ ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಜ್ಯ ಪ್ರಶಸ್ತಿಯೂ ಹುಡುಕಿಕೊಂಡು ಬಂದಿತು. ಇತ್ತೀಚೆಗೆ ಬಿಡುಗಡೆಯಾಗಿದ್ದ ಗುರುಪ್ರಸಾದ್ ನಿರ್ದೇಶನದ ಎದ್ದೇಳು ಮಂಜುನಾಥ ಚಿತ್ರದ 'ಈ ಲೋಕವೆ ದೇವರು ಮಾಡಿರೋ ಬಾರು' ಹಾಡು ಚಿತ್ರರಸಿಕರನ್ನು ಮತ್ತಿನಲ್ಲಿ ತೇಲಾಡಿಸಿತ್ತು.
ನಟನೆಯಲ್ಲೂ ಸೈ ಎಂದಿರುವ ಪಲ್ಲವಿ ಟಿಎನ್ ಸೀತಾರಾಂ ಅವರು ಮಾಯಾಮೃಗ, ಮುಕ್ತ ಮುಕ್ತ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಗರ್ವ ಧಾರಾವಾಹಿಯ ನಟನೆಗೆ ಆರ್ಯಭಟ ಅತ್ಯುತ್ತಮ ನಟಿ ಪ್ರಶಸ್ತಿ ಅವರ ಮುಡಿಗೇರಿತು. ಗಿರೀಶ್ ಕಾಸರವಳ್ಳಿಯವರ 'ಗುಲಾಬಿ ಟಾಕೀಸ್'ನಲ್ಲಿ ಪಲ್ಲವಿ ಅಭಿನಯ ಚಾತುರ್ಯ ತೋರಿದ್ದರು.
ಮಕ್ಕಳ ಸಂಗೀತ ಗಂಧವನ್ನು ಕಂಡುಹಿಡಿಯುವ ಜೀ ಕನ್ನಡ ಸರಿಗಮ ಲಿಟ್ಲ್ ಚಾಂಪ್ಸ್ ಕಾರ್ಯಕ್ರಮದ ನಿರೂಪಕಿಯಾಗಿ ಮತ್ತು ಗುಣಗಾನ, ಹಿರಿಯರಿಗೆ ನಮನ ಕಾರ್ಯಕ್ರಮದ ನಿರೂಪಕಿಯಾಗಿಯೂ ಎಂಡಿ ಪಲ್ಲವಿ ಅರುಣ್ ಪ್ರತಿಭೆ ಮೆರೆದಿದ್ದಾರೆ. ಅರುಣ್ ಜತೆಗೂಡಿ ಕಟ್ಟಿರುವ ಸಮುದ್ರ ಸಂಸ್ಥೆಯ ಮುಖಾಂತರ ಪಲ್ಲವಿಯವರು ಬಿಡುವಿಲ್ಲದೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಬಿಡುವಿಲ್ಲದ ಸಮಯದಲ್ಲಿ ಅನುವು ಮಾಡಿಕೊಂಡು ಕನ್ನಡ, ಇಂಗ್ಲಿಷ್ ನಾಟಕವೊಂದರಲ್ಲಿ ಕೂಡ ಅವರು ತಾಲೀಮು ನಡೆಸುತ್ತಿದ್ದಾರೆ ಹಿಂದೂಸ್ತಾನ ಸಂಗೀತ ಪ್ರವೀಣೆ ಪಲ್ಲವಿ. ಅವರಿಗೆ ದಟ್ಸ್ ಕನ್ನಡ ವತಿಯಿಂದ ಶುಭಹಾರೈಕೆಗಳು.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications