ಜಯರಾಮ ಕೆ. ಉಡುಪ, ಆಡುಬಾನ್, ಪೆನ್ಸಿಲ್ವೇನಿಯಾ
ಹೃನ್ಮನೋರುತಿ
-
ಜಯರಾಮ
ಕೆ.
ಉಡುಪ,
ಆಡುಬಾನ್,
ಪೆನ್ಸಿಲ್ವೇನಿಯಾ
[email protected]
‘‘ನಾನು
ಪುರುಷ
ನೀನು
ಪ್ರಕೃತಿ,
ಬುದ್ಧಿ
ಭಾವದಾಕೃತಿ;
ಮನದ
ಮಿಡಿತ
ಎದೆಯ
ಮೊರೆತವೊರೆವ
ದ್ವಂದ್ವ
ಮೂರುತಿ.
ಬುದ್ಧಿ
ಶಕ್ತಿ
ಆತ್ಮಸಾಕ್ಷಿ
ಜ್ಞಾನ
ಮತಿ
ವಿವೇಕವು,
ಸೃಷ್ಟಿ
ಯುಕ್ತಿ
ಧ್ಯಾನ
ಮುಕ್ತಿ
ನನಗೆ
ಸ್ವ
ಅಧೀನವು
ನ್ಯಾಯ
ನೀತಿ
ಯಮ
ನಿಯಮ
ನೇಮ
ನಿಷ್ಠೆ
ತರ್ಕವು,
ಯೋಗ
ಸ್ಥಿರತೆ
ಪ್ರತ್ಯಾಹಾರ
ನನ್ನ
ಆಧಿಪತ್ಯವು.’’
ಹೃತ್:
‘‘ನಲಿವು
ನಗುವು
ಸೊಗವು
ಮುದವು
ನಲ್
ರಸಗಳ
ಚಿಲುಮೆಯು,
ಗೆಲವು
ಗಂಧ
ಚೆಲುವು
ಚೆಂದ
ನನ್ನ
ಭಾವಲೋಕವು.
ಪ್ರೇಮ
ಮೈತ್ರಿ
ಪ್ರಣಯ
ಹಾಸ್ಯ
ವೀರ್ಯಗಳಿಗೆ
ಸ್ಪಂದನ,
ಸ್ನೇಹ
ಕೀರ್ತಿ
ಸಹನೆ
ದಯೆಗೆ
ನಾನು
ಕುಣಿವೆ
ತೋಂನನ.’’
ಮನಸ್:
‘‘ನಿನ್ನ
ಭಾವಲೋಕದಲೆಯ
ಭರತವಿಳಿತದೇಟಿಗೆ,
ತನ್ನ
ಸದ್ವಿವೇಕವಳಿಯೆ
ಮನುಜನಿಳಿವ
ಕೇಡಿಗೆ.
ನನ್ನ
ಶಾಂತಿಯಳಿಸಿ
ತುಳಿವೆ
ನರನ
ಕಸರು
ಕೋಟಿಗೆ,
ನಿನ್ನ
ಭ್ರಾಂತಿ
ಕಳೆಯೆ
ಜಗದಿ
ನಿಜದಿ
ಒಳಿತಿನೇಳಿಗೆ.’’
ಹೃತ್:
‘‘ತತ್ತ್ವ
ತರ್ಕ
ಶಾಸ್ತ್ರ
ಜ್ಞಾನ
ಭಾವ
ಶೂನ್ಯ
ಶೋಧನೆ,
ಸ್ವತ್ವ
ಹಮ್ಮು
ಸ್ವಪ್ರತಿಷ್ಠೆ
ನಿನ್ನ
ಶುಷ್ಕ
ಸಾಧನೆ.
ನಂದ
ಭಾವ
ಲಹರಿ
ಹರಿಸಿ
ನಾನು
ಜೀವ
ಭರಿಸುವೆ,
ಅಂತರಾಳವನ್ನು
ಸವರಿ
ಸುಖಶಾಖವ
ಸುರಿಸುವೆ.’’
ಮನಸ್, ಹೃತ್:
‘‘ವೈಮನಸ್ಯ
ಕಲಹ
ತಾಪ
ನಮ್ಮಲೇಕೆ
ತಲ್ಲಣ?
ಐಕಮತ್ಯವಿರದ
ಶಾಪ
ನಮಗೆ
ಏಕೆ
ಅನುದಿನ?
ಹೊಂದೆ
ನಮ್ಮ
ಆತ್ಮ
ಮಿಲನ
ಸಮತೋಲನ
ಸದನ,
ಒಂದೆ
ನೊಗದ
ಜೋಡೆತ್ತಿನ
ಸಮಗಮನದ
ಚಲನ.’’
ಹೃತ್:
‘‘ನಾವು
ಪುರುಷ-ಪ್ರಕೃತಿ,
ನಮ್ಮ
ಬಂಧ
ಹೃನ್ಮನೋರುತಿ,
ನಿನ್ನ
ಉಲಿತ
ನನ್ನ
ಮಿಡಿತವೆಂಬ
ಗಾನದಾ
ಶ್ರುತಿ.’’
(ಶಬ್ದಾರ್ಥ : ರುತಿ=ಮಾತು, ಒರೆ=ಹೇಳು, ದ್ವಂದ್ವ=ಪರಸ್ಪರ ವಿರುದ್ಧ ವಸ್ತುಗಳ ಜೋಡಿ, ಯಮ=ನೈತಿಕ ಅನುಶಾಸನ, ನಿಯಮ=ಸ್ವಶುದ್ಧಿ, ಶಿಸ್ತು, ಪ್ರತ್ಯಾಹಾರ=ಇಂದ್ರಿಯ ನಿಗ್ರಹ, ಕಸರು=ಬೇಗೆ, ಕೋಟಿ=ತುದಿ, ನಂದ=ಸಂತೋಷ.)