ಸಂಪಿಗೆಯಲ್ಲಿ ಅ.22 ವಿದ್ಯಾಭೂಷಣರ ಸಂಗೀತದ ಕಂಪು

ದಾಸ ದಾಸರ ದಾಸ ಗಾನಯೋಗಿಯಾತ
ಸಂಸಾರ ಸಾಗರವನೀಜಿ ಹರಿದಾಸನಾದಾತ.
ಭಕ್ತಿಯಿಂದ ಮೆಚ್ಚಿಸಿ ಹರಿಯನ್ನೆ ದಾಸನಾಗಿಸಿದ
ಹರಿದಾಸರುಗಳ ಪರಿಯನ್ನು ಕಲಿಯುಗದಲ್ಲಿ
ಪಾಲಿಸುವ ಪರಿ ಹೇಗೆನ್ನುತ್ತೀರಾ? ಬನ್ನಿ ಕೇಳಿ..
ಪೀಠ ತ್ಯಾಗ ಮಾಡಿದರೂ ಹರಿದಾಸ ನಿಷ್ಠೆ ಬಿಡದೆ ತಮ್ಮ ಗಾನ ಸೌರಭದ ಮೂಲಕ ಕೇಳುಗರಲ್ಲಿ ಆಧ್ಯಾತ್ಮದ ಎಚ್ಚರಕ್ಕೆ ಅನುವು ಮಾಡಿಕೊಡುತ್ತಲೇ ಬಂದಿರುವ ವಿದ್ಯಾಭೂಷಣರು ಮತ್ತೆ ನಮ್ಮ ನಡುವೆ ಬರುತ್ತಿದ್ದಾರೆ.
ಪ್ರತಿ ಕನ್ನಡ ಸಮ್ಮೇಳನದಲ್ಲೂ ಕೇಳುಗರ ಅಭಿಮಾನದಿಂದ ಎರಡೆರಡು ಬಾರಿ ಕಛೇರಿ ಕೊಡಬೇಕಾಗುವುದು ಇವರಿಗೆ ಭೂಷಣ. ಪೀಠದ ಬಲವಿಲ್ಲದೆಯೇ ತಮ್ಮ ಹೆಸರಿಗೊಂದು ತೂಕ ತಂದುಕೊಂಡಿರುವ ವಿದ್ಯಾಭೂಷಣರ ಜೀವನ, ಸಾತ್ವಿಕತೆ, ಸೌಜನ್ಯತೆ, ಪ್ರಾಮಾಣಿಕತೆಗಳ ಅನುಷ್ಠಾನ. ಎಲ್ಲ ಮತಗಳ ಆಚರಣೆಯಲ್ಲೂ ಕಷ್ಟಸಾಧ್ಯವಾಗಿ ಸೇರಿಹೋಗಿ, ಹಲವು ಬಾರಿ ನೈತಿಕ ಸಿಕ್ಕುಗಳಿಗೆ ಕಾರಣವಾಗಿರುವ ಬ್ರಹ್ಮಚರ್ಯದ ಭೂತಕ್ಕೆ ಬಾಗದೆ ದೈವ ತನ್ನೊಳಗೆ ಮೊಳಗಿಸಿದ ಜೀವ ದನಿಯನ್ನು ಭಕ್ತಿಯ ಉತ್ಕಟತೆಯಲ್ಲಿ ಹಾಡಿ ಹರಿದಾಸನಾಗಿ ಬದುಕಿದ ವಿದ್ಯಾಭೂಷಣರ ಪರಿ ದಾಸ ಪಂಥಕ್ಕೆ ಯೋಗ್ಯವಾದುದು.
ಅನುದಿನ ಅನುಕ್ಷಣವೂ ಎರಗುವ ಸಂಸಾರದ ಜಂಜಡಗಳ ನಡುವೆ ದೈವದ ಮೇಲಿನ ನೇಮ ನಿಷ್ಠೆ ಸಾಮಾನ್ಯರಿಗೂ ಸಾಧ್ಯವಾಗುವುದಕ್ಕೆಂದೇ ಕೀರ್ತನೆಗಳನ್ನು ಬರೆದು ಹಾಡಿ ಕುಣಿದು ನಲಿದಾಡಿದ ದಾಸರುಗಳ ಪಾಠವನ್ನು ಅಕ್ಷರಶ: ಪಾಲಿಸುವವರು. ಹಿರಿಯರಿಗೆ ಸ್ನೇಹಿತನಂತೆ, ಕಿರಿಯರಿಗೆ ಹಿರಿಯಣ್ಣನಂತೆ, ವಿದ್ಯಾರ್ಥಿಯಾಗಿ ಬಂದವರಿಗೆ ಗುರುವಾಗಿ ಸಂಗೀತದ ಸಾರವನ್ನು ಧಾರೆ ಎರೆಯುತ್ತ ಹರಿ ಸೇವೆ ಮಾಡುವವರು.
ದೊರಕಿದ ಭಿಕ್ಷದಿಂದಲೇ ಜೀವನ ನಡೆಸುತ್ತ ಬಂದವರಿಗೆ ನಮ್ಮೂರಿನೊಡನೇನೋ ಒಂದು ಬಂಧ. ಒಮ್ಮೆ ಬಂದವರು ಮತ್ತೆ ಬಂದರು. ಈಗ ಮತ್ತೊಮ್ಮೆ ಬರುತ್ತಿದ್ದಾರೆ - ನಮ್ಮ ಸೌಭಾಗ್ಯ. ದಾಸ ಸಾಹಿತ್ಯದ ವೈಭವದ ಅರಿವಿಗೆ ಸೋಪಾನವೆಂದರೆ ವಿದ್ಯಾಭೂಷಣರ ಗಾಯನ. ಸಂಗೀತದ ಆಯಾಮಕ್ಕೆ ಹರಿದಾಸರುಗಳ ಆಧ್ಯಾತ್ಮದ ಆಯಮವನ್ನು ಜೋಡಿಸಿ ಹಾಡುವ ವಿದ್ಯಾಭೂಷಣರದ್ದೀಗ ನಿಜವಾಯೂ ಯೋಗಿಯ ಜೀವನ. ಸುಮ್ಮನೆ ಎನ್ನ ಮಾತಿನ ಡಂಗೂರವೇಕೆ? ನಿಜವಾದ ಹರಿಭಕ್ತನ ಗಾಯನದ ಡಂಗೂರವನ್ನು ಕೇಳಿರಂತೆ. ಕೇಳಿದವರು ಹರಿದಾಸರಾಗಿ ಬಿಟ್ಟೀರೆಂಬ ಭಯವಿದ್ದರೆ ಮಾತ್ರ ಹರಿಯ ಚಿತ್ತ!
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications