ನಾಗಾಭರಣಗೆ ಶ್ರೀರಂಗ, ಸೋಮಶೇಖರಗೆ ಧ್ವನಿ ಪುರಸ್ಕಾರ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಟಕ ಅಕಾಡೆಮೆಯ ಅಧ್ಯಕ್ಷ ಡಾ. ರಾಜಾರಾಮ್ ಅವರು ವಹಿಸಿದ್ದರು. ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು "ಧ್ವನಿ" 24 ವರ್ಷಗಳಿಂದ ನಡೆದು ಬಂದ ದಾರಿಯನ್ನು ಸ್ಮರಿಸಿಕೊಂಡು ಅತಿಥಿಗಳನ್ನು ಸ್ವಾಗತಿಸಿದರು. ಪ್ರಶಸ್ತಿ ಸ್ವೀಕರಿಸಿದ ನಾಗಾಭರಣ ಅವರು ಧ್ವನಿ ವಿದೇಶಿ ಮಣ್ಣಿನಲ್ಲಿ ಅಪ್ರತಿಮ ಕಾರ್ಯಕಲಾಪಗಳನ್ನು ಹಮ್ಮಿಕೊಂಡು ಕಾರ್ಯಪ್ರವೃತ್ತವಾಗಿದೆ. ಇಪ್ಪತ್ತನಾಲ್ಕು ವರ್ಷಗಳೆಂದರೆ ಒಬ್ಬ ವ್ಯಕ್ತಿ ತನ್ನ ಯೌವನಾವಸ್ಥೆಗೆ ಬಂದು ಗೃಹಸ್ಥಾಶ್ರಮಕ್ಕೆ ಕಾಲಿಡುವ ಸಂಧಿಕಾಲವೆಂದು ಬಣ್ಣಿಸಿ ಮುಂದಿನ ರಜತ ವರ್ಷಕ್ಕೆ ಶುಭಕೋರಿದರು. ಡಾ. ಸೋಮಶೇಖರ ಅವರು ತಮಗೆ ನೀಡಿದ ಪುರಸ್ಕರಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ನಾಗಿಣಿ ನಾಗಾಭರಣ ಅವರ ಕೂಚುಪುಡಿ ನೃತ್ಯ, ರಾಜಾರಾಂ ಅವರ ಅಣುಕು ಪ್ರದರ್ಶನ, ನಾಗಾಭರಣ ಅವರಿಂದ ರಂಗಗೀತೆಗಳು ಸಮಾರಂಭದ ವಿಶೇಷತೆಗಳಾಗಿದ್ದವು.
ಕಾರ್ಯಕ್ರಮದ ಪ್ರಮುಖ ಪ್ರಾಯೋಜಕರಾದ ಉದ್ಯಮಿ ಜಪ್ರುಲ್ಲಾ ಖಾನ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಶಾರ್ಜಾ ಕರ್ನಾಟಕ ಸಂಘದ ಮಾರ್ಕ್ ಡೆನ್ನಿಸ್, ದುಬೈ ಕನ್ನಡ ಕೂಟದ ಅಧ್ಯಕ್ಷ ಅರಣ್ ಉದ್ಯಮಿಗಳಾದ ಜೇಮ್ಸ್ ಮೆಂಡೊನ್ಸಾ, ಉದಯ ಕುಮಾರ್, ರವೀಶ್ ಗೌಡ, ಆಶೋಕ್ ಶೆಟ್ಟಿ ಮುಂತಾದ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ನಿವೇದಿತ ಅರವಿಂದ ಅವರ ಪ್ರಾರ್ಥನೆಯೊಂದಿಗೆ ಅತಿಥಿಗಳು ದೀಪ ಬೆಳಗುವುದರೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದ ನಿರ್ವಹಣೆಯ ಹೊಣೆ ಗಣೇಶ್ ರೈ ಹಾಗು ಶೋಧನ್ ಪ್ರಸಾದ್ ಅವರದಾಗಿತ್ತು, ಸಂಪತ್ ಶೆಟ್ಟಿ ವಂದಿಸಿದರು.












Click it and Unblock the Notifications