ಮರೆಯಲಾಗದ ಅವಿಸ್ಮರಣೀಯ ಅನುಭವ

ಇವೆಲ್ಲಾ ಪ್ರದರ್ಶನಗಳಾದವು, ಎಲ್ಲ ಕಡೆ ಮರೆಯಲಾಗದಂತ, ಋಣ ತೀರಿಸಲಾಗದಂತ ಆತಿಥ್ಯವನ್ನೂ ಸ್ವೀಕರಿಸಿ ಮರಳಿ ನಾಡಿಗೆ ಹೊರಟ ಈ ಕಲಾವಿದರ ಅನಿಸಿಕೆಗಳು ಅಪಾರ. ಹಣವನ್ನು ಸಂಪಾದಿಸಲಿಕ್ಕಾಗದಿದ್ದರೂ. ಅಪಾರ ಸ್ನೇಹಿತರುಗಳನ್ನು ಸಂಪಾದಿಸಿಕೊಂಡು ಹೋದರು. ಅದೇ ಸಂತೋಷ. ಬಹಳ ಮರೆಯಲಾಗದ ಹರ್ಷ ಘಟನೆಗಳನ್ನು ಅನುಭವಿಸಿ ಹೋದರು. ಕನಸಿನ ಲೋಕದ ಡಿಸ್ನಿಲ್ಯಾಂಡ್, ಚಿತ್ರರಂಗದ ವಿಸ್ಮಯ ಯೂನಿವರ್ಸಲ್ ಸ್ಟುಡಿಯೊ, ಜಲಮೃಗಗಳ ಸೀ ವರ್ಲ್ಡ್, ಸಣ್ಣ ಪುಟ್ಟ ವಾಹನ ಅಪಘಾತದ ಅನುಭವ, ದೊಡ್ದ ದುರಂತದಿಂದ ಪಾರಾದ ಅನುಭವ, 911 ಅನುಭವವೂ ಆಗಿಹೋಯಿತು.
ನ್ಯೂಯಾರ್ಕ್ನಿಂದ ನಯಾಗಾರ ಫಾಲ್ಸ್ ನೋಡಲು ವ್ಯಾನ್ ಮಾಡಿಕೊಂಡು ಹೋಗಿದ್ದೆವು. ಬರುವಾಗ ರಾತ್ರಿ 12 ಗಂಟೆ ಸಮಯ. ನ್ಯೂಜೆರ್ಸಿ ತಲುಪಲು ಇನ್ನೇನು ಒಂದು ಘಂಟೆಯ ಡ್ರೈವಿಂಗ್ ಇರಬಹುದು. ಗುಡ್ಡಗಾಡು ಪ್ರದೇಶ. ವ್ಯಾನಿನಲ್ಲಿ ಕೆಲವರು ಮಲಗಿದ್ದಾರೆ. ಸಿಹಿಕಹಿ ಚಂದ್ರು, ಶ್ರೀನಾಥ್ ವಸಿಷ್ಟ ಹಾಗೂ ಡ್ರೈವ್ ಮಾಡುತ್ತಿದ್ದ ನಾನು ಕೆಲವು ಜೋಕುಗಳನ್ನು ಹೇಳಿಕೊಂಡು ಬರುತ್ತಿದ್ದೇವೆ. 70ಕ್ಕೂ ಹೆಚ್ಚು ಮೈಲಿ ವೇಗದಲ್ಲಿ ಚಲಿಸುತ್ತಿದ್ದ ವ್ಯಾನಿಗೆ ಚಂಗ್ ಅಂತ ಒಂದು ಕಾಡು ಜಿಂಕೆ ಬಂದು ಹೊಡೆಯಬೇಕೆ. ಸಾಮಾನ್ಯವಾಗಿ ಆ ಹೊಡತಕ್ಕೆ ಕಾರುಗಳು ಜಜ್ಜಿ ಹೋಗುತ್ತವೆ ಹಾಗೂ ದೊಡ್ಡ ಅಪಘಾತವಾಗುತ್ತದೆ. ನಮ್ಮ ಅದೃಷ್ಟ ಚೆನ್ನಾಗಿತ್ತು. ವ್ಯಾನ್ ಮುಂದೆ ಹೋಗುತ್ತಿತ್ತು. ಅಬ್ಭಾ ಏನು ಆಗಲಿಲ್ಲವಲ್ಲ ಎಂದು ಮುಂದಕ್ಕೆ ವ್ಯಾನ್ ಡ್ರೈವ್ ಮಾಡಿಕೊಂದು ಹೋಗುತ್ತಿದ್ದನ್ನು ನೋಡಿ, ಗಾಡಿಗೆ ಏನೂ ಆಗಿಲ್ಲವೇನೋ ಅಂದುಕೊಂಡೆವು. ಆದರೆ ಸ್ವಲ್ಪ ದೂರಕ್ಕೆ ವ್ಯಾನ್ ನಿಂತು ಹೋಯಿತು. ವ್ಯಾನ್ನಿಂದ ಹೊರಕ್ಕೆ ಬಂದು ನೋಡಿದರೆ, ವ್ಯಾನ್ ಮುಂಬಾಗದಲ್ಲಿ ಜಜ್ಜಿ ಹೋಗಿತ್ತು. 911ಗೆ ಕಾಲ್ ಮಾಡಿ, ಪೋಲೀಸ್ಗೆ ತಿಳಿಸಿದ್ದಾಯಿತು. ಸೆಲ್ ಫೋನ್ಗೆ ಅಡ್ದಬಿದ್ದೆ. ಎಂತಹ ಆಪದ್ಭಾಂದವ ಎನಿಸಿತು. ಎಲ್ಲೋ ಕಾಡಿನ ಮಧ್ಯದಲ್ಲಿ ಸಹಾಯಕ್ಕಾಗಿ ಕರೆಯಲು ಎಲ್ಲಿಂದ ಸಾಧ್ಯವಿತ್ತು. ನಡು ರಾತ್ರಿ ಸಮಯ. ರಸ್ತೆಯ ಬದಿಯಲ್ಲಿ ಎಲ್ಲಾ ನಿಂತಿದ್ದೇವೆ. ತಂಡದವರಿಗೆ ಒಂದೇ ಹೆದರಿಕೆ. ಪೋಲಿಸ್ನವರು ಬರುತ್ತಾರೆ. ಏನೇನು ಕೇಳುತ್ತಾರೆ. ಎಲ್ಲರ ಮುಖದಲ್ಲೂ ಗಾಢವಾದ ಮೌನ ಆವರಿಸಿತ್ತು. ಬಣ್ಣ ಬಣ್ಣದ ಲೈಟ್ಗಳನ್ನು ಹಾಕಿಕೊಂಡು ಸೈರನ್ ಊದುತ್ತಾ ಪೋಲಿಸ್ ಗಾಡಿ ಬಂತು.
ಪೋಲಿಸ್ ಬಂದಿಳಿದಾಗ ಅವರು ಕೇಳಿದ ಮೊದಲ ಪ್ರಶ್ನೆ ನಿಮ್ಮಲ್ಲಿ ಯಾರಿಗಾದರೂ ಗಾಯವಾಗಿದೆಯೇ? ಕಾರ್ ರೆಂಟಲ್ ಕಂಪನಿಗೆ ಫೋನ್ ಮಾಡಿ ಮಾರನೆದಿವಸ ಬೆಳಿಗ್ಗೆ ಇನ್ನೊಂದು ವ್ಯಾನ್ ತೆಗೆದುಕೊಳ್ಳುವ ವ್ಯವಸ್ಥೆಯಾಯಿತು. ಅಲ್ಲಿಯವರೆವಿಗೆ ಎಲ್ಲಿ ಇರುವುದು. ತಕ್ಷಣ ಪೋಲಿಸ್ನವರು ಹತ್ತಿರ ಸ್ಕ್ಯಾಂಟನ್ ಪಟ್ಟಣದ ಹೊಟೆಲ್ಗಳಿಗೆ ಫೋನ್ ಮಾಡಿ ನಮ್ಮ ಬಜೆಟ್ಗೆ ಅನುಕೂಲಕ್ಕೆ ನಮಗೆ ರೂಮುಗಳನ್ನು ಕಾದಿರಿಸಿದರು. ಅದೂ ಅಲ್ಲದೆ ನಮಗೆ ಡಿಸ್ಕೌಂಟ್ ಕೊಡಲು ಹೊಟೆಲ್ರವರೊಡನೆ ವ್ಯವಸ್ಥೆಯನ್ನೂ ಮಾಡಿದರು. ಅಲ್ಲಿಗೆ ಹೋಗುವ ಬಗೆ ಹೇಗೆ? ನಮ್ಮ ವ್ಯಾನ್ ಡ್ರೈವ್ ಮಾಡುವ ಸ್ಥಿತಿಯಲ್ಲಿರಲಿಲ್ಲ. ನಾವಿರುವುದು 6 ಜನ. ಒಂದು ಪೋಲಿಸ್ ವ್ಯಾನ್ನಲ್ಲಿ ಹೋಗಲು ಸಾಧ್ಯವಿರಲಿಲ್ಲ. ತಕ್ಷಣ ಪೋಲಿಸ್ನವರೇ ಫೋನ್ ಮಾಡಿ ಇನ್ನೂ ಎರಡು ಪೋಲಿಸ್ ಕಾರುಗಳನ್ನು ತರಿಸಿ ನಮ್ಮನ್ನೆಲ್ಲಾ ಹೊಟೆಲ್ ಬಳಿ ಬಿಟ್ಟು ಹೋಗುವಾಗ ನಮ್ಮ ತಂಡದವರಿಗೆ ನಂಬಲೇ ಆಗಲಿಲ್ಲ. ಇವರೆಲ್ಲಾ ಪೋಲಿಸ್ನವರಾ? ಅಂತ. ನಮ್ಮ ದೇಶದಲ್ಲಿ ಈ ರೀತಿ ಆಗಿದ್ದರೆ ಏನು ಆಗುತ್ತಿತ್ತು ಅಂತ ನೆನೆಸಿಕೊಂಡು ಶ್ರಿನಾಥ್ ಹೇಳಿದ್ದು ಹೀಗೆ ಸಾರ್ ನಮ್ಮೂರಲ್ಲಿ ಏನಾದರೂ ಈ ರೀತಿ ಆಗಿದ್ದರೆ ನಮ್ಮ ಪೋಲಿಸ್ನೋರಿಗೆ ಹಬ್ಬ. ಏನಿಲ್ಲಾಂದರೂ ನಮ್ಮ ಕೈಯಿಂದ ಲಂಚ ಲಕ್ಷ ಕೈಬಿಡತಿತ್ತು. ಏನ್ ಸಾರ್ ಈ ಊರಲ್ಲಿ ಲಂಚ ಇರಲಿ ನಮಗೆ ಇಷ್ಟು ಸಹಾಯ ಮಾಡಿ, ನಮ್ಮನ್ನ ಹೊಟೆಲ್ ತನಕ ಬಿಟ್ಟಿ ಬಿಟ್ಟು ಹೋದರಲ್ಲಾ? ಹ್ಯಾಟ್ಸ್ ಆಫ್ ಟು ದೆಮ್ ಸಾರ್. ನಮ್ಮ ಗುಂಪಿನಲ್ಲಿ ಇದ್ದ ಒಬ್ಬರೇ ಹೆಂಗಸು ಅಂದರೆ ಸಾರಿಕಾ ಗೋಡ್ಕಿಂಡಿ ಅವರು. ಅವರು ಹೇಳಿದ್ದು. ನಮ್ಮೂರಲ್ಲಿ ನಡು ರಾತ್ರೀಲಿ ಈ ರೀತಿ ಆಕ್ಸಿಡೆಂಟ್ ಆಗಿ ಪೋಲಿಸ್ನೋರು ಬಂದಿದ್ರೆ ನಮಗೆ ಆಕ್ಸಿಡೆಂಟ್ ಹೇಗಾಯ್ತು, ಯಾರ್ಗಾರು ಪೆಟ್ಟಾಗಿದಯಾ ಅಂತ ಕೇಳೋ ಬದ್ಲು ಕೇಳ್ತಾ ಇದ್ದಿದ್ದು 5 ಜನ ಗಂಡಸ್ರು ಒಂದು ಹೆಂಗಸು ಈ ರಾತ್ರಿ ಎಲ್ಲಿ ಹೋಗಿದ್ರಿ ಎಂದು.
ಕಲ್ಪನಾ ಅವರನ್ನು ಬಿಟ್ಟರೆ ಬಹುಶಃ ಎಲ್ಲರಿಗೂ ಮೊದಲ ಪ್ರವಾಸ. ಎಲ್ಲರಿಗೂ ಇರುವಂತೆ ಇವರಿಗೂ ಅಮೆರಿಕೆ ಹೀಗೆ ಇರುತ್ತೆ ಹಾಗೆ ಇರುತ್ತೆ ಎನ್ನುವ ಅನಿಸಿಕೆಗಳು. ಎಲ್ಲರಿಗೂ ನನ್ನ ಪರಿಚಯವೂ ಇಲ್ಲ. ನಾನು ಹೇಗೆ ಎನ್ನುವುದೂ ಗೊತ್ತಿಲ್ಲ. ನಾನು ಬೇರೆ ಇವರು ಅಮೆರಿಕ ಬಂದಿಳಿದಾಗ ಪ್ಯಾರಿಸ್ನಲ್ಲಿ ಇದ್ದೆ. ಎಲ್ಲರೂ ಅಂದು ಕೊಂಡಿದ್ದರಬೇಕು ಇವನೆಂತ ಆರ್ಗನೈಸರ್, ನಾವು ಅಮೆರಿಕೆ ಬಂದಿದ್ದರೆ ಪ್ಯಾರಿಸ್ಗೆ ಹೋಗಿದ್ದಾನೆ ಅಂತ. ಅದೃಷ್ಟದಿಂದ ಕಲ್ಪನಾ ಒಂದು ಬಾರಿ ಬಂದು ಹೋದವಳು. ಅವಳಿಗೆ ನನ್ನ ವ್ಯವಸ್ಥೆಗಳು ಹೇಗಿರುತ್ತದೆ ಎನ್ನುವುದೂ ಗೊತ್ತಿತ್ತು. ಅವಳೇ ಇವರೆಲ್ಲರಿಗೂ ಸಮಾಧಾನ ಮಾಡುತ್ತಿದ್ದಳಂತೆ. ಆದರೂ ಇವರು ಇಳಿದುಕೊಳ್ಳುತ್ತಿದ್ದ ಮನೆಗಳಲ್ಲಿ ಇವರು ಸಿಗುತ್ತಿದ್ದ ಆತಿಥ್ಯ, ಗೌರವ, ಪ್ರೀತಿ ನೋಡಿ ತಮ್ಮ ಬಂದಿಳಿದಾಗ ಅನಿಸಿಕೆಗಳೇ ಬದಲಾಗಿ ನೂರಾರು ಸ್ನೇಹಿತರುಗಳ ಆತಿಥ್ಯವನ್ನು ಸ್ವೀಕರಿಸಿ, ಸ್ನೇಹವನ್ನು ಪಡೆದು ಇನ್ನೊಮ್ಮೆ ಬರುವುದಾಗಿ ಹೇಳಿ ಹೊರಟಾಗ ಬಹು ದೂರ ಹೋಗುತ್ತಿದ್ದಾರಲ್ಲಾ ಎಂದೆನಿಸಿತು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications