ಕರಾವಳಿಯಲ್ಲಿ ವಿಶಿಷ್ಟ ಬಗೆಯ ಹೋಳಿ ಹಬ್ಬ ಆಚರಣೆ
ಉಡುಪಿ, ಮಾರ್ಚ್ 08: ಬೇರೆ ಕಡೆಗಳಲ್ಲಿ ಬಣ್ಣಗಳನ್ನು ಎರಚಿ ಹೋಳಿಯನ್ನು ಆಚರಿಸಿದರೆ ಕರಾವಳಿಯ ಮರಾಠಿ ನಾಯಕ ಮತ್ತು ಕುಡುಬಿ ಜನಾಂಗಗಳು ತಮ್ಮ ಬಗೆಬಗೆಯ ಉಡುಗೆ-ತೊಡುಗೆಯಿಂದಲೇ ಹೋಳಿ ಹಬ್ಬಕ್ಕೆ ಬಣ್ಣ ತುಂಬುತ್ತಿದ್ದಾರೆ.
ಉತ್ತರ ಭಾರತದಲ್ಲಿ ಬಣ್ಣಗಳನ್ನು ಎರಚಿ ಹೋಳಿ ಹಬ್ಬವನ್ನು ಆಚರಿಸಿದರೆ, ಕರಾವಳಿ ಭಾಗದಲ್ಲಿ ಬಗೆಬಗೆಯ ಬಣ್ಣದ ಬಟ್ಟೆಗಳನ್ನು ತೊಟ್ಟು ಮನಬಿಚ್ಚಿ ಕುಣಿಯುತ್ತ ಒಂದಷ್ಟು ಜನ ಹೋಳಿ ಆಚರಿಸುತ್ತಾರೆ.
ಉಡುಪಿಯಲ್ಲಿ ಮರಾಠಿ ನಾಯಕ ಸಮುದಾಯಕ್ಕೆ ಸೇರಿದ ಗಿರಿಜನರು, ಮಹಾರಾಷ್ಟ್ರದಿಂದ ಹೊರಟು ದಕ್ಷಿಣದ ಕಡೆಗೆ ವಲಸೆ ಬಂದವರು. ಹೋಳಿಯ ಹುಣ್ಣಿಮೆಯ ಸಂದರ್ಭ ಈ ಮರಾಠಿ ನಾಯಕ ಸಮುದಾಯದ ಉತ್ಸಾಹಿ ಯುವಕರು ಮನೆಯಲ್ಲಿರುವ ಬಣ್ಣ ಬಣ್ಣದ ಬಟ್ಟೆಯನ್ನು ತೊಟ್ಟುಕೊಂಡು ತಮ್ಮ ಕುಲದೇವಿ ಮಮ್ಮಾಯಿ ದೇವಸ್ಥಾನಕ್ಕೆ ಬರುತ್ತಾರೆ.

ಇಲ್ಲಿ ದೇವರಿಗೆ ತೆಂಗಿನಕಾಯಿಯನ್ನು ತೆಗೆದಿಟ್ಟು, ಬಳಿಕ ಊರಿನ ಪ್ರಮುಖ ಮನೆಗಳಿಗೆ ತೆರಳುತ್ತಾರೆ. ಗುಮ್ಮಟೆ ಮತ್ತು ಜಾಗಟೆಯನ್ನು ಬಡಿಯುತ್ತಾ ಲಯಬದ್ಧವಾಗಿ ಮಹಾಮಾಯಿ ದೇವಿಯ ಸ್ಥುತಿಯನ್ನು ಹಾಡುತ್ತಾರೆ. ಬಳಿಕ ಹೋಳಿಯ ಹಾಡನ್ನು ಹಾಡುತ್ತಾ ಕುಣಿಯುತ್ತಾರೆ. ಈ ಕುಣಿತವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬವಾಗಿದೆ.
ಹಾಡು, ಕುಣಿತ ಅಷ್ಟೇ ಅಲ್ಲದೆ ಈ ಹೋಳಿ ಆಚರಣೆಯಲ್ಲಿ ಧಾರ್ಮಿಕ ನಂಬಿಕೆಗಳು ಗಾಢವಾಗಿ ಹಾಸುಹೊಕ್ಕಾಗಿವೆ. ಹೋಳಿ ಕುಣಿತದ ತಂಡ ಮನೆಯ ಮುಂದೆ ಬರುತ್ತಿದ್ದಂತೆಯೇ ಮನೆಯ ಯಜಮಾನರು ಈ ತಂಡಕ್ಕೆ ಬೆಲ್ಲ, ನೀರು ನೀಡಿ ಉಪಚರಿಸುತ್ತಾರೆ.

ಮನೆಯಲ್ಲಿ ಮದುವೆಯಾಗದೇ ಇರುವವರು, ಮಕ್ಕಳು ಆಗದೇ ಇರುವವರು ಇದ್ದರೆ ಹೋಳಿ ತಂಡದ ಮುಖ್ಯಸ್ಥರಿಂದ ಪ್ರಾರ್ಥನೆ ಮಾಡಿಸುತ್ತಾರೆ. ಈ ರೀತಿ ಪ್ರಾರ್ಥನೆ ಮಾಡಿಸಿ ಅದೆಷ್ಟೋ ಕಡೆಗಳಲ್ಲಿ ದೇವಿಯ ಅನುಗ್ರಹದಿಂದ ಫಲ ಸಿಕ್ಕಿದೆ. ಹೀಗಾಗಿ ಹೋಳಿಯ ತಂಡಗಳು ಮನೆಗೆ ಬರುವುದೆಂದರೆ ಅದೊಂದು ರೀತಿ ಮನೆಗೆ ಅದೃಷ್ಟ ಎಂಬ ಭಾವನೆ ಇದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications