ರವಿಕೃಷ್ಣಾರೆಡ್ಡಿಯರ 'ಎದೆಯ ಕೂಗು ಮೀರಿ'ದ ಮಾತುಗಳು..

ಪ್ರಿಯ ಓದುಗರೆ,
ಸರಿಯಾಗಿ ವರ್ಷದ ಹಿಂದೆ ಆರಂಭವಾದ 'ಎದೆಯ ಕೂಗು ಮೀರಿ..." ಕಾದಂಬರಿಯ ಕೊನೆಯ ಕಂತು ಕಳೆದ ಸೋಮವಾರ ಪ್ರಕಟವಾಗಿದೆ. ಈ ಒಂದು ವರ್ಷದಲ್ಲಿ ಅನೇಕ ಓದುಗರು ಕಾದಂಬರಿ ಬಗ್ಗೆ ಹಲವಾರು ರೀತಿಯ ಪತ್ರಗಳನ್ನು ಬರೆದು ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ಪ್ರಕಟವಾಗಬೇಕಾದ ಕಂತು ಅಂದು ಪ್ರಕಟವಾಗದೆ ಹೋದರೆ ಯಾಕೆ ಇನ್ನೂ ಪ್ರಕಟವಾಗಿಲ್ಲ ಎನ್ನುವ ಪತ್ರಗಳಿಂದ ಹಿಡಿದು, ಅನುವಾದ ಶೈಲಿ ಮತ್ತು ಕಥಾ ಹಂದರವನ್ನು ಟೀಕಿಸಿ ಕೆಲವು, ಮೆಚ್ಚಿಕೊಂಡು ಹಲವು, ಸ್ವಲ್ಪ ಅಸಭ್ಯವಾಗಿ, ಅಶ್ಲೀಲವಾಗಿ ವೈಯಕ್ತಿಕ ಟೀಕೆ ಮಾಡಿದಂತಹ ಪತ್ರಗಳನ್ನೂ ಕೆಲವು ಓದುಗರು ಕಳಿಸಿದ್ದಾರೆ. ಧನ್ಯವಾದ.
ಯಾವುದೊ ಒಬ್ಬ ವ್ಯಕ್ತಿಯ ವೈಯಕ್ತಿಕ ಸಮಸ್ಯೆಯನ್ನು ತ್ಯಾಗ, ಪಾತಿವ್ರತ್ಯ, ಪ್ರೇಮ, ಸಹನಶೀಲತೆ, ಪರಂಪರೆ, ಸಂಸ್ಕೃತಿಯ ಹೆಸರಿನಲ್ಲಿ ವೈಭವೀಕರಿಸಿ, ಕಲ್ಪನಾಶಕ್ತಿಯಿರುವ ಯಾರು ಬೇಕಾದರೂ ದಿನಕ್ಕೊಂದು ಕತೆ, ವಾರಕ್ಕೊಂದು ಕಾದಂಬರಿ ಬರೆಯಬಹುದು; ಬರೆದಿದ್ದಾರೆ; ಬರೆಯುತ್ತಿದ್ದಾರೆ. ಅವುಗಳಲ್ಲಿ ಬಹುಪಾಲು ಸಮಯ ಕಳೆಯಲು ಓದಲು ಲಾಯಕ್ಕಾದ ಕೃತಿಗಳಾಗುತ್ತವೆಯೆ ಹೊರತು ಅವಕ್ಕೆ ಸಾರ್ವಕಾಲೀನ ಸಮಾನತೆಯ ತತ್ವಗಳಾಗಲಿ, ಸಂದೇಶಗಳಾಗಲಿ, ಸತ್ಯವಾಗಲಿ ಇರುವುದಿಲ್ಲ. ಓದಿದ ಬಳಿಕ ಹಿತಾನುಭವವಾಗಬಹುದು. ಆದರೆ ಯಾರನ್ನೂ ಅದು ಕಾಡದೆ ಹೋಗಬಹುದು; ಇಲ್ಲವೆ ತಮ್ಮ ಅಥವ ಬೇರೆಯವರ ಕೆಟ್ಟ ನಡವಳಿಕೆಯನ್ನು ತಿದ್ದುವ, ಅಥವ ತಮಗೆ ಬೇಕಾದವರ ಒಳ್ಳೆಯ ನಡವಳಿಕೆಯನ್ನು ಗಮನಿಸುವ, ಪ್ರಶಂಸಿಸುವ ಯಾವುದೆ ಒಳನೋಟ ತೋರಿಸದೆ ಹೋಗಬಹುದು. ಅಂತಹವನ್ನು ಓದಿದ ಮೇಲೆ ಯಾರೂ ಅದರ ಬಗ್ಗೆ ಚರ್ಚಿಸುವುದಿಲ್ಲ; ಟೀಕೆ ಮಾಡುವುದಾಗಲಿ ಮೆಚ್ಚಿಕೊಂಡು ಲೇಖಕರಿಗೆ ಪತ್ರ ಬರೆಯುವುದಾಗಲಿ ಅಪರೂಪವೆ.
ಯಾವುದೊ ಒಂದನ್ನು ಸಾಮಾಜಿಕ ಸಮಸ್ಯೆ ಎಂದ ಮಾತ್ರಕ್ಕೆ ಅದು ಎಲ್ಲರ ಮನೆಯ ಸಮಸ್ಯೆಯೇನೂ ಅಲ್ಲ. ಆದರೆ ಅದಕ್ಕೊಂದು ಪ್ಯಾಟರ್ನ್ ಇರುತ್ತದೆ. ಅದನ್ನು ಗುರುತಿಸುವುದು ಸುಲಭವಾದ್ದರಿಂದ ಅದನ್ನು ತಡೆಗಟ್ಟಲು ಸಮಾಜದ ಸಹಾಯ, ಸರ್ಕಾರದ ಕಾನೂನುಗಳ ಅವಶ್ಯಕತೆಯಿರುತ್ತದೆ. ಎಲ್ಲಕ್ಕಿಂತ ಮೊದಲು ಆ ಸಮಸ್ಯೆಯನ್ನು ಗಂಭೀರವಾಗಿ, ಹಿಂಜರಿಯದೆ ಮಾತನಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು 'ಎದೆಯ ಕೂಗು ಮೀರಿ..."ಯನ್ನು ಗಮನಿಸಬೇಕಾಗುತ್ತದೆ. ಹಾಗೂ ಇಂತಹ ಒಂದು ಸಾಮಾಜಿಕ ಸಮಸ್ಯೆಯ ಹಿನ್ನೆಲೆ ಇಟ್ಟುಕೊಂಡು ಕತೆ-ಕಾದಂಬರಿಯನ್ನು ಬರೆಯುವ ಲೇಖಕ ಎಲ್ಲಾ ಬಗೆಯ ಪ್ರಶಂಸೆ-ಟೀಕೆಗೆ ಸಿದ್ದವಾಗಿಯೆ ಬರೆಯಬೇಕಾಗುತ್ತದೆ.
ಈ ಸಮಯದಲ್ಲಿ ನಿಮ್ಮ ಎಲ್ಲಾ ಟೀಕೆ, ವಿಮರ್ಶೆ, ಅಭಿಪ್ರಾಯಗಳಿಗೆ ಮೂಲ ಲೇಖಕರಾದ ಅಸಿತ ಪ್ರಭುಶಂಕರ್ರವರಿಂದಲೂ ಮತ್ತು ಅನುವಾದಕನಾದ ನನ್ನಿಂದಲೂ ಸ್ವಾಗತವಿದೆ. ದಯವಿಟ್ಟು ಬರೆಯಿರಿ. ತಮ್ಮಲ್ಲಿ ನನ್ನ ಒಂದೇ ಒಂದು ಮನವಿ ಏನೆಂದರೆ ಅನಾಮಿಕರಾಗಿ ಬರೆಯಬೇಡಿ; ಅಶ್ಲೀಲವಾದ ವೈಯಕ್ತಿಕ ಟೀಕೆ ಬೇಡ ಎಂದಷ್ಟೆ. ಎಂತಹುದ್ದನ್ನೆ ಆಗಲಿ ಸಭ್ಯವಾಗಿಯೆ ಕಠಿಣವಾಗಿ ಟೀಕಿಸಬಹುದು. ಅಸಭ್ಯವಾಗಿ ಟೀಕಿಸುವವರು ಹಾಗೆ ಮಾಡಲಾಗದೆ ಮೈ ಪರಚಿಕೊಳ್ಳುವವರು ಮಾತ್ರವಾಗಿರುತ್ತಾರೆ.
ಇಲ್ಲಿಯ ತನಕ ಪತ್ರ ಬರೆದವರಿಗೂ, ಮುಂದೆ ಬರೆಯುವವರಿಗೂ, ಓದುಗರಿಗೂ, ಇಂತಹ ವಿಭಿನ್ನ ಕಾದಂಬರಿಯನ್ನು ಚಾಚೂ ತಪ್ಪದೆ ಪ್ರಕಟಿಸಿದ ದಟ್ಸ್ಕನ್ನಡ ಅಂತರ್ಜಾಲ ತಾಣಕ್ಕೂ ನನ್ನ ಪ್ರೀತಿಪೂರ್ವಕ ಧನ್ಯವಾದ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications