ಹೆಲಿಕಾಫ್ಟರ್ ಕ್ಯಾಬ್ ಸೇವೆ ಆರಂಭಿಸಿದ ಊಬರ್
ವಾಷಿಂಗ್ಟಂನ್, ಅಕ್ಟೋಬರ್ 05: ವಿಶ್ವದ ಅತಿದೊಡ್ಡ ಟ್ಯಾಕ್ಸಿ ಸೇವೆ ಸಂಸ್ಥೆ ಊಬರ್ ನೆಲದ ಮೇಲಿನ ತಮ್ಮ ಸೇವೆಯನ್ನು ಆಕಾಶಕ್ಕೂ ವಿಸ್ತರಿಸಿದೆ.
ಕಾರು ಟ್ಯಾಕ್ಸಿ ಸೇವೆಗೆ ಜನಪ್ರಿಯವಾಗಿರುವ ಊಬರ್ ಈಗ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಯನ್ನೂ ಪ್ರಾರಂಭಿಸಿದೆ. ಆದರೆ ಈ ಹೆಲಿಕಾಫ್ಟರ್ ಊಬರ್ ಸೇವೆಯನ್ನು ಬಳಸಲು ನೀವು ಅಮೆರಿಕದ ಮ್ಯಾನ್ಹಟನ್ಗೆ ಹೋಗಬೇಕಷ್ಟೆ!
ಹೌದು ಪ್ರಸ್ತುತ ಈ ಹೆಲಿಕಾಫ್ಟರ್ ಟ್ಯಾಕ್ಸಿ ಸೇವೆಯನ್ನು ಅಮೆರಿಕದಲ್ಲಿ ಮಾತ್ರವೇ ಪ್ರಾರಂಭಿಸಲಾಗಿದ್ದು, ಮ್ಯಾನ್ಹಟನ್ ನಲ್ಲಿ ಊಬರ್ನ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆ ಲಭ್ಯವಿದೆ. ಸೇವೆ ಪ್ರಾರಂಭವಾಗಿ ಕೆಲವು ದಿನಗಳು ಈಗಾಗಲೇ ಕಳೆದಿವೆ.

ಈ ಮೊದಲು ಕೆಲವು ಆಯ್ದ ಗ್ರಾಹಕರಿಗಷ್ಟೆ ಹೆಲಿಕಾಫ್ಟರ್ ಟ್ಯಾಕ್ಸಿ ಸೇವೆಯನ್ನು ಅಮೆರಿಕದಲ್ಲಿ ಊಬರ್ ನೀಡುತ್ತಿತ್ತು, ಆದರೆ ಗುರುವಾರದಿಂದ ಆ ಸೇವೆಯನ್ನು ಅಮೆರಿಕದ ಎಲ್ಲ ಗ್ರಾಹಕರಿಗೂ ಮುಕ್ತ ಮಾಡಲಾಗಿದೆ. ಹೆಲಿಕಾಫ್ಟರ್ ಟ್ಯಾಕ್ಸಿ ಬಳಸಲಿಚ್ಛಿಸುವ, ಜೇಬಿನಲ್ಲಿ ದುಡ್ಡು ಇರುವ ಯಾರು ಬೇಕಾದರೂ ಹೆಲಿಕಾಫ್ಟರ್ ಟ್ಯಾಕ್ಸಿ ಬುಕ್ ಮಾಡಬಹುದಾಗಿದೆ.
ಹೆಲಿಕಾಫ್ಟರ್ ಊಬರ್ ಟ್ಯಾಕ್ಸಿ ಬುಕ್ ಮಾಡಿದವರನ್ನು ಕಾರಿನಲ್ಲಿ ಮ್ಯಾನ್ಹಟನ್ಗೆ ಕರೆತಂದು ಅಲ್ಲಿಂದ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣಕ್ಕೆ ಕರೆತಂದು ಅಲ್ಲಿಂದ ಹೆಲಿಕಾಪ್ಟರ್ ಟ್ಯಾಕ್ಸಿಯಲ್ಲಿ ಕೂರಿಸಿ ಗಮ್ಯಕ್ಕೆ ಕರೆದುಕೊಂಡು ಹೋಗಲಾಗುತ್ತದೆ.
2023 ರ ವೇಳೆಗೆ ಏರ್ಟ್ಯಾಕ್ಸಿ ಸೇವೆಯಲ್ಲಿ ದೊಡ್ಡದಾಗಿ ವಿಸ್ತರಣೆ ಮಾಡುವ ಇಚ್ಛೆ ಊಬರ್ಗೆ ಇದೆ. ವಾಯುವಾನ ಆರಂಭಿಸಲು ಸಹ ಊಬರ್ ಚಿಂತಿಸಿದೆ.
-
ಕರ್ನಾಟಕ ದ್ವಿತೀಯ PUC ಫಲಿತಾಂಶಕ್ಕೆ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ: ಏಪ್ರಿಲ್ 8ಕ್ಕೂ ರಿಸಲ್ಟ್ ಬರೋದು ಡೌಟ್? -
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
Divorce Celebration: ಡಿವೋರ್ಸ್ ಪಡೆದ ಮಗಳಿಗೆ ಸಿಹಿ ತಿನ್ನಿಸಿ ಅದ್ದೂರಿ ಸ್ವಾಗತ: ತಂದೆಯ ಸಂಭ್ರಮಾಚರಣೆ ವಿಡಿಯೋ ವೈರಲ್ -
Gold Rate April 7: ಚಿನ್ನ - ಬೆಳ್ಳಿ ಬೆಲೆ ಸತತ 3ನೇ ದಿನವೂ ಇಳಿಕೆ; ಚಿನ್ನ ಪ್ರಿಯರಿಗೆ ಗುಡ್ನ್ಯೂಸ್ -
Viral Video: ಆರ್ಸಿಬಿ Vs ಸಿಎಸ್ಕೆ ಪಂದ್ಯ; ಕರ್ನಾಟಕ Vs ತಮಿಳುನಾಡು ಮಾಡಬೇಡಿ ಎಂದ ಸಿಎಸ್ಕೆ ಫ್ಯಾನ್ -
Viral Video: ನಾಳೆಯೇ ನಿಮ್ಮ ಕೆಲಸ ಹೋದರೆ ಏನು ಮಾಡುವಿರಿ? ಮಾಜಿ ಗೂಗಲ್ ಉದ್ಯೋಗಿಯ ಪ್ರಶ್ನೆಗೆ ದಂಗಾದ ನೆಟ್ಟಿಗರು -
Karnataka Rain Updates: ಚಂಡಮಾರುತ ಪ್ರಸರಣ ಪ್ರಭಾವ: ಬೆಂಗಳೂರು ಸೇರಿ ಕರ್ನಾಟಕದ 8 ಜಿಲ್ಲೆಗಳಲ್ಲಿ 3ದಿನ ಮಳೆ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
April 7 Horoscope: ಸ್ಪರ್ಧೆಯಲ್ಲಿ ಜಯ ಮತ್ತು ಹೊಸ ಉದ್ಯೋಗ ಅವಕಾಶಗಳು -
Job Resignation: ಇರೋ ಕೆಲಸಕ್ಕೆ ರಾಜೀನಾಮೆ ಕೊಡುವ ಮೊದಲು ಕೇಳಿಕೊಳ್ಳಬೇಕಾದ 17 ಪ್ರಶ್ನೆಗಳಿವು -
KSRTC: ಕನಕಪುರ-ಬೆಂಗಳೂರು ಬಸ್ ಪ್ರಯಾಣಿಕರಿಗೆ ಶುಭ ಸುದ್ದಿ, 20 ವರ್ಷದ ಬಳಿಕ 4 ಬಸ್ ಸಂಚಾರ -
ಪತಿ ವಿಜಯ್ ದೇವರಕೊಂಡ ಜೊತೆ ಮೊದಲ ಬಾರಿಗೆ ತವರಿಗೆ ಬಂದ ರಶ್ಮಿಕಾ: ತಂದೆಯಿಂದ ಐಷಾರಾಮಿ ಬಂಗಲೆ ಉಡುಗೊರೆ












Click it and Unblock the Notifications