ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಿತ್ರ ಚಿತ್ತಾರ - ಚುಟುಕು ವಿಚಾರ
ಚಿತ್ರ
ಚಿತ್ತಾರ
-
ಚುಟುಕು
ವಿಚಾರ
‘ಲೆಕ್ಕಿಗ’ಮಿತಾಕ್ಷರರು
ಬೆಳೆದು
ಮೆರೆದಿಹ
ನಾಡು...
(ವಿಶ್ವಕನ್ನಡ
ಸಮ್ಮೇಳನ
2006ರ
ದಿನಗಣನೆ
ಚಿತ್ರಸಂಪುಟ
ರೂಪದಲ್ಲಿ)
ಈ ಬಾರಿ ಬೂತ್ ಸ್ಥಾಪನೆಗೆ ಒಟ್ಟು ನೂರಹನ್ನೊಂದು ಪ್ರವೇಶಪತ್ರಗಳು ಬಂದಿವೆ! ಅಂದರೆ ಈ ಸಮ್ಮೇಳನದಲ್ಲಿ ವಾಣಿಜ್ಯಮಳಿಗೆಗಳ ಭರಾಟೆಯೂ ಹಿಂದಿನ ಸಮ್ಮೇಳನಗಳಿಗಿಂತ ಅಧಿಕವಾಗಿದೆ. ಆಭರಣ, ಸೀರೆ, ಕರಕುಶಲಸಾಮಗ್ರಿ ಇತ್ಯಾದಿ ಹತ್ತುಹಲವು ಮಳಿಗೆಗಳು ಸಮ್ಮೇಳನಾರ್ಥಿ(ನಿ)ಗಳನ್ನು ಆಕರ್ಷಿಸಲಿವೆ.
ಮಳಿಗೆಗಳ ಸಂಖ್ಯೆ ಅಧಿಕವಾದಷ್ಟೂ ಅವುಗಳ ಬಗೆಗಿನ ಲೆಕ್ಕಪತ್ರಗಳ ನಿರ್ವಹಣೆ ಸಹ ಗುರುತರವಾದುದು. ಚಿತ್ರದಲ್ಲಿ ‘ಬೂತ್ ಕಮಿಟಿ’ಯ ಮಧುಮೂರ್ತಿಯವರು ತನ್ನ ಸಮಿತಿಯ ಸದಸ್ಯರೊಂದಿಗೆ ಗಹನವಾದ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ಇಷ್ಟು ಕಾಗದಪತ್ರಗಳನ್ನು ಹರಡಿಕೊಂಡು ಅವರು ಕುಳಿತ ಭಂಗಿ ನೋಡಿದರೆ ಮದುವೆಗೆ ಮುಂಚೆ ವಧು-ವರರ ಕುಂಡಲಿ(ಜಾತಕ)ಗಳನ್ನು ತಾಳೆ ನೋಡಲು ಕುಳಿತಿರುವ ಜೋಯಿಸರಂತಿದೆ. ಆದರೆ ಇವು ಕುಂಡಲಿಗಳಲ್ಲ, ಸಮ್ಮೇಳನ ಬೊಕ್ಕಸದ ತಾಳೆಗೆ ಲೆಕ್ಕ ಬರೆದ ಹಾಳೆಗಳು!
ಸಂಯೋಜನೆ
ಮತ್ತು
ನಿರೂಪಣೆ
-
ಶ್ರೀವತ್ಸ
ಜೋಶಿ
;
ಮೇರಿಲ್ಯಾಂಡ್
([email protected])
ಸಹಕಾರ
-
ಹರಿದಾಸ್
ಲಹರಿ
;
ವರ್ಜೀನಿಯ
([email protected])
ಸಮ್ಮೇಳನದ ಕೌಂಟ್ಡೌನ್ ಆರಂಭ : ಇನ್ನು ಕೇವಲ 8 ದಿನ ಬಾಕಿ ಉಳಿದಿವೆ!!!
ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್ ಮಿರರ್ :
Comments
Story first published: Wednesday, April 5, 2006, 16:50 [IST]