ಚಿತ್ರಗಳು: ಕಾರ್ಟೂನ್ ಲೋಕದೊಳಗೆ ಗಾಂಧಿ, ದೀಪಿಕಾ, ವಾಜಪೇಯಿ...
ಉಡುಪಿ, ನವೆಂಬರ್ 25: ಆಧುನಿಕ ಜಗತ್ತಿನಲ್ಲಿ ಒಂದು ವ್ಯವಸ್ಥೆಗೆ ಕನ್ನಡಿಯಾಗಿರುವುದಕ್ಕೆ ಹಲವಾರು ಮಾಧ್ಯಮಗಳಿವೆ. ಅದರಲ್ಲಿ, ವ್ಯವಸ್ಥೆಯನ್ನು ಗೇಲಿ ಮಾಡುವುದರ ಜೊತೆಜೊತೆಗೇ, ಹೇಳಬೇಕಾದ್ದನ್ನು ಪರಿಣಾಮಕಾರಿಯಾಗಿ ಮುಟ್ಟಿಸುವ ಮಾಧ್ಯಮ ಕಾರ್ಟೂನ್. ಹಲವು ಕಾರ್ಟೂನಿಸ್ಟ್ ಗಳನ್ನು ಹುಟ್ಟು ಹಾಕಿದ ಕುಂದಾಪುರ ತಾಲೂಕಿನಲ್ಲಿ ಇದೀಗ ಆರನೇ ಕಾರ್ಟೂನ್ ಹಬ್ಬ ಆರಂಭಗೊಂಡಿದೆ.
ಗಾಂಧೀಜಿ ಅವರ 150ನೇ ವರ್ಷಾಚರಣೆ ಅಂಗವಾಗಿ "ರಾಮ ಅಲ್ಲಾ ತೇರೋ ನಾಮ್" ಶೀರ್ಷಿಕೆಯಡಿ ಆರಂಭಗೊಂಡ ಕಾರ್ಟೂನ್ ಹಬ್ಬ ಸದ್ಯ ಕುಂದಾಪುರದಲ್ಲಿ ಕೇಂದ್ರ ಬಿಂದುವಾಗಿದೆ.

ಕುಂದಾಪುರದ ಕಾರ್ಟೂನ್ ಗೆಳೆಯರು ಕುಂದೇಶ್ವರ ಲಕ್ಷದೀಪೋತ್ಸವ ಅಂಗವಾಗಿ ಆರನೇ ಕಾರ್ಟೂನ್ ಹಬ್ಬವನ್ನು ಹಮ್ಮಿಕೊಂಡಿದ್ದಾರೆ. ಕಾರ್ಟೂನ್ ಹಬ್ಬದಲ್ಲಿ ರಾಜ್ಯದ ವಿವಿಧ ವ್ಯಂಗ್ಯಚಿತ್ರಕಾರರು ಬಿಡಿಸಿದ ವ್ಯಂಗ್ಯಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಅಟಲ್ ಬಿಹಾರಿ ವಾಜಪೇಯಿ, ಪೂಜೆಯಲ್ಲಿರುವ ರಾಗಾ, ಎಪಿಜೆ ಅಬ್ದಲ್ ಕಲಾಂ ಅವರು ವೀಣೆ ಹಿಡಿದ ಭಂಗಿ, ನಟಿ ದೀಪಿಕಾ ಪಡುಕೋಣೆ ಎದುರು ರಣವೀರ್ ಸಿಂಗ್ ಗುಲಾಬಿ ಗೊಂಚಲು ಹಿಡಿದು ಪ್ರೇಮ ಭಿಕ್ಷೆ ಬೇಡುವ ಭಂಗಿ, ಬಂಡೆ ಮೇಲೆ ಪಿಎಂ ಮೋದಿ ಫಿಟ್ನೆಸ್ ಚಾಲೆಂಜ್.... ಹೀಗೆ ಅನೇಕ ಕಾರ್ಟೂನ್ ಗಳು ಗಮನ ಸೆಳೆಯುತ್ತಿವೆ.

ಕುಂದಾಪುರ ವ್ಯಂಗ್ಯಚಿತ್ರಕಾರ ಸತೀಶ್ ನೇತೃತ್ವದಲ್ಲಿ ಕಾರ್ಟೂನ್ ಹಬ್ಬ ನಡೆಯುತ್ತಿದೆ. ಕಾರ್ಟೂನ್ ಹಬ್ಬದ ಆಯೋಜಕರು ಕ್ಯಾರಿಕೇಚರ್ ಸ್ಪರ್ಧೆ ಮೂಲಕ ವಿವಿಧ ಶಾಲೆಗಳ ಬಡ ಮಕ್ಕಳಿಗೆ ದೇಣಿಗೆ ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಚುನಾವಣಾ ಆಯೋಗದಲ್ಲಿ ಬದಲಾವಣೆ ತಂದ ಶೇಷನ್ ಅವರ ಕ್ಯಾರಿಕೇಚರ್ ರಚನಾ ಸ್ಪರ್ಧೆಯನ್ನು ಈ ಬಾರಿ ಆಯೋಜಿಸಿದ್ದು ವಿಶೇಷವಾಗಿತ್ತು. ಕಳೆದ 10 ವರ್ಷಗಳಿಂದ ಆಮೆ ನಡಿಗೆಯಲ್ಲಿರುವ ಕುಂದಾಪುರ ಫ್ಲೈ ಓವರ್ ಕಾಮಗಾರಿಯನ್ನು ಅಣಕಿಸುವ ಕಾರ್ಟೂನ್ ಕೂಡ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿತ್ತು.

ಕುಂದಾಪುರ ತಾಲೂಕಿನ ಜೂನಿಯರ್ ಕಾಲೇಜಿನ ಕಲಾ ಮಂದಿರದಲ್ಲಿ 4 ದಿನಗಳ ಕಾಲ ನಡೆಯುತ್ತಿರುವ ಕಾರ್ಟೂನ್ ಹಬ್ಬದಲ್ಲಿ ನೂರಾರು ಕಾರ್ಟೂನ್ ಗಳು ಕಣ್ಣಿಗೆ ಹಬ್ಬ ನೀಡುತ್ತಿವೆ. ನವೆಂಬರ್ 23ರಿಂದ ಆರಂಭವಾಗಿರುವ ಈ ಪ್ರದರ್ಶನ ನವೆಂಬರ್ 26ರವರೆಗೂ ಮುಂದುವರೆಯಲಿದೆ.

-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications