ಒಹಾಯೊ ಸಿನ್ಸಿನಾಟಿಯಲ್ಲಿ ಕನ್ನಡಿಗರ ಯುಗಾದಿ

ಕಾರಣವಿಷ್ಟೆ ಸಿನ್ಸಿನಾಟಿ ಕನ್ನಡ ಗೆಳೆಯರ ಬಳಗ 'ಸಿಂಚನ' ಏಪ್ರಿಲ್ 23ರಂದು ಯುಗಾದಿಯ ಸಂಭ್ರಮದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ದೇವಾಲಯದ ಅಂಗಳದಲ್ಲಿ ಸಂಭ್ರಮವೋ ಸಂಭ್ರಮ. ನೆರೆದಿದ್ದ ಮಹಿಳೆಯರೆಲ್ಲ ಕರ್ನಾಟಕದ ಸಾಂಸ್ಕೃತಿಕ ದಿರಿಸಿನಲ್ಲಿ ಲವಲವಿಕೆಯಿಂದ ಕಂಗೊಳಿಸುತ್ತಿದ್ದರು. ಯಾವಾಗಲೋ ಒಮ್ಮೆ ಸಿಗುವ ಪುರುಷರ ಹರಟೆ ಸಾಂಗವಾಗಿ ನಡೆದಿತ್ತು. ಮಕ್ಕಳಿಗಂತೂ ಎಲ್ಲಿಲ್ಲದ ಸಂಭ್ರಮ.
ಮೂರು ಗಂಟೆಯ ಕಾರ್ಯಕ್ರಮದಲ್ಲಿ, ಮಕ್ಕಳ ಫ್ಯಾಷನ್ ಶೋ, ದಾಸರ ಪದ, ಹಾಸ್ಯದ ಹರಟೆ, ಮಹಿಳೆಯರ ನೃತ್ಯ, ಲಘು ನಾಟಕ ಇತ್ಯಾದಿಗಳು ಆಕರ್ಷಕವಾಗಿ ಮೂಡಿ ಬಂದವು. ಅಷ್ಟೇ ಅಲ್ಲದೆ ಯುಗಾದಿ ಎಂದರೇನು, ಯುಗಾದಿಯ ಮಹತ್ವವೇನು, ಯುಗಾದಿಯ ಬಗ್ಗೆ ಎಲ್ಲೆಲ್ಲಿ ಉಲ್ಲೇಖ ಸಿಗುತ್ತದೆ. ನಾನಾ ಪ್ರಾಂತ್ಯದಲ್ಲಿ ಯುಗಾದಿಯನ್ನು ಹೇಗೆ ಆಚರಿಸಲಾಗುತ್ತದೆ ಎಂಬುದನ್ನೂ ತಿಳಿಸಿಕೊಡಲಾಯಿತು.
ಮಧ್ಯೆ ಮಧ್ಯೆ ಹಾಸ್ಯದ ಒಗ್ಗರಣೆಯ ಮೂಲಕ ನಿರೂಪಕರಾದ ಪ್ರಸನ್ನ ಮತ್ತು ಶ್ರೀಧರ ಮೂರ್ತಿಯವರು ಗಮನ ಸೆಳೆದರು. ಕನ್ನಡದ ಅನೇಕ ಪದಗಳನ್ನು ಅವುಗಳ ಅರ್ಥ/ಅನರ್ಥಗಳ ಸಂಯೋಗದೊಂದಿಗೆ ಬಳಸಿಕೊಂಡು, ಮಧ್ಯ ಮಧ್ಯ ನಾ ಕಸ್ತೂರಿಯವರ ಅನರ್ಥಕೋಶ, ವೈಎನ್ಕೆಯವರ ವಂಡರ್ ಕಣ್ಣಿನ ಪನ್ಗಳನ್ನು ಉದಾಹರಿಸಿದ್ದು ನೆರೆದಿದ್ದವರನ್ನೆಲ್ಲಾ ನಗೆಗಡಲಲ್ಲಿ ತೇಲಿಸಿತು. ಸಮೋಸ, ಕಾಫಿ ಸೇವಿಸಿ, ಕಾರ್ಯಕ್ರಮವನ್ನು ಸವಿದು, ಭೋಜನ ಮುಗಿಸಿ ಎಲ್ಲರೂ ಭಾರ ಹೃದಯದಿಂದ ಬೀಳ್ಕೊಟ್ಟರು. ಮತ್ತೊಂದು ಕನ್ನಡದ ಕಾರ್ಯಕ್ರಮ ಬೇಗ ಬರಲಿ, ನಾವೆಲ್ಲರೂ ಇನ್ನಷ್ಟು ಉತ್ಸಾಹದಿಂದ ಸೇರುವಂತಾಗಲಿ ಎಂದು ಎಲ್ಲರ ಮನ ಹಾರೈಸಿದ್ದು ಸುಳ್ಳಲ್ಲ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications