'ಅಕ್ಕ' ಬ್ರಾಂಡ್ ಅಂಬಾಸಡರ್ ಆಗಿ ಪುನೀತ್
ಅಕ್ಕ ವಿಶ್ವ ಕನ್ನಡ ಸಮ್ಮೇಳನ 2010ರ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕಾದ ನ್ಯೂ ಜರ್ಸಿ ಪ್ರಾಂತ್ಯದಲ್ಲಿ ಜರುಗಲಿದೆ. ಸಮ್ಮೇಳನದ ಯೋಜನೆ ಮತ್ತು ವ್ಯವಸ್ಥೆಯನ್ನು ಸ್ಥಳೀಯ ಬೃಂದಾವನ ಕನ್ನಡ ಸಂಘ ವಹಿಸಿಕೊಂಡಿದೆ. ಅಮೆರಿಕಾದ ಪೂರ್ವ ಕರಾವಳಿಯಲ್ಲಿರುವ ಇತರ ಕನ್ನಡ ಸಂಘಗಳೂ ಈ ಮಹೋತ್ಸವವನ್ನು ಯಶಸ್ವಿಗೊಳಿಸಲು ಬೃಂದಾವನದ ಜತೆ ಕೈಜೋಡಿಸಿವೆ.
ಸಮ್ಮೇಳನಕ್ಕೆ ಹಲವಾರು ಗಣ್ಯರು ಈಗಾಗಲೇ ಶುಭ ಹಾರೈಸಿದ್ದಾರೆ. ಈ ಕೆಳಗಿನ ಲಿಂಕ್ಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಮಂತ್ರಿಗಳಾದ ಅರವಿಂದ ಲಿಂಬಾವಳಿ, ಆರ್. ಅಶೋಕ್, ಎಸ್. ಎಮ್. ಕೃಷ್ಣ, ಚಿತ್ರನಟ ಗಣೇಶ್ ಹಾಗೂ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಯವರ ಸಂದೇಶಗಳನ್ನು ನೋಡಬಹುದು:
ಗಣ್ಯ ಶುಭಹಾರೈಕೆಗಳು
*
ಮುಖ್ಯಮಂತ್ರಿ
ಬಿಎಸ್
ಯಡಿಯೂರಪ್ಪ
*
ಶಾಸಕ
ಅರವಿಂದ
ಲಿಂಬಾವಳಿ
*
ಶಾಸಕ
ಆರ್
ಅಶೋಕ್
*
ಸಂಸದ,
ವಿದೇಶಾಂಗ
ಸಚಿವ
ಎಸ್ಎಮ್
ಕೃಷ್ಣ
*
ನಟ
ಗೋಲ್ಡನ್
ಸ್ಟಾರ್
ಗಣೇಶ್
*
ಪುತ್ತಿಗೆ
ಶ್ರೀಗಳಾದ
ಸುಗುಣೇಂದ್ರ
ತೀರ್ಥ
ಸ್ವಾಮೀಜಿ
"ಅಕ್ಕ"ದ ಪದಾಧಿಕಾರಿಗಳು ಹಾಗೂ "ಬೃಂದಾವನ"ದ ಸಂಚಾಲಕರು ಆಗಸ್ಟ್ 24ರಂದು ಕರ್ನಾಟಕದಲ್ಲಿ ಸುಪ್ರಸಿದ್ಧರನ್ನು ಭೇಟಿ ಮಾಡಿ ಗಣ್ಯರನ್ನು ಸಮ್ಮೇಳನಕ್ಕೆ ಆಮಂತ್ರಿಸಿದ್ದರು. ಈ ಹಿನ್ನೆಲೆಯಲ್ಲಿ ಪುನೀತ್ರವರ ರಾಯಭಾರಿತ್ವ ಹಾಗೂ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅನೇಕರು ಈಗಾಗಲೇ ತಮ್ಮ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಸಮ್ಮೇಳನಕ್ಕೆ ಸುಮಾರು ಒಂದು ವರ್ಷ ಇರುವಾಗಲೇ ಸಾಕಷ್ಟು ಜನಕುತೂಹಲ ಗಳಿಸಿರುವ ಮುಂಬರುವ ಸಮ್ಮೇಳನ ಅಮೆರಿಕನ್ನಡಿಗರ ಉತ್ಸಾಹಕ್ಕೆ ಬೆಂಬಲವಾಗಿದೆ. "ಬೃಂದಾವನ" ಅಧ್ಯಕ್ಷರ ಸಂದೇಶ, ಅಕ್ಕ-2010 ಪದಾಧಿಕಾರಿಗಳು ಹಾಗೂ ಸಂಚಾಲಕರ ಸಂದೇಶ ಮತ್ತು ಇನ್ನೂ ಹೆಚ್ಚಿನ ಸುದ್ದಿಗಳಿಗಾಗಿ "ಅಕ್ಕ" ವೆಬ್ ಸೈಟ್ ವೀಕ್ಷಿಸಿ: http://www.akkaonline.com/