ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ವ್ಯಕ್ತಿಯಿಂದ ಆತಂಕದಲ್ಲಿದ್ದ ತೆಕ್ಕಟ್ಟೆ ಜನರೀಗ ರಿಲ್ಯಾಕ್ಸ್‌

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 01: ಕುಂದಾಪುರ ತಾಲೂಕಿನ ತೆಕ್ಕಟ್ಟೆ ನಿವಾಸಿಗಳು ಸದ್ಯ ನಿರಾಳರಾಗಿದ್ದಾರೆ. ಮೂರು ದಿನಗಳ ಮುನ್ನ ಕ್ವಾರಂಟೈನ್ ಗೊಳಗಾಗಿದ್ದ ತೆಕ್ಕಟ್ಟೆ ಪರಿಸರದ ಎಲ್ಲಾ 18 ಮಂದಿಯ ವರದಿ ನೆಗೆಟಿವ್ ಬಂದಿದೆ.

ಇವರೆಲ್ಲ ಮಂಡ್ಯ ಜಿಲ್ಲೆಯ ನಾಗಮಂಗಲದ ಪಾಸಿಟಿವ್ ವ್ಯಕ್ತಿಯ ಸಂಪರ್ಕಕ್ಕೆ ಬಂದವರಾಗಿದ್ದರು. ಮುಂಬೈನಿಂದ ಮಂಡ್ಯಕ್ಕೆ ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ರೋಗಿಯು ಈ ಪರಿಸರದ ಪೆಟ್ರೋಲ್ ಬಂಕ್ ನಲ್ಲಿ ಇಳಿದು ಅವಾಂತರ ಸೃಷ್ಟಿಸಿದ್ದ. ಹೀಗಾಗಿ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಮತ್ತು ಸಾಸ್ತಾನ ಟೋಲ್ ಗೇಟ್ ಸಿಬ್ಬಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಿ ಗಂಟಲ ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು.

Tekkatte 18 People Got Coronavirus Negative Report

 ಉಡುಪಿಗೆ ತೊಡಕಾದ ನಾಗಮಂಗಲ ಕೊರೊನಾ ಸೋಂಕಿತನ ಬಂಕ್ ಸ್ಟೇ ಉಡುಪಿಗೆ ತೊಡಕಾದ ನಾಗಮಂಗಲ ಕೊರೊನಾ ಸೋಂಕಿತನ ಬಂಕ್ ಸ್ಟೇ

ಕೊರೊನಾ ಸೋಂಕಿತ ಮಂಡ್ಯದ ವ್ಯಕ್ತಿ ಪೆಟ್ರೋಲ್ ಬಂಕ್ ನಲ್ಲಿ ಊಟ, ನಿದ್ದೆ, ಸ್ನಾನ ಮಾಡಿದ್ದ. ಮಾತ್ರವಲ್ಲ, ಸಾಸ್ತಾನ ಟೋಲ್ ಗೇಟ್ ಸಿಬ್ಬಂದಿ ಜೊತೆಗೂ ಸಂಪರ್ಕಕ್ಕೆ ಬಂದಿದ್ದ. ಈ ಘಟನೆಯ ನಂತರ ತೆಕ್ಕಟ್ಟೆಯ ಜನರಲ್ಲಿ ಆತಂಕ ಮನೆಮಾಡಿತ್ತು ಮತ್ತು ಇಲ್ಲಿನ ಪೆಟ್ರೋಲ್ ಬಂಕ್ ಅನ್ನೂ ಸೀಲ್ ಡೌನ್ ಮಾಡಲಾಗಿತ್ತು. ಸದ್ಯ ಎಲ್ಲರ ವರದಿಯೂ ನೆಗೆಟಿವ್ ಆಗಿದ್ದು, ತೆಕ್ಕಟ್ಟೆಯ ಜನ ನಿಟ್ಟುಸಿರು ಬಿಟ್ಟಿದ್ದಾರೆ.

English summary
Tekkatte, which was in fear of coronavirus after mandya based corona positive person contact, relaxed today. 18 People Got Coronavirus Negative Report
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X