ಬ್ರಿಟನ್ ಕನ್ನಡಿಗರ ವಸಂತೋತ್ಸವ

ಆಂಗ್ಲರ ನೆಲದಲ್ಲಿ ನೆಲೆಸಿರುವ ಕನ್ನಡಿಗರು ಆಯೋಜಿಸಿರುವ 2010ನೇ ಸಾಲಿನ ವಸಂತೋತ್ಸವಕ್ಕೆ ಆಂಗ್ಲನಾಡಿನ ಸಮಸ್ತ ಕನ್ನಡಿಗರಿಗೆ ನಮಸ್ಕಾರಗಳು. ವಸಂತ ಋತುವಿನ ನವೋಲ್ಲಾಸ, ಹೊಸತನ ಎಲ್ಲರಿಗೂ ಹರುಷ ತರಲೆಂದು ಕನ್ನಡಿಗರುಯುಕೆ ಹಾರೈಸುತ್ತದೆ. ಕಾರ್ಯಕ್ರಮದ ವಿವರಗಳು ಹೀಗಿವೆ:
ದಿನಾಂಕ : 15 ಮೇ 2010 ಶನಿವಾರ
ಸ್ಥಳ : ಕ್ಯಾನನ್ಸ್ ಪ್ರೌಢಶಾಲೆ, ಶಾಲ್ಡನ್ ರಸ್ತೆ, ಹ್ಯಾರೊ, ಮಿಡ್ಲ್ ಸೆಕ್ಸ್, HA8 6AN
ಸಮಯ : ಮಧ್ಯಾಹ್ನ 12ರಿಂದ ಸಂಜೆ 7ರವರೆಗೆ
ದಿನದ ಪ್ರಮುಖ ಆಕರ್ಷಣೆ:
* ಕನ್ನಡದ ಹೆಸರಾಂತ ರಾಕ್ ಸಂಗೀತ ಕಲಾವಿದ ರಘು ದೀಕ್ಷಿತ್ ತಮ್ಮ ರಾಕ್ ಬ್ಯಾಂಡಿನೊಂದಿಗೆ
* ಕನ್ನಡ ಚಲನಚಿತ್ರದ ಹಾಸ್ಯಕಲಾವಿದ ಕಾಮಿಡಿ ಕಿಂಗ್ ಕೋಮಲ್
* ಅಶ್ವಿನಿ ಪ್ರಭಾಕರ್ ಅವರ ಸುಮಧುರ ಗಾನಸುಧೆ
* ಸಿಲ್ಲಿ ಲಲ್ಲಿ ಖ್ಯಾತಿಯ ರೂಪಾ ಪ್ರಶಾಂತ್ ಅವರಿಂದ ಕಾರ್ಯಕ್ರಮ ನಿರೂಪಣೆ, ವಿನೋದಾವಳಿ
* ನಮ್ಮ ಸ್ಥಳೀಯ ಪ್ರತಿಭೆಗಳಿಂದ ನೃತ್ಯ, ಸಂಗೀತ ಹಾಗೂ ಲಘು ಪ್ರಹಸನ
ಕಾರ್ಯಕ್ರಮ, ನೋಂದಣಿ ಮತ್ತು ರುಚಿಕರ ಭೋಜನದೊಂದಿಗೆ ಕಾರ್ಯಕ್ರಮಗಳು 12 ಘಂಟೆ ಪ್ರಾರಂಭವಾಗಿ ಸಂಜೆ 7ಕ್ಕೆ ಮುಕ್ತಾಯಗೊಳ್ಳಲಿದೆ.
ನೋಂದಣಿ ಮತ್ತು ಪ್ರವೇಶ ದರ : ನಮ್ಮ ಅಂತರ್ಜಾಲ ನೋಂದಣಿ ಈಗ ತೆರೆದಿದೆ. ಈ ಉಲ್ಲೇಖ ಕ್ಲಿಕ್ಕಿಸಿ ವಿಳಂಬಿಸದೆ ತಮ್ಮ ಹಾಜರಾತಿಯನ್ನು ಧೃಢಪಡಿಸಿಕೊಳ್ಳಿ. ಪ್ರವೇಶದರ : ವಯಸ್ಕರಿಗೆ £15. 5ರಿಂದ 12 ವಯಸ್ಸಿನ ಮಕ್ಕಳಿಗೆ £8. 5 ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶ ಉಚಿತ. (ಈ ಪ್ರವೇಶ ಶುಲ್ಕ ಮೇ 5ರೊಳಗೆ ನೋಂದಾಯಿಸಿ, ಹಣಪಾವತಿ ಮಾಡಿದರೆ ಮಾತ್ರ ಅನ್ವಯಿಸುತ್ತದೆ.)
ವಾಹನ ನಿಲುಗಡೆಗೆ ವ್ಯವಸ್ಥೆ ಶಾಲಾ ಆವರಣದಲ್ಲಿ ಸಾಕಷ್ಟಿದೆ. ಇದು ಭರ್ತಿಯಾದಲ್ಲಿ ಹೊರಗಿನ ರಸ್ತೆಬದಿಯ ನಿಲುಗಡೆಗಳನ್ನು ಉಪಯೋಗಿಸಬಹುದು. ಸಾರ್ವಜನಿಕ ವಾಹನ ಸಂಚಾರಕ್ಕೆ ಅಡಚಣೆಯುಂಟಾಗದಂತೆ ದಯವಿಟ್ಟು ಕಾಳಜಿವಹಿಸಿ.
ಸಂಪರ್ಕ ಮಾಹಿತಿ : ಯಾವುದಕ್ಕೂ ಕನ್ನಡಿಗರುಯುಕೆ ಅಂತರ್ಜಾಲ ಪುಟವನ್ನು ಕಾರ್ಯಕ್ರಮದ ಮಾಹಿತಿ ಬಗ್ಗೆ ಅಗಾಗ್ಗೆ ಭೇಟಿಮಾಡುತ್ತಿರಿ ಅಥವಾ ಅಡ್ಮಿನ್@ಕನ್ನಡಿಗರುಯುಕೆ.ಕಾಂಗೆ ಈಮೈಲ್ ಕಳಿಸಿ. ಅದಲ್ಲದೆ ನಮ್ಮ ನೋಂದಣಿ ಸಮಿತಿಯ ಈ ಕೆಳಗಿನ ಸದಸ್ಯರಲ್ಲೊಬ್ಬರನ್ನು ಸಂಪರ್ಕಿಸಬಹುದು.
ವಿರೂಪಾಕ್ಷ ಪ್ರಸಾದ್ (07860 369 706), ದಿಲೀಪ್ (07919 916 338), ವಿನಯ್ ರಾವ್ (07785 111 622). ಈ ಬರಹ/ಮಿಂಚೆ(ಮೈಲ್)ಯನ್ನು ನಿಮ್ಮ ಬಂಧುಬಳಗದವರಿಗೆ, ಮಿತ್ರರಿಗೆ ಅಥವ ನಿಮ್ಮ ಕನ್ನಡ ಸಹೋದ್ಯೋಗಿಗಳಿಗೆ/ಕಚೇರಿಯಲ್ಲಿ ಪ್ರಕಟಿಸಿ, ಆಂಗ್ಲನಾಡಿನ ಕನ್ನಡಿಗರೆಲ್ಲ ಈ ಸಮಾರಂಭಕ್ಕೆ ಕಲೆಯುವಂತೆ ನೆರವಾಗಬೇಕೆಂದು ವಿನಮ್ರ ವಿನಂತಿ.
ಕನ್ನಡಿಗರುಯುಕೆ ತಂಡ
ಆಂಗ್ಲ ನಾಡಿನಲ್ಲಿ ಸಶಕ್ತ ಕನ್ನಡ ಸಮುದಾಯದ ನಿರ್ಮಾಣಕ್ಕಾಗಿ
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications