ಶಾಂಘೈ ಕನ್ನಡ ಸಂಘ ಉದ್ಘಾಟನೆ
ಶಾಂಘೈ,
ಏ. 26 : ಚೀನಾ ದೇಶದ ಶಾಂಘೈ ನಗರದಲ್ಲಿ ಕನ್ನಡಿಗರ ಸಂಘ ಆರಂಭವಾಯಿತು. ಇದೇ 18ರಂದು ಸಂಘದ ಉದ್ಘಾಟನೆ ವಿಧ್ಯುಕ್ತವಾಗಿ ನೆರವೇರಿತೆಂದು ತಿಳಿಸಲು, ನಾವು, ಚೀನಾ ಕನ್ನಡಿಗರು ಸಂತೋಷಪಡುತ್ತೇವೆ. ಶಾಂಘೈಗೆ ಹೊಸದಾಗಿ ಬರುವ ಕನ್ನಡಿಗರಿಗೆ ಎಲ್ಲಾ ರೀತಿಯ ಸಹಾಯ ಮತ್ತು ಮಾರ್ಗದರ್ಶನ ಕೊಡುವುದು ಹಾಗು ಸದ್ಯ ಶಾಂಘೈಯಲ್ಲಿ ಇರುವ ಕನ್ನಡಿಗರು ಪರಸ್ಪರ ಬೆರೆಯುವುದು ಈ ಸಂಘದ ಮುಖ್ಯ ಉದ್ದೇಶ. id="toptextpromo">ಹಚ್ಚೇವು
ಕನ್ನಡದ ದೀಪ.. ಹಾಡಿನೊಂದಿಗೆ ಶಾಂಘೈ ಕನ್ನಡ ಸಂಘವನ್ನು ಹಿರಿಯರಾದ ಶಂಕರ ರವಿಕುಮಾರ ಅವರು ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ 7 ಜನ ಭಾಗವಹಿಸಿದ್ದರೂ ಸಹ ಸ್ಥಳೀಯ ಕನ್ನಡಿಗರಿಗೆ ಕನ್ನಡ ಸಂಘದ ನೆರಳು ಸಾಧ್ಯವಾಗುತ್ತಿರುವುದಕ್ಕೆ ಶಂಕರ್ ಅತೀವವಾದ ಹೆಮ್ಮೆ ಮತ್ತು ಸಂತೋಷ ವ್ಯಕ್ತಪಡಿಸಿದರು. ಸಂಘದ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವುದಕ್ಕೆ ಶ್ರಮಿಸುವುದಾಗಿ ಈ ಸಂದರ್ಭದಲ್ಲಿ ಎಲ್ಲರೂ ಪಣತೊಟ್ಟರು. ಇದೇ ಸಮಯದಲ್ಲಿ ತೆಗೆದುಕೊಂಡ ಕೆಲ ಪ್ರಮುಖ ನಿರ್ಣಯಗಳು ಇಂತಿವೆ. id='are-slot-1' class='oiad oi-axt oiadv'> id='top-searched-articles'>ಆರ್ಕುಟ್
ಹಾಗೂ ಫೇಸ್ಬುಕ್ ಗಳಲ್ಲಿ ಶಾಂಘೈ ಕನ್ನಡ ಸಮುದಾಯದ ಪುಟಗಳನ್ನು ತೆರೆಯುವುದು. ಶಾಂಘೈಯಲ್ಲಿ ನಡೆಯುವ ಭಾರತೀಯರ ಯಾವುದೇ ಕಾರ್ಯಕ್ರಮಗಳಲ್ಲಿ ಕನ್ನಡ ಕಾಣುವುದೇ ಇಲ್ಲ. ಇದು ಖೇದಕರ. ಈ ಕೊರತೆಯನ್ನು ಹೋಗಲಾಡಿಸಲು ಈ ಕನ್ನಡ ಗುಂಪಿನ ಮೂಲಕ ದನಿ ಎತ್ತುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಕನ್ನಡಿಗರ ಮುಂದಿನ ಮಿಲನ ದಿನಾಂಕವನ್ನು ಬರುವ ಜೂನ್ 5, 6ಕ್ಕೆ ನಿಗದಿಪಡಿಸಲಾಯಿತು. ಆ ವೇಳೆಗೆ ಕನಿಷ್ಠ 35 ಕನ್ನಡಿಗರನ್ನು ಕೂಡಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಚೀನಾದಲ್ಲಿ ನೆಲೆಸಿರುವ ಕನ್ನಡಿಗರು href="mailto:[email protected]">ಶ್ರೀಕಾಂತ ಕಲಕೋಟಿ ಅವರನ್ನು ಸಂಪರ್ಕಿಸಿ.











Click it and Unblock the Notifications