ವಿಚ್ಛೇದಿತ ಪತ್ನಿಗೆ ಅಮೆಜಾನ್ ಸಂಸ್ಥಾಪಕ ನೀಡುವ ಪರಿಹಾರ ಎಷ್ಟು ಗೊತ್ತೇ?
ವಾಷಿಂಗ್ಟನ್, ಜುಲೈ 2: ಅಮೆಜಾನ್ನ ಸಂಸ್ಥಾಪಕ, ದೇಶದ ಅತಿ ಶ್ರೀಮಂತರಲ್ಲಿ ಒಬ್ಬರಾದ ಜೆಫ್ ಬೆಜೋಸ್ ಅವರು ಪತ್ನಿ ಮೆಕೆಂಜಿ ಬೆಜೋಸ್ ಅವರೊಂದಿಗಿನ ದಾಂಪತ್ಯ ಬದುಕನ್ನು ಅಂತ್ಯಗೊಳಿಸುತ್ತಿದ್ದಾರೆ. ಈ ವಿಚ್ಛೇದನ ಜಗತ್ತಿನಲ್ಲಿ ಅತ್ಯಂತ ದುಬಾರಿ ಎನ್ನಲಾಗಿದೆ.
ಜೆಫ್ ಅವರು 26 ವರ್ಷದ ದಾಂಪತ್ಯದ ಬಳಿಕ ಮೆಕೆಂಜಿ ಅವರಿಂದ ಅಧಿಕೃತವಾಗಿ ಈ ವಾರ ದೂರಾಗಲಿದ್ದಾರೆ. ಈ ವಿಚ್ಛೇದನಕ್ಕೆ ಜೆಫ್ ತೆರಬೇಕಾಗಿರುವ ಪರಿಹಾರದ ಮೊತ್ತ ಬರೋಬ್ಬರಿ 38 ಬಿಲಿಯನ್ ಡಾಲರ್ (26,22,00,00,00,000.00 ರೂಪಾಯಿ!).
ಅಂತರ್ಜಾಲ ಶಾಪಿಂಗ್ನಲ್ಲಿ ಮುಂಚೂಣಿಯಲ್ಲಿರುವ ಅಮೆಜಾನ್ ಕಂಪೆನಿಯಲ್ಲಿ ಮೆಕೆಂಜಿ ಪರಿಹಾರದ ರೂಪವಾಗಿ ಶೇ 4ರಷ್ಟು ಪಾಲು ಪಡೆದುಕೊಳ್ಳಲಿದ್ದಾರೆ. ಈ ಒಪ್ಪಂದ ಹಾಗೂ ವಿಚ್ಛೇದನಕ್ಕೆ ನ್ಯಾಯಾಧೀಶರು ಈ ವಾರ ಅಧಿಕೃತ ಮುದ್ರೆ ಒತ್ತುವ ನಿರೀಕ್ಷೆಯಿದೆ.

1993ರಲ್ಲಿ ಈ ಜೋಡಿ ಮದುವೆಯಾಗಿತ್ತು. ಈ ವೇಳೆಗೆ ಜೆಫ್ ಅವರು ಇನ್ನೂ ಈ ದೈತ್ಯ ಅಮೆಜಾನ್ ಕಂಪೆನಿಯನ್ನು ಸ್ಥಾಪಿಸಿರಲಿಲ್ಲ. ಈ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ.
ವಿಚ್ಛೇದನ ಪಡೆದುಕೊಂಡ ಬಳಿಕ 49 ವರ್ಷದ ಮೆಕೆಂಜಿ ಜಗತ್ತಿನ ನಾಲ್ಕನೆಯ ಅತಿ ಶ್ರೀಮಂತ ಮಹಿಳೆ ಎಂದೆನಿಸಿಕೊಳ್ಳಲಿದ್ದಾರೆ. ತಮಗೆ ದೊರಕುವ ಪರಿಹಾರದ ಮೊತ್ತದಲ್ಲಿ ಕನಿಷ್ಠ ಅರ್ಧದಷ್ಟನ್ನು ಸಾಮಾಜಿಕ ಕಾರ್ಯಕ್ಕೆ ಬಳಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಆಗರ್ಭ ಶ್ರೀಮಂತರು ತಮ್ಮ ಆಸ್ತಿಯ ಅರ್ಧಕ್ಕೂ ಹೆಚ್ಚು ಭಾಗವನ್ನು ಪರೋಪಕಾರಿ ಕಾರ್ಯಗಳಿಗೆ ಬಳಸಲು ಉತ್ತೇಜನ ನೀಡುವ ಸಲುವಾಗಿ ವಾರೆನ್ ಬಫೆಟ್ ಮತ್ತು ಬಿಲ್ ಗೇಟ್ಸ್ ಅವರು ಸ್ಥಾಪಿಸಿರುವ 'ದಿ ಗಿವಿಂಗ್ ಪ್ಲೆಡ್ಜ್' ಸಂಸ್ಥೆಯ ವೆಬ್ಸೈಟ್ನಲ್ಲಿ ಭಾರಿ ಪ್ರಮಾಣದ ದಾನ ಮಾಡುವ ಉದ್ದೇಶವನ್ನು ಹಂಚಿಕೊಂಡಿದ್ದಾರೆ. ಸದ್ಯದಲ್ಲಿಯೇ ತಮ್ಮಿಂದ ದೂರವಾಗಲಿರುವ ಪತ್ನಿಯ ಈ ಕಾಳಜಿಯನ್ನು ಜೆಫ್ ಶ್ಲಾಘಿಸಿದ್ದಾರೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications