ಚೀನಿಯರ ನಾಡಿನಲ್ಲಿ ಚಿನ್ನದಂಥ ಕನ್ನಡ

ಸಂಘದ ಅಧ್ಯಕ್ಷರಾದ ಸದಾಶಿವ ಹೆಗಡೆಯವರ ಸ್ವಾಗತ ಭಾಷಣದಿಂದ ಹಿಡಿದು ರಾಷ್ಟ್ರಗೀತೆಯವರೆಗೆ ಎಲ್ಲವೂ ಅಚ್ಚು ಕಟ್ಟಾಗಿತ್ತು. ಏನಿತ್ತು, ಎನಿಲ್ಲ?ಅನ್ನುವುದೇ ತಿಳಿಯಲಾರದಷ್ಟು ಮಟ್ಟಿಗೆ ಅಲ್ಲಿ ವೈವಿದ್ಯತೆ ಮೈದಾಳಿತ್ತು.ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಭಾರತೀಯ ರಾಯಭಾರಿ ರಾಲ್ಟೆ ಮತ್ತು ಅವರ ಪತ್ನಿ, ಹಾಗೂ ಇನ್ನೋರ್ವ ಮುಖ್ಯ ಅಥಿತಿಗಳಾಗಿ ದೂರದ ಉತ್ತರ ಪ್ರದೇಶದ ವಾರಣಾಸಿಯ ಜಂಗಮವಾಡಿ ಮಠದ ಶಿವಾಚಾರ್ಯರಾದ ಶ್ರೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಅಷ್ಟೇ ಅಲ್ಲ, ವಿದೇಶಗಳಲ್ಲಿ ಕನ್ನಡ ಪ್ರೇಮ ಕಂಡು ಮೂಕ ವಿಸ್ಮಿತರಾದರು.
ಇದೇ ಸಂಧರ್ಭದಲ್ಲಿ ತಾಯ್ನಾಡಿನ ಅನಾಥ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ಆರಂಭಿಸಲಾದ "ಸಮುದಾಯ ಸಹಾಯ ಯೋಜನೆ" ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳು ಉದ್ಘಾಟಿಸಿದರು. ಕೆ.ಎಸ್.ಎಚ್.ಕೆ ಕೇವಲ ಹೆಸರಿಗೆ ಸಂಘವಾಗದೆ ಅನಾಥರ, ಬಡವರಿಗೆ ಸಹಾಯ ನೀಡಲು ಸದಾ ಮಂಚೂಣಿಯಲ್ಲಿದ್ದು ಅನೇಕ ಕನ್ನಡ ಸಂಘಗಳಿಗೆ ಮಾದರಿಯಾಗಿದೆ.
ನಂತರ ಆರಂಭವಾಗಿದ್ದೇ ಸಾಂಸ್ಕ್ರತಿಕ ಕಾರ್ಯಕ್ರಮ. ಚಿಕ್ಕ ಮಕ್ಕಳು, ಮಕ್ಕಳ ತಾಯಂದಿರು, ಹುಡುಗರು, ಹಿರಿಯರು ಹೀಗೆ ಪ್ರತಿಯೊಬ್ಬರು ವೇದಿಕೆಯ ಮೇಲೆ ತಮ್ಮ ಪ್ರತಿಭಾ ಪ್ರದರ್ಶನ ನೀಡಿದರು. ಅದರಲ್ಲೂ ಮಕ್ಕಳ "ಧರಣಿ ಮಂಡಲ ಮಧ್ಯದೊಳಗೆ" ಸುಶ್ಮಾ ರವರ ನ್ರತ್ಯ, ಮಕ್ಕಳ ತಾಯಂದಿರ ನ್ರತ್ಯ, ಗಂಡಸರ ಜಾನಪದ ನ್ರತ್ಯ, ಭಾವಗೀತೆ ಹೀಗೆ ವೈವಿದ್ಯತೆಗಳ ಕಾರ್ಯಕ್ರಮ ಜನಮನ ಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಕವಿ ಕೆ ಎಸ್ ನರಸಿಂಹ ಸ್ವಾಮಿಯವರ ಬಗ್ಗೆ "ಕವಿ ಪರಿಚಯದಲ್ಲಿ" ತಿಳಿಸಲಾಯಿತು. ಇದೊಂದು ನೂತನ ಕಾರ್ಯಕ್ರಮವಾಗಿದ್ದು ಯುವ ಜನತೆಗೆ ಕನ್ನಡ ಕವಿಗಳ ಬಗೆಗೆ ಆಸಕ್ತಿ ಮೂಡಿಸುವ ಪ್ರಯತ್ನವೂ ಹೌದು. ಕೊನೆಯದಾಗಿ ಸಂಘದ ಕಾರ್ಯದರ್ಶಿಗಳಾದ ರೂಪಾ ಕಿರಣ ಅವರು ನೆರೆದ ನೂರಾರು ಕನ್ನಡಿಗರಿಗೆ ಧನ್ಯವಾದ ಸಮರ್ಪಿಸಿದರು. ಸುಮಾರು 4 ಘಂಟೆಗಳ ಕಾಲ ನಡೆದ ಕಾರ್ಯಕ್ರಮ ತಾವೆಲ್ಲರೂ ಕನ್ನಡ ನಾಡಿನಲ್ಲಿ ಇದ್ದೇವೆ ಎಂಬ ಭಾವನೆ ಮೂಡಿಸಿತು. ಕೆ ಎಸ್ ಎಚ್ ಕೆ ಕನ್ನಡ ದ ಬಗೆಗಿನ ಪ್ರೇಮ ನಿಜಕ್ಕೂ ಅಭಿನಂದನಾರ್ಹ. ವಿದೇಶದಲ್ಲಿದ್ದುಕೊಂಡು ದೇಶದ ಭಾಷೆಯನ್ನೇ ಮರೆಯುವ ಇಂದಿನ ಸಂದರ್ಭದಲ್ಲಿ ತಾಯ್ನಾಡಿನ ಭಾಷೆಯನ್ನು ಜೀವಂತವಾಗಿಡುವ ಇಂಥಹ ಕಾರ್ಯಕ್ರಮಗಳು ಅನಿವಾಸಿ ಕನವ್ನಡ ಸಮುದಾಯಕ್ಕೆ ಅನುಕರಣೀಯ.ಜೈ ಕನ್ನಡಾಂಬೆ, ಜೈ ಕರ್ನಾಟಕ ಮಾತೆ.
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ -
ಬೆಂಗಳೂರು ಏರ್ಪೋರ್ಟ್ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್ಪೋರ್ಟ್'ಪ್ರಶಸ್ತಿ -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ












Click it and Unblock the Notifications