ಬ್ರಿಟನ್ ಕನ್ನಡಿಗರ ವಸಂತೋತ್ಸವ

ಆಂಗ್ಲರ ನೆಲದಲ್ಲಿ ನೆಲೆಸಿರುವ ಕನ್ನಡಿಗರು ಆಯೋಜಿಸಿರುವ 2010ನೇ ಸಾಲಿನ ವಸಂತೋತ್ಸವಕ್ಕೆ ಆಂಗ್ಲನಾಡಿನ ಸಮಸ್ತ ಕನ್ನಡಿಗರಿಗೆ ನಮಸ್ಕಾರಗಳು. ವಸಂತ ಋತುವಿನ ನವೋಲ್ಲಾಸ, ಹೊಸತನ ಎಲ್ಲರಿಗೂ ಹರುಷ ತರಲೆಂದು ಕನ್ನಡಿಗರುಯುಕೆ ಹಾರೈಸುತ್ತದೆ. ಕಾರ್ಯಕ್ರಮದ ವಿವರಗಳು ಹೀಗಿವೆ:
ದಿನಾಂಕ : 15 ಮೇ 2010 ಶನಿವಾರ
ಸ್ಥಳ : ಕ್ಯಾನನ್ಸ್ ಪ್ರೌಢಶಾಲೆ, ಶಾಲ್ಡನ್ ರಸ್ತೆ, ಹ್ಯಾರೊ, ಮಿಡ್ಲ್ ಸೆಕ್ಸ್, HA8 6AN
ಸಮಯ : ಮಧ್ಯಾಹ್ನ 12ರಿಂದ ಸಂಜೆ 7ರವರೆಗೆ
ದಿನದ ಪ್ರಮುಖ ಆಕರ್ಷಣೆ:
* ಕನ್ನಡದ ಹೆಸರಾಂತ ರಾಕ್ ಸಂಗೀತ ಕಲಾವಿದ ರಘು ದೀಕ್ಷಿತ್ ತಮ್ಮ ರಾಕ್ ಬ್ಯಾಂಡಿನೊಂದಿಗೆ
* ಕನ್ನಡ ಚಲನಚಿತ್ರದ ಹಾಸ್ಯಕಲಾವಿದ ಕಾಮಿಡಿ ಕಿಂಗ್ ಕೋಮಲ್
* ಅಶ್ವಿನಿ ಪ್ರಭಾಕರ್ ಅವರ ಸುಮಧುರ ಗಾನಸುಧೆ
* ಸಿಲ್ಲಿ ಲಲ್ಲಿ ಖ್ಯಾತಿಯ ರೂಪಾ ಪ್ರಶಾಂತ್ ಅವರಿಂದ ಕಾರ್ಯಕ್ರಮ ನಿರೂಪಣೆ, ವಿನೋದಾವಳಿ
* ನಮ್ಮ ಸ್ಥಳೀಯ ಪ್ರತಿಭೆಗಳಿಂದ ನೃತ್ಯ, ಸಂಗೀತ ಹಾಗೂ ಲಘು ಪ್ರಹಸನ
ಕಾರ್ಯಕ್ರಮ, ನೋಂದಣಿ ಮತ್ತು ರುಚಿಕರ ಭೋಜನದೊಂದಿಗೆ ಕಾರ್ಯಕ್ರಮಗಳು 12 ಘಂಟೆ ಪ್ರಾರಂಭವಾಗಿ ಸಂಜೆ 7ಕ್ಕೆ ಮುಕ್ತಾಯಗೊಳ್ಳಲಿದೆ.
ನೋಂದಣಿ ಮತ್ತು ಪ್ರವೇಶ ದರ : ನಮ್ಮ ಅಂತರ್ಜಾಲ ನೋಂದಣಿ ಈಗ ತೆರೆದಿದೆ. ಈ ಉಲ್ಲೇಖ ಕ್ಲಿಕ್ಕಿಸಿ ವಿಳಂಬಿಸದೆ ತಮ್ಮ ಹಾಜರಾತಿಯನ್ನು ಧೃಢಪಡಿಸಿಕೊಳ್ಳಿ. ಪ್ರವೇಶದರ : ವಯಸ್ಕರಿಗೆ £15. 5ರಿಂದ 12 ವಯಸ್ಸಿನ ಮಕ್ಕಳಿಗೆ £8. 5 ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶ ಉಚಿತ. (ಈ ಪ್ರವೇಶ ಶುಲ್ಕ ಮೇ 5ರೊಳಗೆ ನೋಂದಾಯಿಸಿ, ಹಣಪಾವತಿ ಮಾಡಿದರೆ ಮಾತ್ರ ಅನ್ವಯಿಸುತ್ತದೆ.)
ವಾಹನ ನಿಲುಗಡೆಗೆ ವ್ಯವಸ್ಥೆ ಶಾಲಾ ಆವರಣದಲ್ಲಿ ಸಾಕಷ್ಟಿದೆ. ಇದು ಭರ್ತಿಯಾದಲ್ಲಿ ಹೊರಗಿನ ರಸ್ತೆಬದಿಯ ನಿಲುಗಡೆಗಳನ್ನು ಉಪಯೋಗಿಸಬಹುದು. ಸಾರ್ವಜನಿಕ ವಾಹನ ಸಂಚಾರಕ್ಕೆ ಅಡಚಣೆಯುಂಟಾಗದಂತೆ ದಯವಿಟ್ಟು ಕಾಳಜಿವಹಿಸಿ.
ಸಂಪರ್ಕ ಮಾಹಿತಿ : ಯಾವುದಕ್ಕೂ ಕನ್ನಡಿಗರುಯುಕೆ ಅಂತರ್ಜಾಲ ಪುಟವನ್ನು ಕಾರ್ಯಕ್ರಮದ ಮಾಹಿತಿ ಬಗ್ಗೆ ಅಗಾಗ್ಗೆ ಭೇಟಿಮಾಡುತ್ತಿರಿ ಅಥವಾ ಅಡ್ಮಿನ್@ಕನ್ನಡಿಗರುಯುಕೆ.ಕಾಂಗೆ ಈಮೈಲ್ ಕಳಿಸಿ. ಅದಲ್ಲದೆ ನಮ್ಮ ನೋಂದಣಿ ಸಮಿತಿಯ ಈ ಕೆಳಗಿನ ಸದಸ್ಯರಲ್ಲೊಬ್ಬರನ್ನು ಸಂಪರ್ಕಿಸಬಹುದು.
ವಿರೂಪಾಕ್ಷ ಪ್ರಸಾದ್ (07860 369 706), ದಿಲೀಪ್ (07919 916 338), ವಿನಯ್ ರಾವ್ (07785 111 622). ಈ ಬರಹ/ಮಿಂಚೆ(ಮೈಲ್)ಯನ್ನು ನಿಮ್ಮ ಬಂಧುಬಳಗದವರಿಗೆ, ಮಿತ್ರರಿಗೆ ಅಥವ ನಿಮ್ಮ ಕನ್ನಡ ಸಹೋದ್ಯೋಗಿಗಳಿಗೆ/ಕಚೇರಿಯಲ್ಲಿ ಪ್ರಕಟಿಸಿ, ಆಂಗ್ಲನಾಡಿನ ಕನ್ನಡಿಗರೆಲ್ಲ ಈ ಸಮಾರಂಭಕ್ಕೆ ಕಲೆಯುವಂತೆ ನೆರವಾಗಬೇಕೆಂದು ವಿನಮ್ರ ವಿನಂತಿ.
ಕನ್ನಡಿಗರುಯುಕೆ ತಂಡ
ಆಂಗ್ಲ ನಾಡಿನಲ್ಲಿ ಸಶಕ್ತ ಕನ್ನಡ ಸಮುದಾಯದ ನಿರ್ಮಾಣಕ್ಕಾಗಿ
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications